Saturday, July 20, 2013

ಅವಿಭಜಿತ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ : ಫಲಿತಾಂಶ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘ ಶನಿವಾರ ಆಯೋಜಿಸಲಾದ ಪ್ರೌಢಶಾಲಾ ವಿದ್ಯಾರ್ಥಿಗಳ ಅವಿಭಜಿತ ಮಟ್ಟದ ಗಾಯನ ಸ್ಪರ್ಧೆಯ ಫಲಿತಾಂಶ ಹೀಗಿದೆ.
ದೇಶಭಕ್ತಿಗೀತೆ :
ಹುಡುಗರ ವಿಭಾಗ : ಆದಿತ್ಯ ಎಸ್. ಭಟ್, ರೋಟರಿ ಕಿನ್ನಿಗೋಳಿ(ಪ್ರಥಮ), ಸರ್ವಜಿತ್ ಉಪಾಧ್ಯಾಯ, ಲಕ್ಷ್ಮೀಜನಾರ್ದನ ಬೆಳ್ಮಣ್(ದ್ವಿತೀಯ), ಸುಜ್ಞಾನ ಹೇರಳೆ, ವಿವೇಕಾನಂದ ಪುತ್ತೂರು(ತೃತೀಯ)
ಹುಡುಗಿಯರ ವಿಭಾಗ : ಸಮನ್ವಿ ರೈ, ವಿವೇಕಾನಂದ ಪುತ್ತೂರು(ಪ್ರಥಮ), ನಿರೀಕ್ಷಾ ಯು.ಕೆ, ಬೆಸೆಂಟ್ ಮಂಗಳೂರು(ದ್ವಿತೀಯ), ನೈಮಿಶಾ ಶೆಟ್ಟಿ, ಸೈಂಟ್ ಫ್ರಾನ್ಸಿಸ್ ಮುದರಂಗಡಿ
ಭಾವಗೀತೆ
ಹುಡುಗರ ವಿಭಾಗ : ರಾಧೇಶ್, ರೋಟರಿ ಮೂಡುಬಿದ್ರೆ(ಪ್ರಥಮ), ಮಯೂರ್, ಆಳ್ವಾಸ್ ಮೂಡುಬಿದ್ರೆ(ದ್ವಿತೀಯ), ಶಶಾಂಕ್ ಡಿ., ವಿವೇಕಾನಂದ ಪುತ್ತೂರು(ತೃತೀಯ)
ಹುಡುಗಿಯರ ವಿಭಾಗ : ಪ್ರಶ್ವಿ, ಜೆಸಿಸಿ ಕಾರ್ಕಳ(ಪ್ರಥಮ), ಪೂಜಾ ಎಸ್, ಶಂಕರ ಅಡ್ಯಂತಾಯ ಶಾಲೆ ನಿಟ್ಟೆ(ದ್ವಿತೀಯ), ನಿರೀಕ್ಷಾ ಯು.ಕೆ, ಬೆಸೆಂಟ್ ಮಂಗಳೂರು(ತೃತೀಯ)
ಭಕ್ತಿಗೀತೆ
ಹುಡುಗರ ವಿಭಾಗ : ಆದಿತ್ಯ ಎಸ್.ಭಟ್,ರೋಟರಿ ಕಿನ್ನಿಗೋಳಿ(ಪ್ರಥಮ), ಸಂಪತ್, ವಿದ್ಯಾದಾಯಿನಿ ಸುರತ್ಕಲ್(ದ್ವಿತೀಯ), ಶ್ರೀಶದಾಸ್, ವಿದ್ಯಾವರ್ಧಕ ಮುಂಡ್ಕೂರು(ತೃತೀಯ)
ಹುಡುಗಿಯರ ವಿಭಾಗ : ಆತ್ರೇಯ ಕೃಷ್ಣಾ ಕೆ, ಭುವನೇಂದ್ರ ಕಾರ್ಕಳ(ಪ್ರಥಮ), ನಿರೀಕ್ಷಾ ಯು.ಕೆ, ಬೆಸೆಂಟ್ ಮಂಗಳೂರು(ದ್ವಿತೀಯ), ಶ್ರೇಯ ಶೀಲಾ, ರೋಟರಿ ಮೂಡುಬಿದ್ರೆ(ತೃತೀಯ)
ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿಯನ್ನು ಕಟೀಲು ಝೇಂಕಾರ ಬಳಗದ ಅನಂತಪದ್ಮನಾಭ ಆಸ್ರಣ್ಣ ವಿತರಿಸಿದರು. ಬಜಪೆ ವ್ಯವಸಾಯ ಬ್ಯಾಂಕಿನ ರತ್ನಾಕರ ಶೆಟ್ಟಿ, ಉಪಪ್ರಾಚಾರ್ಯ ಸುರೇಶ್ ಭಟ್ ಮತ್ತಿತರರಿದ್ದರು. ದೇವಿಪ್ರಸಾದ್ ನಿರೂಪಿಸಿದರು.
ಉದ್ಘಾಟನೆ :
ಗಾಯನ ಸ್ಪರ್ಧೆಯನ್ನು ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಹಳೆ ವಿದ್ಯಾರ್ಥಿ ಸಂಘದ ಶ್ರೀಹರಿ ಆಸ್ರಣ್ಣ, ಉದ್ಯಮಿ ಚಿತ್ತರಂಜನ್ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಸುಬ್ರಹ್ಮಣ್ಯಪ್ರಸಾದ ಶಿಬರೂರು ಮತ್ತಿತರರಿದ್ದರು. ಕೆ.ವಿ.ಶೆಟ್ಟಿ ನಿರೂಪಿಸಿದರು.

ಕಟೀಲು : ಹಂಸಧ್ವನಿ ಉದ್ಘಾಟನೆ



ಕಟೀಲು : ದುರ್ಗಾಪರಮೇಶ್ವರೀ ದೇಗುಲದಿಂದ ನಡೆಸಲ್ಪಡುವ ಪ್ರಾಥಮಿಕ, ಪ್ರೌಢ, ಪದವೀಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಉತ್ತೇಜನಕ್ಕೆ ತಲಾ ೫೦ಸಾವಿರದಂತೆ ೨ಲಕ್ಷ ರೂ.ಗಳನ್ನು ಕಟೀಲು ದೇಗುಲದ ವತಿಯಿಂದ ನೀಡಲು ಉದ್ದೇಶಿಸಲಾಗಿದೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದರು.
ಅವರು ಕಟೀಲು ದೇಗುಲ ಹಾಗೂ ಮುಂಬೈ ಸಂಜೀವಿನಿ ಟ್ರಸ್ಟ್ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಗೀತ, ಯೋಗ, ಚಿತ್ರ, ನಾಟ್ಯ, ಇಂಗ್ಲಿಷ್, ಸಂಸ್ಕೃತ ಸಂಭಾಷಣೆ ತರಗತಿ ಹಾಗೂ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಸಂಭಾಷಣೆ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಅನಂತಪದ್ಮನಾಭ ಆಸ್ರಣ್ಣ, ಸಂಜೀವಿನಿ ಟ್ರಸ್ಟ್‌ನ ಡಾ.ಸುರೇಶ್ ರಾವ್, ಜಿ.ಪಂ.ಸದಸ್ಯ ಈಶ್ವರ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಮುಖ್ಯ ಶಿಕ್ಷಕಿ ಮಾಲತಿ ಮತ್ತಿತರರಿದ್ದರು. ಹರಿನಾರಾಯಣದಾಸ ಆಸ್ರಣ್ಣ ಪ್ರಸ್ತಾವನೆಗೈದರು. ಉಪಪ್ರಾಚಾರ್ಯ ಸುರೇಶ್ ಭಟ್ ಸ್ವಾಗತಿಸಿದರು. ವಾಸುದೇವ ಶೆಣೈ ವಂದಿಸಿದರು.

Sunday, July 7, 2013

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಸಂಭ್ರಮದ ಸಲುವಾಗಿ ಜುಲೈ ೨೦ರ ಶನಿವಾರ ಕಟೀಲು ಸರಸ್ವತೀ ಸದನದಲ್ಲಿ ಅವಿಭಜಿತ ದ.ಕ. ಜಿಲ್ಲಾ ಮಟ್ಟದ(ಮಂಗಳೂರು ಮತ್ತು ಉಡುಪಿ) ಪ್ರೌಢಶಾಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 
ಸ್ಪರ್ಧೆಯು ಬಾಲಕರಿಗೆ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ನಡೆಯಲಿದ್ದು, ಭಕ್ತಿಗೀತೆ, ದೇಶಭಕ್ತಿ ಗೀತೆ ಹಾಗೂ ಭಾವಗೀತೆ ವಿಭಾಗಗಳಲ್ಲಿ ಗಾಯನ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನವಿದೆ. ಒಂದು ಸಂಸ್ಥೆಯಿಂದ ಪ್ರತಿ ವಿಭಾಗಕ್ಕೆ ಒಬ್ಬ ಸ್ಪರ್ಧಿಗೆ ಮಾತ್ರ ಅವಕಾಶವಿದ್ದು, ಭಾಗವಹಿಸಲಿಚ್ಚಿಸುವ ಸ್ಪರ್ಧಿಗಳು, ತಾವು ಪ್ರತಿನಿಧಿಸುವ ಶಾಲೆಯ ಮುಖ್ಯೋಪಾಧ್ಯಾಯರ ಸಹಿಯುಳ್ಳ ಪತ್ರದೊಂದಿಗೆ, ದೂರವಾಣಿ ಸಂಖ್ಯೆಯ ಸಹಿತ ಜುಲೈ ೧೫ರ ಒಳಗಾಗಿ ಶ್ರೀ ಸುರೇಶ್ ಭಟ್(೯೪೪೯೪೩೭೭೯೩) ಉಪಪ್ರಾಚಾರ‍್ಯರು, ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ, ಕಟೀಲು, ಮಂಗಳೂರು ತಾಲೂಕು, ದ.ಕ.-೫೭೪೧೪೮. ಇಲ್ಲಿಗೆ ತಿಳಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಮಕ್ಕಳ ಯಕ್ಷಗಾನ ಪ್ರದರ್ಶನಕ್ಕೆ ಆಹ್ವಾನ


ಕಟೀಲು : ಇಲ್ಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಐದನೇ ವಾರ್ಷಿಕೋತ್ಸವದ ಸಲುವಾಗಿ ಅಕ್ಟೋಬರ್ ೨೦ರಂದು ವಿವಿಧ ಮಕ್ಕಳ ಮೇಳಗಳ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಆಸಕ್ತ ಮಕ್ಕಳ ತಂಡಗಳು ಆಗಸ್ಟ್ ೩೧ರ ಒಳಗೆ ತಮ್ಮ ಹೆಸರನ್ನು ವಾಸುದೇವ ಶೆಣೈ(೮೭೨೨೬೧೪೧೦೧) ಇವರಲ್ಲಿ ನೋಂದಾಯಿಸಬಹುದೆಂದು ಸಂಸ್ಥೆಯ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.

Wednesday, July 3, 2013

ಕಟೀಲು ಪ್ರೌಢಶಾಲೆಯಲ್ಲಿ ಸಸಿ ವಿತರಣೆ


ಕಟೀಲು : ಶ್ರೀ ದುರ್ಗಾಪರಮೆಶ್ವರೀ ದೇವಳ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ನಡೆಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಮರವೂರು, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಗೋಪಾಲಕೃಷ್ಣ ತಂತ್ರಿ, ಉಪಪ್ರಾಚಾರ್ಯ ಸುರೇಶ್
ಭಟ್ ಮತ್ತಿತರಿದ್ದರು.