Monday, April 29, 2013

ಸಂಪತ್ತು ಧರ್ಮದ ಮಾರ್ಗದಲ್ಲಿ ಬರಲಿ-ಪ್ರತಾಪಸಿಂಹ ನಾಯಕ್

ಕಟೀಲು : ಆಸೆ ಸಹಜ. ಆಸೆ ಪೂರೈಸಲು ಸಂಪತ್ತು ಬೇಕು. ಆದರೆ ಅದು ಧರ್ಮದ ಮಾರ್ಗದಲ್ಲಿ ಬರಬೇಕು ಎಂದು ಬೆಳ್ತಂಗಡಿಯ ವಕೀಲರಾದ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಭಾನುವಾರ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಡೆದ ತಿಂಗಳ ಚಿಂತನ ಕಾರ‍್ಯಕ್ರಮದಲ್ಲಿ ಏಕಾತ್ಮ ಮಾನವತಾ ದರ್ಶನ ಕುರಿತು ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರರ ಚಿಂತನೆಗಳ ಬಗ್ಗೆ ಮಾತನಾಡಿದ ಅವರು ನಾನು ಎಂಬ ಭಾವನೆ ಕುಟುಂಬ ಪದ್ಧತಿಯಿಂದಾಗಿ ನಾವು ಎಂದಾಗುತ್ತದೆ. ನಾವು ಪ್ರಕೃತಿಯ ಜೊತೆಗೆ ಬದುಕುತ್ತಿರುವುದು ಗೊತ್ತಿರಬೇಕು. ಮನಸ್ಸು, ದೇಹ, ಬುದ್ಧಿ ಆತ್ಮಗಳು ಒಂದಕ್ಕೊಂದು ಸಂಬಂಧಿಸಿದವು. ವ್ಯಕ್ತಿಗಿರುವಂತೆ ರಾಷ್ಟ್ರಕ್ಕೂ ವ್ಯಕ್ತಿತ್ವ ಇದೆ ಎಂದು ಅವರು ಹೇಳಿದರು. ಝೇಂಕಾರ ಬಳಗದ ಅನಂತಪದ್ಮನಾಭ ಆಸ್ರಣ್ಣ ಸ್ವಾಗತಿಸಿದರು. ಸೋಂದಾ ಭಾಸ್ಕರ ಭಟ್ ಕಾರ‍್ಯಕ್ರಮ ನಿರೂಪಿಸಿದರು. ಪ್ರಸಾದ ಆಸ್ರಣ್ಣ ವಂದಿಸಿದರು.
ಚಿತ್ರ ಈಮೆಲ್

ಕಟೀಲು ಸಾಮೂಹಿಕ ವಿವಾಹದಲ್ಲಿ ೨೨ಜೋಡಿ ಗ್ರಹಸ್ಥಾಶ್ರಮಕ್ಕೆ


ಕಟೀಲು : ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಆಶ್ರಯದಲ್ಲಿ ಸೋಮವಾರ ಸಂಜೆ ಕಟೀಲು ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ೨೨ಜೋಡಿಗಳು ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದವು.
ಲಕ್ಷ್ಮೀನಾರಾಯಣ ಆಸ್ರಣ್ಣ, ಪಿ.ಸತೀಶ್ ರಾವ್, ಜಯಂತಿ ಆಸ್ರಣ್ಣ, ಉದ್ಯಮಿ ಎ.ಜೆ.ಶೆಟ್ಟಿ, ಎ.ಕೃಷ್ಣಮೂರ್ತಿ, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ, ಸತೀಶ್ ಎನ್. ಬಂಗೇರ, ಸುವರ್ಣಬಾಬಾ, ವಾಸುದೇವ ರಾವ್, ಮೋಹನ ಮೆಂಡನ್, ಶ್ರೀಕಾಂತ ಉಡುಪ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು. ಸಾಹಿತಿ ಕೆ.ಎಲ್.ಕುಂಡಂತಾಯರನ್ನು ಈ ಸಂದರ್ಭ ಸಂಮಾನಿಸಲಾಯಿತು. ರಮ್ಯಾ ಆಸ್ರಣ್ಣ ಕಾರ‍್ಯಕ್ರಮ ನಿರೂಪಿಸಿದರು.

Saturday, April 27, 2013