Thursday, October 6, 2011

ಕಟೀಲು ದೇಗುಲದ ನೂತನ ಧ್ವಜಸ್ತಂಭಕ್ಕೆ ಮರದ ಕೊಡುಗೆ


ಕಟೀಲು : ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದ ನೂತನ ಧ್ವಜಸ್ತಂಭಕ್ಕೆ ಕಟೀಲಿನ ಹರಿಶ್ಚಂದ್ರ ರಾಯರ ಮಕ್ಕಳು ಕೊಡುಗೆಯಾಗಿ ನೀಡಿದ ತೇಗದ ಮರವನ್ನು ಗುರುವಾರ ಶಾಸ್ತ್ರೀಯವಾಗಿ ದೇವರಿಗೆ ಬಿಟ್ಟುಕೊಡಲಾಯಿತು.
ಸುಮಾರು ಐವತ್ತು ಅಡಿ ಎತ್ತರದ ಮರಕ್ಕೆ ಶ್ರೀ ದೇವರ ಪ್ರಸಾದ ಹಾಕುವ ಮೂಲಕ ಮರದ ಸ್ವೀಕಾರ ಕಾರ‍್ಯ ನಡೆಯಿತು. ಈ ಸಂದರ್ಭ ದಾನಿಗಳಾದ ಪ್ರಭಾಕರ ರಾವ್ ದಂಪತಿಗಳು, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಸಂಜೀವನಿ ಟ್ರಸ್ಟ್‌ನ ಡಾ.ಸುರೇಶ್ ರಾವ್, ರಾಮಣ್ಣ ಶೆಟ್ಟಿ, ಎಕ್ಕಾರು ಹರೀಶ್ ಶೆಟ್ಟಿ ಮತ್ತಿತರರಿದ್ದರು.
ನೂತನ ಧ್ವಜ ಸ್ತಂಭಕ್ಕೆ ಸುಮಾರು ನಾಲ್ಕು ಕೆಜಿ ಬಂಗಾರದ ಲ್ಯಾಮಿನೇಟೆಡ್ ಮುಚ್ಚಿಗೆ ಹಾಕುವ ಯೋಜನೆಯಿದ್ದು, ಎರಡು ವರ್ಷಗಳ ಒಳಗೆ ನೂತನ ಧ್ವಜಸ್ತಂಭ ಆಗುವ ಅಂದಾಜಿದೆ ಎಂದು ಅರ್ಚಕ ಅನಂತ ಆಸ್ರಣ್ಣ ತಿಳಿಸಿದ್ದಾರೆ.

No comments:

Post a Comment