Saturday, November 27, 2010

ಕಟೀಲು ದೀಪೋತ್ಸವ(ದಿಂಡು)




ಕಟೀಲು ದೇಗುಲದಲ್ಲಿ ನವೆಂಬರ್ 26ರಂದು ವೈಭವದ ಲಕ್ಷ ದೀಪೋತ್ಸವ ನಡೆಯಿತು.
ಹಣ್ಣುತರಕಾರಿಗಳ ಕಟ್ಟೆ(ಗುರ್ಜಿ) ಯಲ್ಲಿಟ್ಟು ದೇವರನ್ನು ಪೂಜಿಸಲಾಯಿತು. ಚಂದ್ರಮಂಡಲ ರಥೋತ್ಸವ ನಡೆಯಿತು.

Friday, November 26, 2010

ಕಟೀಲು ಯಕ್ಷಗಾನ ಮೇಳಗಳ ಚಿನ್ನಬೆಳ್ಳಿ ಆಭರಣಗಳ ವೈಭವದ ಮೆರವಣಿಗೆ


ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಐದು ಮಂಡಳಿಗಳಿಗೆ ಭಕ್ತರು ಕೊಡಮಾಡಿದ ಚಿನ್ನದ ಕಿರೀಟಗಳು, ಸುದರ್ಶನ, ಬೆಳ್ಳಿಯ ದೇವರ ಪೆಟ್ಟಿಗೆ, ಸಿಂಹ, ತೊಟ್ಟಿಲು ಮುಂತಾದ ಆಭರಣಗಳನ್ನು ಬಜಪೆಯಿಂದ ವೈಭವದ ಮೆರವಣಿಗೆಯಲ್ಲಿ ಕಟೀಲು ದೇಗುಲಕ್ಕೆ ಶುಕ್ರವಾರ ತರಲಾಯಿತು. ಸಾವಿರಾರು ಮಂದಿ ಮೆರವಣಿಗೆಯನ್ನು ಭಾಗವಹಿಸಿ ವೀಕ್ಷಿಸಿದರು.

Wednesday, November 24, 2010

ಕಾವ್ಯಗೆ ಎಂಎ ಪ್ರಥಮ ರಾಂಕ್


ಕಟೀಲು ಶ್ರೀ ದುರ್ಗಾ ಸಂಸ್ಕ್ರತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಕಾವ್ಯ ಮಂಗಳೂರು ವಿವಿ ಪರೀಕ್ಷೆಯಲ್ಲಿ ಸಂಸ್ಕ್ರತ ಎಂ ಎಯಲ್ಲಿ ಪ್ರಥಮ ರಾಂಕ್ ಪಡೆದಿದ್ದಾರೆ.
ಇವರು ಸಾಹಿತಿ, ನಿವ್ರತ್ತ ಶಿಕ್ಷಕ ಪು.ಶ್ರೀನಿವಾಸ ಭಟ್ಟರ ಪುತ್ರಿ.

Sunday, November 21, 2010

ಸುಂದರ ಪೂಜಾರಿಗೆ ಅದ್ದೂರಿ ಸಂಮಾನ

ಕಟೀಲು ಪದವೀಪೂರ್ವ ಕಾಲೇಜಿನಲ್ಲಿ 42ವರುಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆಸಲ್ಲಿಸಿ, ನಿವ್ರತ್ತರಾದ, ಸಂಸ್ಥೆಗೆ ನೂರಾರು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪ್ರಶಸ್ತಿಗಳನ್ನು ತಂದುಕೊಟ್ಟ ಸುಂದರ ಪೂಜಾರಿಯವರನ್ನು ಅವರ ಅಭಿಮಾನಿ ಹಾಗೂ ಶಿಷ್ಯರ ಬಳಗ ಕಟೀಲಿನ ರಥಬೀದಿಯಲ್ಲಿ ನ.21ರಂದು ಅದ್ದೂರಿಯಾಗಿ ಸಂಮಾನಿಸಿತು.
ಸುಂದರ ಪೂಜಾರಿ ವಿಮಲಾ ಪೂಜಾರಿ ದಂಪತಿಗಳನ್ನು ಸಂಮಾನ ಪತ್ರ, ಬಂಗಾರದ ಸರ ನೀಡಿ ಅಭಿನಂದಿಸಲಾಯಿತು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಡಾ.ಮೋಹನ ಆಳ್ವ, ಅರ್ಚಕರಾದ ವಾಸುದೇವ, ಲಕ್ಷ್ಮೀನಾರಾಯಣ, ಅನಂತಪದ್ಮನಾಭ ಆಸ್ರಣ್ಣರು, ಸುಂದರ ಶೆಟ್ಟಿ, ವಿಜಯಲಕ್ಷ್ಮೀ ಶಿಬರೂರು, ಡಾ.ಸುರೇಶ್ ರಾವ್ ಸೇರಿದಂತೆ ಶಿಷ್ಯರು ಉಪಸ್ಥಿತರಿದ್ದರು.

Saturday, November 20, 2010

ಕಟೀಲಿನಲ್ಲಿ ಬಯಲು ರಂಗಮಂಟಪಕ್ಕೆ ಶಿಲಾನ್ಯಾಸ


ಸರಕಾರ ಎಲ್ಲ ಸವಲತ್ತುಗಳನ್ನು ಕೊಟ್ಟರೂ ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ಶಾಲೆಗಳು ಮುಚ್ಚುತ್ತಿದ್ದು, ಕರಾವಳಿ ಜಿಲ್ಲೆಯಲ್ಲಿ ಮುಂದಿನ ಮೂರು ವರುಷಗಳಲ್ಲಿ ಶೇಕಡಾ ಇಪ್ಪತ್ತೈದರಷ್ಟು ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿವೆ. ಶಿಕ್ಷಣದ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವೇ ಎಂಬ ಚಿಂತನೆ ಆಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀ ಪೂರ್ವ ಕಾಲೇಜಿನಲ್ಲಿ ರಜತ ಮಹೋತ್ಸವ ನೆನಪಿಗಾಗಿ ಸುಮಾರು ರೂ.೫೦ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಯಲು ರಂಗಮಂಟಪದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದರು.ಅವರು ಕಳ್ಳರು ಇವರು ಖದೀಮರು ಎಂಬುದಕ್ಕಿಂತ ನಾವೆಷ್ಟು ಪ್ರಾಮಾಣಿಕರಾಗಿದ್ದೇವೆ ಎಂಬುದು ಮುಖ್ಯ. ನಾವೆಲ್ಲರೂ ದಕ್ಷರಾಗಿದ್ದರೆ ವ್ಯವಸ್ಥೆಯೂ ಸರಿಯಾಗಿರುತ್ತದೆ. ಲೋಕಾಯುಕ್ತದ ಅಗತ್ಯವೂ ಇರುವುದಿಲ್ಲ ಎಂದು ಹೇಳಿದ ಶ್ರೀನಿವಾಸ ಪೂಜಾರಿ ಶಿಕ್ಷಕರು ಪುಸ್ತಕದ ಪಾಠವನ್ನಷ್ಟೇ ಹೇಳದೆ ಪರಿಸರದ ಬಗ್ಗೆಯೂ ಹೇಳಿಕೊಡಬೇಕು ಎಂದು ಹೇಳಿದರು.ಶಿಲಾನ್ಯಾಸಗೈದ ಸಚಿವ ಕೃಷ್ಣ ಪಾಲೇಮಾರ್, ರಂಗಮಂದಿರಕ್ಕೆ ಹತ್ತು ಲಕ್ಷ ರೂ.ಗಳ ಅನುದಾನದ ಭರವಸೆ ನೀಡಿದರು. ಇನ್ನು ಮಕ್ಕಳು ತಾರಾಲಯ ನೋಡಲು ಬೆಂಗಳೂರಿಗೇ ಹೋಗಬೇಕಿಲ್ಲ. ಪಿಲಿಕುಳದಲ್ಲಿ ೧೫.೩೦ ಕೋಟಿ ರೂ.ವೆಚ್ಚದಲ್ಲಿ ತಾರಾಲಯವನ್ನು ಸ್ಥಾಪಿಸಲಾಗುವುದು. ಹೋಬಳಿ ಮಟ್ಟದಲ್ಲಿ ಪಡೆಯಲಾಗುತ್ತಿದ್ದ ಹವಾಮಾನದ ಮಾಹಿತಿಯನ್ನು ಗ್ರಾಮಮಟ್ಟದಿಂದಲೂ ಪಡೆಯುವ ಪ್ರಯತ್ನ ನಡೆದಿದೆ ಎಂದರು.ರಂಗಮಂದಿರಕ್ಕೆ ಐದು ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಹೇಳಿದ ಸಾಂಸದ ನಳಿನ್ ಕುಮಾರ್, ಕಟೀಲಿನಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಮಟ್ಟದಲ್ಲಿ ಶಿಕ್ಷಣ ನೀಡುತ್ತಿರುವ ಇಲ್ಲಿ ಡೊನೇಶನ್ ರಹಿತ ಶಿಕ್ಷಣ ನೀಡುತ್ತಿರುವುದು ಮಹತ್ವದ ಸಂಗತಿಯೆಂದರು. ಶಾಸಕ ಅಭಯಚಂದ್ರ ಕೂಡ ರೂ.೫ಲಕ್ಷ ರೂ.ಗಳ ಅನುದಾನದ ಆಶ್ವಾಸನೆ ನೀಡಿ, ರಂಗಮಂದಿರ ಶಿಕ್ಷಣ ಸಂಸ್ಥೆ ಹಾಗೂ ದೇಗುಲದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಲಿ. ಒಳಾಂಗಣ ಕ್ರೀಡಾಂಗಣವೂ ಈ ರಂಗಮಂದಿರಲ್ಲಿದ್ದರೆ ಕ್ರೀಡಾಪಟುಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಮುಂಬೈ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತುಕಾರಾಮ ಶೆಟ್ಟಿ, ಭಾಸ್ಕರ ದೇವಸ್ಯ, ಸಂತೋಷ್ ಶೆಟ್ಟಿ, ರಜತ ಮಹೋತ್ಸವ ಸಮಿತಿಯ ಚಿತ್ತರಂಜನ ರೈ, ಶಿಕ್ಷಕ ರಕ್ಷಕ ಸಂಘದ ವೈ.ಮೋನಪ್ಪ ಶೆಟ್ಟಿ, ಜಿ.ಪಂ.ಸದಸ್ಯ ಶೈಲಾ ಸಿಕ್ವೇರ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ ಮತ್ತಿತರರಿದ್ದರು.ಪ್ರಾಚಾರ್‍ಯ ಜಯರಾಮ ಪೂಂಜ ಸ್ವಾಗತಿಸಿದರು. ಉಪಪ್ರಾಚಾರ್‍ಯ ಸುರೇಶ್ ಭಟ್ ವಂದಿಸಿದರು. ಸಾಯಿನಾಥ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.ಕಟೀಲು ಪ.ಪೂ.ಕಾಲೇಜಿನ ರೂ.೫೦ಲಕ್ಷ ರೂ. ರಂಗಮಂದಿರಕ್ಕೆ ಕೃಷ್ಣ ಪಾಲೇಮಾರ್, ನಳಿನ್ ಕುಮಾರ್, ಅಭಯಚಂದ್ರ, ಕಟೀಲಿನ ಅರ್ಚಕರು ಶಿಲಾನ್ಯಾಸಗೈದರು.

Thursday, November 18, 2010

ಕಟೀಲಿನಲ್ಲಿ ಕ್ರೀಡಾಕೂಟ, ಕ್ರೀಡಾಶಿಕ್ಷಕ ಸುಂದರ ಪೂಜಾರಿಗೆ ಅಭಿನಂದನೆ




ಕಟೀಲು : ಇಲ್ಲಿನ ಪ್ರೌಢ ಹಾಗೂ ಪದವೀಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕು ದಶಕಗಳ ಕಾಲ ದೈಹಿಕ ಕ್ರೀಡಾ ಶಿಕ್ಷಕರಾಗಿ ನೂರಾರು ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ರೂಪಿಸಿದ ಸುಂದರ ಪೂಜಾರಿಯವರಿಗೆ ಕಟೀಲಿನ ರಥಬೀದಿಯಲ್ಲಿ ತಾ.೨೧ರ ಸಂಜೆ ೫ಗಂಟೆಗೆ ಗುರುವಂದನೆ ಕಾರ್‍ಯಕ್ರಮ ಜರಗಲಿದೆ.ಅಂದು ನಡೆಯುವ ಸಮಾರಂಭದಲ್ಲಿ ಸಚಿವ ಕೃಷ್ಣ ಪಾಲೇಮಾರ್, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಸದಾನಂದ ಶೆಟ್ಟಿ, ಡಾ.ಮೋಹನ ಆಳ್ವ, ಜಿಲ್ಲಾ ಶಾರೀರಿಕ ಶಕ್ಷಕರ ಸಂಘದ ದಿವಾಕರ ಹೆಗ್ಡೆ, ಶಾರೀರಿಕ ಶಿಕ್ಷಣ ಇಲಾಖೆಯ ಎಂ.ಎನ್.ನಾಯಕ್, ಸುಂದರ ಶೆಟ್ಟಿ, ಶೈಲಾ ಶೆಟ್ಟಿ, ಸುವರ್ಣ ಟಿವಿಯ ವಿಜಯಲಕ್ಷ್ಮೀ ಶಿಬರೂರು ಭಾಗವಹಿಸಲಿದ್ದು, ಗಣನಾಥ ಎಕ್ಕಾರು ಅಭಿನಂದನೆ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಸುಂದರ ಪೂಜಾರಿಯವರ ಕ್ರೀಡಾ ಶಿಷ್ಯರಿಗೆ ಗೌರವಾರ್ಪಣೆ, ರಾಷ್ಟ್ರಮಟ್ಟದ ಕ್ರೀಡಾಪಟು ಅರುಣಾ ರಾವ್‌ರಿಂದ ಸುಗಮ ಸಂಗೀತ, ಚಕ್ರವರ್ತಿ ಸೂಲಿಬೆಲೆ ತಂಡದಿಂದ ರಾಷ್ಟ್ರದೇವೋಭವ ಕಾರ್‍ಯಕ್ರಮ ಜರಗಲಿದೆ.ಕಟೀಲಿನಲ್ಲಿ ತಾಲೂಕು ಕ್ರೀಡಾಕೂಟಅಭಿನಂದನೆ ಸಮಿತಿಯಿಂದ ಬುಧವಾರ ಕಟೀಲಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕಟೀಲಿನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಕ್ರೀಡಾಕೂಟ ಉದ್ಘಾಟಿಸಿದರು. ಸುಂದರ ಪೂಜಾರಿ, ಈಶ್ವರ ಕಟೀಲ್, ತಿಮ್ಮಪ್ಪ ಕೋಟ್ಯಾನ್, ಅರುಣಾ ರಾವ್, ದಯಾನಂದ ಮಾಡ, ವಿಜಯಕುಮಾರ್ ಶೆಟ್ಟಿ, ಉದಯಕುಮಾರ್, ಸುದೀಪ್ ಅಮೀನ್, ಎನ್.ಎಸ್.ಅಂಗಡಿ, ಕೆ.ವಿ.ಶೆಟ್ಟಿ ಮತ್ತಿತರರಿದ್ದರು.
ಚಿತ್ರ : ಸುಂದರಪೂಜಾರಿ ಅಭಿನಂದನ ಸಮಿತಿಯಿಂದ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಿತು.

ಕಟೀಲಿನ ಯಕ್ಷಗಾನ ಮೇಳಕ್ಕೆ ಚಿನ್ನದ ಕಿರೀಟಗಳು!


ಕಟೀಲು ಯಕ್ಷಗಾನದ ಐದು ಮೇಳಗಳಿಗೆ ಚಿನ್ನದ ಹತ್ತು ರಾಮ ಲಕ್ಷ್ಮಣ ಕಿರೀಟಗಳನ್ನು, ಐದು ಸುದರ್ಶನ ಚಕ್ರಗಳನ್ನು ಭಕ್ತರು ರೂ. ಹದಿನಾಲ್ಕು ಲಕ್ಷ ವೆಚ್ಚದಲ್ಲಿ ಮಾಡಿಕೊಟ್ಟಿದ್ದಾರೆ. ಈ ಹಿಂದೆ ಮರ ಹಾಗೂ ಬೆಳ್ಳಿಯ ಕಿರೀಟಗಳಿದ್ದು, ಇವುಗಳಿಗೆ ತಿರುಗಾಟದ ಸಂದರ್ಭ ತ್ರಿಕಾಲ ಪೂಜೆ ನಡೆಯುತ್ತದೆ. ತಾ.೨೬ರ ಸಂಜೆ ಬಜಪೆಯಿಂದ ಇವುಗಳನ್ನು ವೈಭವದ ಮೆರವಣಿಗೆಯಲ್ಲಿ ತಂದು ಸಮರ್ಪಿಸಲಾಗುತ್ತದೆ.
ಚಿತ್ರ : ಕಟೀಲ್ ಸ್ಟುಡಿಯೋ