Monday, September 24, 2012

ವಿಜಯಾ ಬ್ಯಾಂಕಿನಿಂದ ಉಳಿತಾಯ ಖಾತೆ ಅಭಿಯಾನ

ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂಔ ಕಾಲೇಜಿನಲ್ಲಿ ವಿಜಯಾ ಬ್ಯಾಂಕಿನಿಂದ ಉಳಿತಾಯ ಖಾತೆ ಅಭಿಯಾನ ನಡೆಯಿತು. ಉದ್ಘಾಟನೆಯನ್ನು ಎಜಿಎಂ ನಾಗರಾಜ ಕೆದಿಲಾಯ ನೆರವೇರಿಸಿದರು. ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಪ್ರಮೋದ್ ಕಾಮತ್, ಲೋಕೇಶ್, ಪ್ರಾಚಾರ್ಯ ಜಯರಾಮ ಪೂಂಜ, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರಿದ್ದರು. 

ಕಟೀಲಿನಲ್ಲಿ ರಕ್ತದಾನ ಶಿಬಿರ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರವನ್ನು ಬಜಪೆ ಪೋಲೀಸ್ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ, ಕಟೀಲಿನ ಅರ್ಚಕ ಕಮಲಾದೇವೀಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಜಿ.ಪಂ.ಶಿಕ್ಷಣ ಆರೋಗ್ಯ ಸಮಿತಿಯ ಈಶ್ವರ ಕಟೀಲ್, ಕ್ಷೇತ್ರ ಬಿಜೆಪಿ ಕಾರ‍್ಯದರ್ಶಿ ಆದರ್ಶ ಶೆಟ್ಟಿ, ಕೇಶವ್, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಅರುಣ್, ಎಕ್ಕಾರು ಗ್ರಾ.ಪಂ. ಸದಸ್ಯ ಚಂದ್ರಹಾಸ್, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.
ಕೆ.ಎಂ.ಸಿ ಆಸ್ಪತ್ರೆ, ವೆನ್‌ಲಾಕ್ ಆಸ್ಪತ್ರೆಗಳ ಸಹಯೋಗದಲ್ಲಿ ರಾಜರತ್ನಪುರ ವೀರಮಾರುತಿ ವ್ಯಾಯಾಮ ಶಾಲೆ, ಕಟೀಲು ಪ್ರೌಢಶಾಲೆ ಹಳೆವಿದ್ಯಾರ್ಥಿ ಸಂಘ, ನಂದಿನಿ ಯುವಕ ವೃಂದ, ಎಕ್ಕಾರು ವಿಜಯ ಯುವ ಸಂಗಮ, ಕಟೀಲ್ ಫ್ರೆಂಡ್ಸ್, ದೇವರಗುಡ್ಡೆ ಕ್ಲಬ್, ಕಟೀಲ್ ಸ್ಪೋರ್ಟ್ಸ್ ಕ್ಲಬ್, ದುರ್ಗಾಂಬಿಕಾ ಯುವಕ ಮಂಡಲ ಮತ್ತಿತರ ಸಂಘಗಳ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ೬೫ ಮಂದಿ ರಕ್ತದಾನ ಮಾಡಿದರು.

Saturday, September 22, 2012

ಕಟೀಲು ಕಾಲೇಜಿನಲ್ಲಿ ಕಂಪ್ಯೂಟರ್ ಕೇಂದ್ರ ಉದ್ಘಾಟನೆ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಆರ್‌ಪಿಎಲ್ ರೂ.ಹತ್ತು ಲಕ್ಷ ರೂ.ನಲ್ಲಿ ಕೊಡುಗೆಯಾಗಿ ನೀಡಿದ ೨೦ಕಂಪ್ಯೂಟರ್‌ಗಳುಳ್ಳ ಕಂಪ್ಯೂಟರ್ ಕೇಂದ್ರವನ್ನು ಶನಿವಾರ ಉದ್ಘಾಟಿಸಲಾಯಿತು. ಎಂಆರ್‌ಪಿಎಲ್‌ನ ಮಹಾ ಪ್ರಬಂಧಕರಾದ ಸಂಜಯ್ ದೀಕ್ಷಿತ್, ಯತಿರಾಜ್ ಸಾಲ್ಯಾನ್, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಾಚಾರ‍್ಯ ಎಂ. ಬಾಲಕೃಷ್ಣ ಶೆಟ್ಟಿ, ಜಿ.ಪಂ.ಸದಸ್ಯ ಈಶ್ವರ್  ಮತ್ತಿತರರಿದ್ದರು.

ಕೃಷಿ ಋಷಿ ಪ್ರಶಸ್ತಿ


ಕಟೀಲು : ಇಲ್ಲಿನ ಕಲಾದೇಗುಲ ಹಾಗೂ ಚಂದ್ರಕಾಂತ ಸೇವಾಶ್ರಮದ ವತಿಯಿಂದ ಕೃಷಿ ಋಷಿ ಪ್ರಶಸ್ತಿಯನ್ನು ಕೃಷ್ಣಪ್ಪ ಪೂಜಾರಿ ಮತ್ತು ರುಕ್ಕು ಪೂಜಾರ‍್ತಿಯವರಿಗೆ ನೀಡಿ ಗೌರವಿಸಲಾಯಿತು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಸಿಂಡಿಕೇಟ್ ಬ್ಯಾಂಕಿನ ಮಂಜುನಾಥ ಮಲ್ಯ, ಸಾಹಿತಿ ಉಮೇಶ ರಾವ್ ಎಕ್ಕಾರು, ದೇವಿಪ್ರಸಾದ್ ಶೆಟ್ಟಿ, ಸಂಘಟಕ ಚಂದ್ರಕಾಂತ ನಾಯಕ್ ಉಪಸ್ಥಿತರಿದ್ದರು.

Tuesday, September 11, 2012

ಕಟೀಲು ಕಾಲೇಜು :ಮುಜರಾಯಿಗೆ ಬೇಡ, ಶಿಕ್ಷಣಕ್ಕೆ ತನ್ನಿ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ನಡೆಸುವ ಪ್ರಥಮ ದರ್ಜೆ ಕಾಲೇಜು ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ನಡೆಸುವ ಕಾಲೇಜುಗಳೆರಡು ಮಾತ್ರ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತಿದ್ದು, ಕಾಲೇಜಿನ ಅಭಿವೃದ್ದಿಗೆ ತೊಡಕಾಗಿದೆ. ಹಾಗಾಗಿ ಕಟೀಲು ಕಾಲೇಜನ್ನು ಉನ್ನತ ಶಿಕ್ಷಣ ಇಲಾಖೆಯಡಿ ತಂದು ಉಪನ್ಯಾಸಕರಿಗೆ ಯುಜಿಸಿ ಸೇರಿದಂತೆ ಕಾಲೇಜಿಗೆ ಎಲ್ಲ ಸವಲತ್ತು ಪಡೆಯುವ ಅವಕಾಶ ಕಲ್ಪಿಸಿ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿಗೆ ಮಂಗಳವಾರ ಕಟೀಲು ಪದವಿ ಕಾಲೇಜಿನಲ್ಲಿ ಉಪನ್ಯಾಸಕರು ಮನವಿ ಸಲ್ಲಿಸಿದರು.
ಶಿಕ್ಷಣಕ್ಕೆ ಸಂಬಂಧಿಸಿ ಧಾರ್ಮಿಕದತ್ತಿ ಇಲಾಖೆಯಲ್ಲಿ ಸರಿಯಾದ ನೀತಿ ನಿಯಮಗಳಿಲ್ಲದಿರುವುದರಿಂದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ತೊಡಕಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಸಮರ್ಪಕವಾಗಿ ನಡೆಸುವುದು ದೇಗುಲಕ್ಕೂ ಕಷ್ಟವಾಗುತ್ತಿದೆ. ಹಾಗಾಗಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನೂ ಶಿಕ್ಷಣ ಇಲಾಖೆಯಡಿ ತರಬೇಕು. ಈ ನಿಟ್ಟಿನಲ್ಲಿ ಮುಜರಾಯಿ ಸಚಿವರೂ ಕೂಡ ಕಾರ‍್ಯಪ್ರವೃತ್ತರಾಗಿದ್ದಾರೆ. ಶಿಕ್ಷಣ ಇಲಾಖೆ ಒಪ್ಪುವುದಷ್ಟೇ ಬಾಕಿಯಿದೆ ಎಂದು ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ ಸಚಿವರನ್ನು ವಿನಂತಿಸಿದರು.
ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ ಸಚಿವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶಿಕ್ಷಣ ಅಂದರೆ ಕೇವಲ ಸರ್ಟಿಫಿಕೇಟ್‌ಗಾಗಿ, ಪದವಿಗಾಗಿ, ಉದ್ಯೋಗಕ್ಕಾಗಿ ಇರುವುದಲ್ಲ. ಅರಿವಿಗಾಗಿ, ಜ್ಞಾನಕ್ಕಾಗಿ ಇರುವುದು. ಶಿಕ್ಷಣದಿಂದಷ್ಟೇ ಸಾಮಾಜಿಕ ಬದಲಾವಣೆ, ಆರ್ಥಿಕ ಸದೃಢತೆ ಸಾಧ್ಯ. ನಮ್ಮ ದೇಶದ ಮೇಲೆ ದಾಳಿ ಮಾಡಿದ ಅಲೆಕ್ಸಾಂಡರ್ ದಿ ಗ್ರೇಟ್ ಎಂದು ನಮ್ಮ ಮೇಲೆ ದಂಡೆತ್ತಿ ಬಂದವರನ್ನು ಹೊಗಳುವ ಪಾಠವನ್ನು ನಮಗೆ ಕಲಿಸಿಕೊಡಲಾಗುತ್ತಿದೆ. ಅರಣ್ಯ ಇಲಾಖೆ ಕಾಡಿನ ರಕ್ಷಣೆಯ ಕಾನೂನು ಮಾಡುವ ಮೊದಲೇ ದೇವರ ಕಾಡು ನಾಗಬನ ಅಂತ ಮರಗಳನ್ನು ರಕ್ಷಿಸುವ ಮೌಲ್ಯಯುತ ಪಾಠವನ್ನು ಕಲಿಸಿದ ನಾಡು ನಮ್ಮದು. ವಿಜ್ಞಾನ, ಶಿಲ್ಪ ಹೀಗೆ ಯಾವುದೇ ಕ್ಷೇತ್ರದಲ್ಲೂ ನಮ್ಮ ನಾಡಿನ ಸಾಧನೆ ಎಲ್ಲರಿಗಿಂತಲೂ ದೊಡ್ಡದು. ನಮ್ಮ ಇತಿಹಾಸದ ಪಾಠಗಳಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಘಟನೆಗಳನ್ನು ಕಲಿಸಬೇಕಾದ ಅಗತ್ಯವಿದೆ ಎಂದು ರವಿ ಹೇಳಿದರು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಮೋನಪ್ಪ ಭಂಡಾರಿ, ಜಿ.ಪಂ.ಸಿಇಒ ಡಾ.ವಿಜಯಪ್ರಕಾಶ್, ಜಿ.ಪಂ.ಸದಸ್ಯ ಈಶ್ವರ್ ಮತ್ತಿತರರಿದ್ದರು. ಉಪನ್ಯಾಸಕ ಸುರೇಶ್ ಕಾರ‍್ಯಕ್ರಮ ನಿರೂಪಿಸಿದರು. ಸೋಂದಾ ಭಾಸ್ಕರ ಭಟ್ ವಂದಿಸಿದರು.

Sunday, September 2, 2012

ಕಟೀಲು : ತುಳು ತಾಳಮದ್ದಲೆ ಸ್ಪರ್ಧೆ


ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇವಸ್ಥಾನ, ಕುರಲ್ ಇಷ್ಟೆರ್, ಎಕ್ಕಾರು ವಿಜಯ ಯುವ ಸಂಗಮ, ತುಳು ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ಒಂದು ವಾರಗಳ ಕಾಲ ನಡೆದ ತುಳು ತಾಳಮದ್ದಲೆ ಸಪ್ತಾಹ ಸಮಾರೋಪಗೊಂಡಿತು. ಸ್ಪರ್ಧೆಯಲ್ಲಿ ವಿಜೇತ ಕಣಂತೂರು ವೈದ್ಯನಾಥೇಶ್ವರ ಕೃಪಾಪೋಷಿತ ಸಂಘ(ಪ್ರಥಮ), ಕಟೀಲು ಯಕ್ಷಮೈತ್ರಿ(ದ್ವಿತೀಯ), ಪಡುಬಿದ್ರೆ ಗಜಾನನ ಯಕ್ಷರಂಗ(ತೃತೀಯ) ಇವರಿಗೆ ಪ್ರಶಸ್ತಿ ವಿತರಿಸಲಾಯಿತು.
ಶಾಸಕ ಅಭಯಚಂದ್ರ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ವಿಜಯನಾಥವಿಠಲ ಶೆಟ್ಟಿ, ಭಾಸ್ಕರ ದೇವಸ್ಯ, ಎಕ್ಕಾರು ಮೋನಪ್ಪ ಶೆಟ್ಟಿ, ಮಧುಸೂಧನ ಆಚಾರ‍್ಯ, ವಾಮನ ಕರ್ಕೇರ, ವಿ.ಕೆ.ಯಾದವ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ


ಕಟೀಲು : ಇಲ್ಲಿನ ದೇಗುಲದಲ್ಲಿ ಅರ್ಚಕರಾಗಿ, ಮೊಕ್ತೇಸರರಾಗಿ, ಜನಮಾನಸದಲ್ಲಿ ನೆಲೆಯಾಗಿರುವ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಕಾರ‍್ಯಕ್ರಮ ನಡೆಯಿತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಾಂಸದ ನಳಿನ್ ಕುಮಾರ್, ಜಿ.ಪಂ.ಸದಸ್ಯ ಈಶ್ವರ್, ಮುಂಬೈನ ಪ್ರಕಾಶ್ ಭಂಡಾರಿ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ವೆಂಕಟೇಶ ರಾವ್, ಲೀಲಾಕ್ಷ ಕರ್ಕೇರ, ದೇವಪ್ರಸಾದ್, ಪಿ.ಸತೀಶ್ ರಾವ್ ಭುವನಾಭಿರಾಮ ಉಡುಪ, ಸಂಘಟಕ ಲಕ್ಷ್ಮೀನಾರಾಯಣ ಆಸ್ರಣ್ಣ ಮುಂತಾದವರಿದ್ದರು.
ಕುಳಾಯಿ ವಿಷ್ಣುಮೂರ್ತಿ ದೇಗುಲದ ಕೃಷ್ಣ ಹೆಬ್ಬಾರ್, ಕಾವೂರು ಮಹಾಲಿಂಗೇಶ್ವರ ದೇಗುಲದ ಶ್ರೀನಿವಾಸ ಭಟ್‌ರನ್ನು ಸಂಮಾನಿಸಲಾಯಿತು. ಸಂಪಾಜೆ ಶೀನಪ್ಪ ರೈ, ಸೀತಾರಾಮ ಕುಮಾರ್‌ರಿಗೆ ಆಸ್ರಣ್ಣ ಪ್ರಶಸ್ತಿ ನೀಡಲಾಯಿತು.