
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪ್ರತಿಮಾ ಮಂಗಳೂರು ವಿವಿ ನಡೆಸಿದ ಬಿಎ ಪರೀಕ್ಷೆಯಲ್ಲಿ ಐದನೇ ರ್ಯಾಂಕ್ ಗಳಿಸಿದ್ದಾರೆ.

























ಸಾಹಿತ್ಯದಿಂದ ಉತ್ತಮ ವಾತಾವರಣ- ಕೋಟ ಶ್ರೀನಿವಾಸ ಪೂಜಾರಿ
ಕಿನ್ನಿಗೋಳಿ : ಸಾಹಿತ್ಯದಿಂದ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಓದುವಿಕೆ ಎಲ್ಲರ ಹವ್ಯಾಸವಾಗಬೇಕು. ಸಾಹಿತ್ಯ ರಚಿಸಿದ ಎಷ್ಟೋ ಬರಹಗಾರರು ಆರ್ಥೀಕವಾಗಿ ಶ್ರೀಮಂತರಾಗಿರುವುದಿಲ್ಲ. ಅಥವಾ ಅವರನ್ನು ಪ್ರೋತ್ಸಾಹಿಸುವವರಿರುವುದಿಲ್ಲ. ಈ ಹಿನ್ನಲೆಯಲ್ಲಿ ಸಾಹಿತಿಗಳನ್ನು ಬೆಂಬಲಿಸುವ ಕಾರ್ಯ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಗುರುವಾರ ಸಂಜೆ ಕಿನಿಗೋಳಿಯ ನೇಕಾರ ಸೌಧದಲ್ಲಿ ನಡೆದ ಅನಂತ ಪ್ರಕಾಶ ಸಂಸ್ಥೆಯ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ ಎಂಟು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಡಾ.ವಿಶ್ವನಾಥ ಕಾರ್ನಾಡರ ಸಾಹಿತ್ಯ ಲೇಖನಗಳ ಸ್ಪಂದನ, ಕೆ.ಜಿ.ಭದ್ರಣ್ಣವರ ಹನಿಗವನ ಭಂಡಾರ, ಸೂರ್ಯನಾರಾಯಣ ರಾವ್ರ ಕೋಟಿ ಚೆನ್ನಯ ನಾಟಕ, ಮಸುಮರ ನಾಟಕ ಹಬಾಶಿಕಾ, ಕವನ ಸಂಕಲನ ಮಕರಂದ, ವಿಶ್ವಂಭರ ಉಪಾಧ್ಯಾಯರ ನಾಗನೂಪುರ, ಅರ್ಪಿತಾರ ಮಳೆಬಿಲ್ಲು, ಕೆ.ಜಿ.ಸುಪ್ರದಾ ರಾವ್ರ ಕವನ ಸಂಕಲನ ನಾಡು ಹಾಡು ಬಿಡುಗೊಳಿಸಲಾಯಿತು.
ಉಮೇಶ್ ರಾವ್ ಎಕ್ಕಾರು, ಉಪೇಂದ್ರ ಸೋಮಯಾಜಿ ಮತ್ತಿತರರಿದ್ದರು. ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಸ್ವಾಗತಿಸಿದರು. ಗಾಯತ್ರೀ ಉಡುಪ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಿಡ್ಲೆ ಮಹಾಗಣಪತಿ ಮಂಡಳಿಯವರಿಂದ ಹರಿದರ್ಶನ ಯಕ್ಷಗಾನ ಜರಗಿತು.




ಕಟೀಲು: ಮಕ್ಕಳಿಗೆ ಮೊಬೈಲು ಕೊಡಬೇಡಿ. ಮಕ್ಕಳು ಸರಿಯಾಗಿ ಕಾಲೇಜಿಗೇ ಹೋಗುತ್ತಾರಾ? ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರಾ ಇತ್ಯಾದಿ ವಿಚಾರಗಳನ್ನು ಗಮನಿಸಬೇಕು. ಕೇವಲ ಕಾಲೇಜಿಗೆ ಕಳುಹಿಸಿದಾಕ್ಷಣ ಹೆತ್ತವರ ಜವಾಬ್ದಾರಿ ಮುಗಿಯುದಿಲ್ಲ. ಮಕ್ಕಳನ್ನು ಗಮನಿಸದಿದ್ದರೆ ಅವರು ಹಾದಿ ತಪ್ಪುವ ಸಾಧ್ಯತೆಯೇ ಹೆಚ್ಚು ಎಂದು ವಿಜಯ ಕಾಲೇಜಿನ ಪ್ರಾಚಾರ್ಯ ಶಂಕರ್ ಹೇಳಿದರು.
ಕಟೀಲು ದೇಗುಲದಲ್ಲಿ ನವರಾತ್ರಿಯ ಪ್ರಯುಕ್ತ ವಿಶೇಷ ಚಂಡಿಕಾಹೋಮ ನಡೆಯಿತು.
ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿಯ ಲಲಿತಾ ಪಂಚಮಿಯ ದಿನವಾದ ಶನಿವಾರ ಸುಮಾರು 18ಸಾವಿರಕ್ಕೂ ಹೆಚ್ಚು ಹುಡುಗಿಯರು, ಮಹಿಳೆಯರಿಗೆ ಶ್ರೀ ದೇವೀಯ ಶೇಷವಸ್ತ್ರಗಳನ್ನು(ಸೀರೆಗಳನ್ನು) ಪ್ರಸಾದ ರೂಪವಾಗಿ ವಿತರಿಸಲಾಯಿತು.