Friday, May 27, 2011

ಯಕ್ಷಗಾನ ತಿರುಗಾಟ ಮುಕ್ತಾಯ





ಕಟೀಲು ಐದು ಯಕ್ಷಗಾನ ಮೇಳಗಳ ಈ ವರುಷದ ತಿರುಗಾಟ ತಾ.26ರಂದು ಕೊನೆಗೊಂಡಿತು.




Monday, May 23, 2011

ಕಟೀಲು ಕುದ್ರು ಜೀರ್ಣೋದ್ಧಾರಕ್ಕೆ ಸಂಕಲ್ಪ ಪ್ರಾರ್ಥನೆ





ಭ್ರಾಮರೀ ದುರ್ಗಾಪರಮೇಶ್ವರೀ ದೇವರ ಮೂಲ ಸ್ಥಾನ ಕುದ್ರುವಿನ ಜೀರ್ಣೋದ್ಧಾರ ಕಾರ‍್ಯಕ್ಕೆ ಭಾನುವಾರ ಸಂಕಲ್ಪ ಪ್ರಾರ್ಥನೆ ನಡೆಯಿತು.ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶಿಬರೂರು ಕೃಷ್ಣರಾಜ ತಂತ್ರಿ, ದೇಗುಲದ ಪ್ರಬಂಧಕ ವಿಶ್ವೇಶರ ರಾವ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.ಅಷ್ಟ ಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ನಂದಿನೀ ನದಿ ಮಧ್ಯೆದಲ್ಲಿರುವ ಕುದ್ರುವಿನಲ್ಲಿ ದೇವರ ಗರ್ಭಗುಡಿ, ಶಾಸ್ತಾರ, ನಾಗ, ಬ್ರಹ್ಮಸ್ಥಾನ, ಪಿಲಿಚಾಮುಂಡಿ ದೈವದ ಗುಡಿ, ಕೆರೆ, ತೀರ್ಥಬಾವಿಗಳನ್ನು ನಿರ್ಮಿಸಲಾಗುವುದು. ಅಲ್ಲದೆ ಸುತ್ತಲೂ ಯಾಜ್ಞಿಕ ವೃಕ್ಷಗಳನ್ನು ನೆಡಲಾಗುವುದು. ಇದಕ್ಕಾಗಿ ಸುಮಾರು ರೂ.೨೪ಲಕ್ಷಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ನಿಟ್ಟಿನಲ್ಲಿ ಭಕ್ತರು ಈಗಾಗಲೇ ಸೇವಾರೂಪದಲ್ಲಿ ದೇಣಿಗೆ ನೀಡಲು ಆರಂಭಿಸಿದ್ದಾರೆ ಎಂದು ಅರ್ಚಕ ಅನಂತ ಆಸ್ರಣ್ಣ ತಿಳಿಸಿದ್ದಾರೆ.

Monday, May 9, 2011

ಕಟೀಲಿನಲ್ಲಿ ಸಾಮಗ ಸಂಸ್ಮರಣೆ

ಶಾಸ್ತ್ರಜ್ಞರಾಗಿ ಅರ್ಥ ಹೇಳಿ ದೊಡ್ಡ ಸಾಮಗರು ಹಾಗೂ ರಸ ಪ್ರಧಾನವಾಗಿ ಅರ್ಥ ಹೇಳುವ ಮೂಲಕ ಸಣ್ಣ ಸಾಮಗರು ಪ್ರಸಿದ್ಧರಾದವರು. ಯಕ್ಷಗಾನ, ಹರಿಕಥೆ ಕ್ಷೇತ್ರಗಳಿಗೆ ಮಹತ್ತರವಾದ ಕೊಡುಗೆ ಕೊಟ್ಟ ಸಾಮಗದ್ವಯರು ಸದಾ ಸ್ಮರಣೀಯರು ಎಂದು ವಿದ್ವಾಂಸ, ಅರ್ಥವಾದಿ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ ಹೇಳಿದರು.ಅವರು ಸೋಮವಾರ ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಡೆದ ಮಲ್ಪೆ ಶಂಕರನಾರಾಯಣ ಸಾಮಗ ಹಾಗೂ ರಾಮದಾಸ ಸಾಮಗರ ಸಂಸ್ಮರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಈ ಸಂದರ್ಭ ಖ್ಯಾತ ಕಲಾವಿದ ಪಾತಾಳ ವೆಂಕಟರಮಣ ಭಟ್ಟರನ್ನು ಸಂಮಾನಿಸಲಾಯಿತು. ಕಟೀಲು ದೇಗುಲದ ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಉಪಸ್ಥಿತರಿದ್ದರು.ಎಂ.ಎಲ್.ಸಾಮಗ ಸ್ವಾಗತಿಸಿದರು. ವಾಸುದೇವ ಸಾಮಗ ವಂದಿಸಿದರು. ಬಳಿಕ ಸಂಯಮ ತಂಡದಿಂದ ತಾಳಮದ್ದಲೆ ನಡೆಯಿತು. ಸಾಮಗದ್ವಯರ ಸಂಸ್ಮರಣೆ ಕಾರ‍್ಯಕ್ರಮವನ್ನು ಹದಿನೈದು ದಿನಗಳ ಕಾಲ ವಿವಿಧೆಡೆ ಆಯೋಜಿಸಲಾಗುತ್ತಿದ್ದು, ಕಟೀಲಿನಲ್ಲಿ ನಡೆದದ್ದು ೯ದಿನದ ಕಾರ‍್ಯಕ್ರಮ.

Saturday, May 7, 2011

ಸಾಮುಹಿಕ ವಿವಾಹ

ಕಟೀಲು ಗೋಪಾಲಕ್ರಷ್ಣ ಸಭಾಂಗಣದಲ್ಲಿ ಟ್ರಸ್ಟ್ ವತಿಯಿಂದ ನಡೆದ ಸಾಮುಹಿಕ ವಿವಾಹದಲ್ಲಿ 7ಜೋಡಿಗಳು ವಿವಾಹವಾದವು.