Thursday, December 30, 2010

ಎನ್‌ಎಸ್‌ಎಸ್ ಸೇವೆಗೆ ಪ್ರೇರಣೆ-ಅನಂತ ಆಸ್ರಣ್ಣ




ರಾಷ್ಟ್ರೀಯ ಸೇವಾ ಯೋಜನೆ ಸಮಾಜ ಸೇವೆಯಲ್ಲಿ ತೊಡಗಲು ವಿದ್ಯಾರ್ಥಿ ದೆಸೆಯಲ್ಲಿಯೇ ಯುವಕರನ್ನು ಪ್ರೇರೇಪಿಸುತ್ತಿದೆ ಎಂದು ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.ಅವರು ಗುರುವಾರ ಉಲ್ಲಂಜೆ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಬಲ್ಮಠ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಹರಿಪ್ರಸಾದ ಶೆಟ್ಟಿ, ರಥಬೀದಿ ಸರಕಾರಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಶೇಷಪ್ಪ, ಕಟೀಲು ಕಾಲೇಜಿನ ಸುರೇಶ್ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶೈಲಾ ಶೆಟ್ಟಿ, ಸಾಮಾಜಿಕ ಮುಖಂಡ ಭುವನಾಭಿರಾಮ ಉಡುಪ, ಶಿಕ್ಷಕಿ ಜೆಸಿಂತಾ ಡಿಸೋಜ,, ಶಾಲಾಭಿವೃದ್ಧಿ ಸಮಿತಿಯ ದಯಾನಂದ ಶೆಟ್ಟಿ, ಶರ್ಮಿಳಾ, ಎನ್‌ಎಸ್‌ಎಸ್ ಘಟಕದ ಕೀರ್ತನ್, ಯಶ್ವಿತಾ, ಹರಿಪ್ರಸಾದ, ದೇವಿಕಾ ಮತ್ತಿತರರಿದ್ದರು. ಕಿನ್ನಿಗೋಳಿ ರೋಟರ‍್ಯಾಕ್ಟ್ ವತಿಯಿಂದ ೮೦ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡಗಳನ್ನು ಕ್ಲಬ್‌ನ ಪ್ರಕಾಶ್ ಆಚಾರ್ ವಿತರಿಸಿದರು. ಯೋಜನಾಧಿಕಾರಿ ಕೇಶವ ಎಚ್. ಸ್ವಾಗತಿಸಿದರು. ಕೃಷ್ಣ ಕೆ.ಕೆ.ವಂದಿಸಿದರು. ಘಟಕದ ವತಿಯಿಂದ ಶಾಲೆಗೆ ಗೋಡೆಗಡಿಯಾರ ನೀಡಲಾಯಿತು.

Friday, December 24, 2010

ಉಲ್ಲಂಜೆಯಲ್ಲಿ ಎನ್‌ಎಸ್‌ಎಸ್ ಶಿಬಿರ ಆರಂಭ


ವಿದ್ಯಾರ್ಥಿ ಜೀವನದಲ್ಲಿ ಪಾಠ ಪ್ರವಚನಗಳ ಜೊತೆಗೆ ಬದುಕಿನ ಪಾಠವನ್ನು ಕಲಿಸಲು ಎನ್‌ಎಸ್‌ಎಸ್ ಚಟುವಟಿಕೆ ಪೂರಕ ಎಂದು ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಶುಕ್ರವಾರ(ಡಿ೨೪) ಉಲ್ಲಂಜೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಪತ್ರಕರ್ತ ರಘುನಾಥ ಕಾಮತ್ ಕೆಂಚನಕೆರೆ, ಉಪನ್ಯಾಸಕ ಸುರೇಶ್, ಶಿಕ್ಷಕ ಕೆ.ವಿ.ಶೆಟ್ಟಿ, ಉಲ್ಲಂಜೆ ಶಾಲೆಯ ಮುಖ್ಯ ಶಿಕ್ಷಕಿ ಮಂಗಳಾ ಎಸ್.ಭಟ್, ಶಾಲಾಭಿವೃದ್ಧಿ ಸಮಿತಿಯ ದಯಾನಂದ ಶೆಟ್ಟಿ ಮತ್ತಿತರರಿದ್ದರು. ಯೋಜನಾಧಿಕಾರಿ ಕೇಶವ ಎಚ್.ಸ್ವಾಗತಿಸಿದರು. ಡಾ.ಕೃಷ್ಣ ವಂದಿಸಿದರು. ಯಶ್ವಿತಾ ನಿರೂಪಿಸಿದರು. ಶಿಬಿರ ತಾ.೩೦ರವರೆಗೆ ನಡೆಯಲಿದೆ.

Thursday, December 23, 2010

ಉಲ್ಲಂಜೆಯಲ್ಲಿ ಕಟೀಲು ಕಾಲೇಜು ಎನ್‌ಎಸ್‌ಎಸ್ ಶಿಬಿರ

ಉಲ್ಲಂಜೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ತಾ.೨೪ರಿಂದ ತಾ.೩೦ರವರೆಗೆ ಕಟೀಲು ಶ್ರೀ ದು.ಪ.ದೇ.ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಶಿಬಿರ ನಡೆಯಲಿದೆ.ಸ್ಥಳೀಯ ರಸ್ತೆಗಳ ರಿಪೇರಿ, ಶೌಚಾಲಯಗಳ ನಿರ್ಮಾಣ ಮುಂತಾದ ಕಾರ್‍ಯಕ್ರಮಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿದೆ ಎಂದು ಯೋಜನಾಧಿಕಾರಿ ಕೇಶವ ಎಚ್. ತಿಳಿಸಿದ್ದಾರೆ.

Tuesday, December 21, 2010

ಶಿಬರೂರು ಕೋಲ










ಶಿಬರೂರು ಕೊಡಮಣಿತ್ತಾಯ ದೈವಸ್ಥಾನದಲ್ಲಿ ನೇಮ ನಡೆಯಿತು



Saturday, December 18, 2010

ನಿಡ್ಡೋಡಿ ಐಟಿಐನಲ್ಲಿ ಗ್ರಾಮೋತ್ಸವ

ಅತ್ಯಂತ ಜ್ಞಾನಿಗಳೂ, ಬರೆಯಲೂ ಓದಲೂ ಬಾರದ ಅನಕ್ಷಸ್ಥರು, ಅತ್ಯಂತ ಶ್ರೀಮಂತರೂ, ಕಡು ಬಡವರೂ, ಆರೋಗ್ಯವಂತರೂ, ಕಾಯಿಲೆಗಳಿಂದ ನರಳುವವರೂ ಹೀಗೆ ಜನರ ಮಧ್ಯೆ ದೊಡ್ಡದಾದ ಅಂತರವನ್ನು ನಮ್ಮ ದೇಶದಲ್ಲಿ ಕಾಣಬಹುದು. ಸ್ವಾತಂತ್ರ್ಯಾನಂತರ ಸಮಾನತೆಯ ಸಮಾಜದ ಸ್ಥಾಪನೆಗಾಗಿ ಕೇಂದ್ರ ರಾಜ್ಯ ಸರಕಾರಗಳು ಅದೆಷ್ಟು ಪ್ರಯತ್ನ ಪಟ್ಟರೂ ಯಶಸ್ಸು ಸಾಧ್ಯವಾಗುತ್ತಿಲ್ಲ. ಪ್ರತಿ ಗ್ರಾಮವನ್ನು ಆದರ್ಶವಾಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದಾಗ ದೇಶ ಬಲಿಷ್ಟವಾಗಬಲ್ಲದು ಎಂದು ಮೂಡುಬಿದ್ರೆಯ ಡಾ.ಮೋಹನ ಆಳ್ವ ಹೇಳಿದರು.ಅವರು ಶನಿವಾರ ರಾತ್ರಿ ನಿಡ್ಡೋಡಿಯಲ್ಲಿ ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಶ್ರೀ ದುರ್ಗಾದೇವಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನಿಡ್ಡೋಡಿ ಗ್ರಾಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೋತ್ಸವದ ಬಗ್ಗೆ ಉಪನ್ಯಾಸಗೈದ ಗಣೇಶ್ ಅಮೀನ್ ಸಂಕಮಾರ್, ನಮ್ಮ ಮಣ್ಣಿನ ಪ್ರೀತಿ, ಅಭಿಮಾನಗಳನ್ನು ಜಾನಪದ ಸಂಸ್ಕೃತಿ ನಮಗೆ ಕಲಿಸಿಕೊಡುತ್ತದೆ ಎಂದರು.ಸಾಂಸದ ನಳಿನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ರಾಷ್ಟ್ರಪ್ರೇಮವನ್ನು ಹೆಚ್ಚಿಸುವ ಬಗ್ಗೆ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸಬೇಕೆಂದರು.ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಎಂ.ಆರ್.ಜೈನ್, ತೋಕೂರು ಐಟಿಐನ ವೈ.ಎನ್.ಸಾಲ್ಯಾನ್, ವೇಣೂರು ಐಟಿಐನ ಸದಾನಂದ ಪೂಜಾರಿ ಮತ್ತಿತರರಿದ್ದರು.ಸಂಸ್ಥೆಯ ಅಧ್ಯಕ್ಷ ಭಾಸ್ಕರ ದೇವಸ್ಯ ಸ್ವಾಗತಿಸಿದರು. ಐಟಿಐನ ಪ್ರಾಚಾರ‍್ಯೆ ಅನುರಾಧಾ ಎಸ್.ಸಾಲ್ಯಾನ್ ವರದಿ ವಾಚಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ, ನಿಡ್ಡೋಡಿ ಗ್ರಾಮದ ಪ್ರತಿಭಾವಂತರಿಂದ ಸಾಂಸ್ಕೃತಿಕ, ಜಾನಪದ ಕಾರ‍್ಯಕ್ರಮಗಳು ನಡೆದವು.

Saturday, December 11, 2010

ಭಜನಾ ಮಂಗಲೋತ್ಸವ

ಕಟೀಲು ದೇಗುಲದಲ್ಲಿ ದಶಕಗಳಿಂದ ನಡೆಯುತ್ತ ಬಂದಿರುವ ಭಜನಾ ಮಂಗಲೋತ್ಸವ ನಡೆಯಿತು.

Friday, December 10, 2010

ಗಿಡಿಗೆರೆ ದೈವಸ್ಥಾನಕ್ಕೆ ಶಿಲಾನ್ಯಾಸ

ಕಟೀಲು ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನಕ್ಕೆ ಶುಕ್ರವಾರ ಶಿಲಾನ್ಯಾಸ ಮಾಡಲಾಯಿತು. ಶಿಬರೂರು ಹಯಗ್ರೀವ ತಂತ್ರಿ, ಕಟೀಲು ಹರಿನಾರಾಯಣದಾಸ ಆಸ್ರಣ್ಣ, ಪಂಜ ವಾಸುದೇವ ಭಟ್ ಧಾರ್ಮಿಕ ವಿಧಿಗಳ ಮೂಲಕ ಶಿಲಾನ್ಯಾಸಗೈದರು.ಸಚಿವ ವಿ.ಎಸ್.ಆಚಾರ್‍ಯ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕಟೀಲು ಚರ್ಚ್‌ನ ಫಾ.ರಾಬರ್ಟ್ ಕ್ರಾಸ್ತಾ, ಮಾಜಿ ಶಾಸಕ ಸೋಮಪ್ಪ ಸುವರ್ಣ, ಜಿ.ಪಂ.ಸದಸ್ಯರಾದ ಶೈಲಾ ಸಿಕ್ವೇರ, ಪ್ರಮೋದ್ ಕುಮಾರ್, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ರವಿಶಂಕರ ಶೆಟ್ಟಿ, ಎಂಆರ್‌ಪಿಎಲ್‌ನ ಲಕ್ಷ್ಮೀ ಕುಮಾರನ್, ಎಕ್ಕಾರು ಮೋನಪ್ಪ ಶೆಟ್ಟಿ, ಸುಭಾಶ್ಚಂದ್ರ ಪಡಿವಾಳ್, ಗಿರೀಶ್ ಶೆಟ್ಟಿ, ಸೀತಾರಾಮ ಕೊಂಚಾಡಿ, ಲೀಲಾಧರ ಶೆಟ್ಟಿ, ತಿಮ್ಮಪ್ಪ ಮೇಸ್ತ್ರಿ ಮತ್ತಿತರರಿದ್ದರು. ಅರುಣಾ ಕುಮಾರಿ ಪ್ರಾರ್ಥಿಸಿದರು. ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ರುಕ್ಮಯ, ಕಿರಣ್ ಪಕ್ಕಳ ಕಾರ್‍ಯಕ್ರಮ ನಿರೂಪಿಸಿದರು.

ಕಟೀಲಿನಲ್ಲಿ ಶ್ರೀ ಹನುಮದ್ ಶಕ್ತಿಜಾಗರಣ ಯಜ್ಞ

ಮುಲ್ಕಿ ತಾಲೂಕು ಶ್ರೀ ಹನುಮದ್ ಶಕ್ತಿ ಜಾಗರಣ ಸಮಿತಿ ಆಶ್ರಯದಲ್ಲಿ ಶ್ರೀ ಹನುಮದ್ ಶಕ್ತಿಜಾಗರಣ ಯಜ್ಞ ಹಾಗೂ ಹಿಂದೂ ಸಾಮಾವೇಶ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಭವನದಲ್ಲಿ ಭಾನುವಾರ(ತಾ.೧೨) ನಡೆಯಲಿದೆ.ಬೆಳಿಗ್ಗೆ ೯ಕ್ಕೆ ಯಜ್ಞ ೧೧.೩೦ ಗಂಟೆಗೆ ನಡೆಯುವ ಸಭಾಕಾರ್‍ಯಕ್ರಮದಲ್ಲಿ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾ.ಸೀತಾರಾಮ್ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ದೊಡ್ಡಯ್ಯ ಮೂಲ್ಯ ತಿಳಿಸಿದ್ದಾರೆ.

Thursday, December 9, 2010

ಕಟೀಲಿನಲ್ಲಿ ಭಾರತೀ ವಿಷ್ಣುವರ್ಧನ್

ಕಟೀಲು ದೇಗುಲಕ್ಕೆ ಡಿಸೆಂಬರ್ 9ರಂದು ಚಿತ್ರ ನಟಿ ಭಾರತೀ ವಿಷ್ಣುವರ್ಧನ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Wednesday, December 8, 2010

ಕಟೀಲಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್

ಭಾರತೀಯರಲ್ಲಿ ಗಳಿಸಿದ್ದರಲ್ಲಿ ಉಳಿಸುವ ಗುಣ ಸಹಜವಾಗಿ ರೂಢಿಯಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್‍ಯ ಹೇಳಿದರು.ಅವರು ಶುಕ್ರವಾರ ಕಟೀಲಿನ ಸೌಂದರ್‍ಯ ಪ್ಯಾಲೇಸ್ ವಾಣಿಜ್ಯ ಸಂಕೀರ್ಣದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ೪೩೨ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಆಗಿದೆ. ೧೯೬೯ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದ ಬಳಿಕ ಬ್ಯಾಂಕುಗಳ, ಶಾಖೆಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದರೆ ದೇಶದಲ್ಲಿ ಇವತ್ತಿಗೂ ೨೦ರಿಂದ ೩೦ಶೇಕಡಾ ಮಂದಿ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರಗಿದ್ದಾರೆ ಎಂದು ಡಾ. ಆಚಾರ್‍ಯ ಹೇಳಿದರು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸೌಂದರ್‍ಯ ಪ್ಯಾಲೇಸ್‌ನ ರಮೇಶ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕರಾದ ಎಸ್.ಸಿ.ಬಿರಾದಾರ ಮತ್ತಿತರರಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾಂಕಿನ ಮಹಾಪ್ರಬಂಧಕ ವಾಸುದೇವ ಕೆ.ಕಾಲಕುಂದ್ರಿ, ಈ ಹಿಂದೆ ನೇತ್ರಾವತಿ, ಮಲಪ್ರಭಾ, ವರದಾ, ಬಿಜಾಪುರ ಹೀಗೆ ೯ಜಿಲ್ಲೆಗಳಲ್ಲಿದ್ದ ಸಣ್ಣ ಬ್ಯಾಂಕ್‌ಗಳನ್ನು ಒಂದಾಗಿಸಿ ಮಾಡಲಾದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇವತ್ತು ೮ಸಾವಿರ ಕೋಟಿ ರೂ.ವ್ಯವಹಾರಗಳ ಸಾಧನೆ ಮಾಡಿದೆ. ೪೫ಲಕ್ಷ ಗ್ರಾಹಕರಿದ್ದಾರೆ ಎಂದು ಮಾಹಿತಿ ನೀಡಿದರು.ನಾರಾಯಣ ಯಾಜಿ ಕಾರ್‍ಯಕ್ರಮ ನಿರೂಪಿಸಿದರು. ಶೇಖರ ಶೆಟ್ಟಿ ಸ್ವಾಗತಿಸಿದರು. ಗ್ರಾಹಕರ ಪರವಾಗಿ ಪಿ.ಸತೀಶ್ ರಾವ್ ಮಾತನಾಡಿದರು. ಶಾಖಾಧಿಕಾರಿ ಶ್ರೀಪಾದ ರಾವ್ ಎಂ.ವಂದಿಸಿದರು.

Friday, December 3, 2010

ಕಟೀಲು ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ






ಕಟೀಲು ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಪದ್ಮನೂರು, ಉಲ್ಲಂಜೆ ಕ್ಲಸ್ಟರ್ ವತಿಯಿಂದ ಅಂಗವಿಕಲರಿಗಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ವಿತರಿಸಿದರು. ಮುಖ್ಯೋಪಾಧ್ಯಾಯಿನಿ ಮಾಲತಿ, ಇಲಾಖೆಯ ಅನಂತರಾಮ ರಾವ್, ವಾಸುದೇವ ಶೆಣೈ ಮತ್ತಿತರರಿದ್ದರು.
ಅಂಗವಿಕಲರಿಗೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿ