Saturday, October 1, 2011

ಮಕ್ಕಳಿಗೆ ಮೊಬೈಲು ಕೊಡಬೇಡಿ- ಪ್ರೊ.ಶಂಕರ್.


ಕಟೀಲು: ಮಕ್ಕಳಿಗೆ ಮೊಬೈಲು ಕೊಡಬೇಡಿ. ಮಕ್ಕಳು ಸರಿಯಾಗಿ ಕಾಲೇಜಿಗೇ ಹೋಗುತ್ತಾರಾ? ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರಾ ಇತ್ಯಾದಿ ವಿಚಾರಗಳನ್ನು ಗಮನಿಸಬೇಕು. ಕೇವಲ ಕಾಲೇಜಿಗೆ ಕಳುಹಿಸಿದಾಕ್ಷಣ ಹೆತ್ತವರ ಜವಾಬ್ದಾರಿ ಮುಗಿಯುದಿಲ್ಲ. ಮಕ್ಕಳನ್ನು ಗಮನಿಸದಿದ್ದರೆ ಅವರು ಹಾದಿ ತಪ್ಪುವ ಸಾಧ್ಯತೆಯೇ ಹೆಚ್ಚು ಎಂದು ವಿಜಯ ಕಾಲೇಜಿನ ಪ್ರಾಚಾರ‍್ಯ ಶಂಕರ್ ಹೇಳಿದರು.
ಅವರು ಕಟೀಲು ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಶನಿವಾರ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯಲ್ಲಿ ಮಾತನಾಡಿದರು.
ಪ್ರಾಚಾರ‍್ಯ ಜಯರಾಮ ಪೂಂಜ, ಶಿಕ್ಷಕ ರಕ್ಷಕ ಸಂಘದ ಎಕ್ಕಾರು ಮೋನಪ್ಪ ಶೆಟ್ಟಿ, ವನಿತಾ ಜೋಷಿ, ರಾಘವೇಂದ್ರ ಭಟ್, ಶಶಾಂಕ ಆರ್.ಕೋಟ್ಯಾನ್, ಮಧುಸೂಧನ್ ಮತ್ತಿತರರಿದ್ದರು.

No comments:

Post a Comment