Tuesday, October 11, 2011

ಕಟೀಲಿನಲ್ಲಿ ಪ್ರಾಥಮಿಕ ಶಿಕ್ಷಾವರ್ಗ: ಸಮಾರೋಪ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಥಮಿಕ ಶಿಕ್ಷಾವರ್ಗ ಕಟೀಲು ದೇಗುಲದ ಪದವೀಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿತು.
ಉದ್ಘಾಟನೆ ನೆರವೇರಿಸಿದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಧರ್ಮ ಮತ್ತು ರಾಷ್ಟ್ರ ಜಾಗೃತಿಯಲ್ಲಿ ಸಂಘದ ಪಾತ್ರ ಮಹತ್ತರವಾದುದು. ತಾನೂ ಕೂಡ ಸ್ವಯಂಸೇವಕನಾಗಿದ್ದೆ ಎನ್ನಲು ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಮಧುಕರ್ ಪ್ರಸ್ತಾವನೆಗೈದರು.
ವರ್ಗ ಶಿಬಿರಾಧಿಕಾರಿ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ತಾ.೧೬ರಂದು ಸಮಾರೋಪ ನಡೆಯಲಿದ್ದು, ಸುರೇಶ್ ಪರ್ಕಳ, ಗಿರೀಶ್ ಶೆಟ್ಟಿ
ಭಾಗವಹಿಸಲಿದ್ದಾರೆ.

ಸಮಾರೋಪ
ಕಟೀಲು : ಹಿಂದೂ ಎಂದರೆ ಜಾತಿಯಲ್ಲ, ಕೋಮುವಲ್ಲ. ಹಿಂದೂ ಎಂದರೆ ಜೀವನ
ಮೌಲ್ಯ, ಜೀವನ ದರ್ಶನ. ಹಿಂದುತ್ವದಲ್ಲಿ ರಾಷ್ಟ್ರೀಯತೆಯ ಸಿದ್ದಾಂತವಿದೆ ಎಂದು ಆರ್‌ಎಸ್‌ಎಸ್‌ನ ಪುತ್ತೂರು ಜಿಲ್ಲೆ ಸಹ

ಬೌದ್ಧಿಕ್ ಪ್ರಮುಖ್ ಸುರೇಶ ಪರ್ಕಳ ಹೇಳಿದರು.
ಅವರು ಭಾನುವಾರ ಕಟೀಲು ದೇಗುಲದ ಪದವೀಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಾಧ್ಯಮಗಳು ದೋಷಪೂರಿತವಾಗಿವೆ. ಪತ್ರಿಕೆಗಳು ವಿಶ್ವಾಸ ಕಳಕೊಂಡಿವೆ. ರೇಡಿಯೋ ಮಿರ್ಚಿ ಬದಲಾಗುತ್ತ ಹಾಟ್ ಮಗಾ ಎಂದು ಹಾದಿ ತಪ್ಪಿಸುವ ಸ್ಥಿತಿ ಬಂದಿದೆ. ದೇಶದ ಅಸಲೀ ವಿಚಾರ ಬಿಟ್ಟು ಸುದ್ದಿಗಳು ಬರುತ್ತಿವೆ. ಈ ಬಗ್ಗೆ ಎಚ್ಚರಿಕೆ, ಜಾಗೃತಿ ನಮ್ಮಲ್ಲಾಗಬೇಕು. ಇಂತಹ ಶಿಬಿರಗಳಿಂದ ಸಂಸ್ಕಾರ, ರಾಷ್ಟ್ರ ಜಾಗೃತಿಯ ನಿರ್ಮಾಣ ಕಾರ‍್ಯ ಸಾಧ್ಯವಾಗುತ್ತಿದೆ ಎಂದು ಸುರೇಶ್ ಪರ್ಕಳ ಹೇಳಿದರು.
ಕಟೀಲಿನ ಉದ್ಯಮಿ ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು. ವರ್ಗ ಶಿಬಿರಾಧಿಕಾರಿ ಸುರೇಶ್ ಶೆಟ್ಟಿ ವರದಿ ವಾಚಿಸಿದರು. ಗಣೇಶ ಕಿನ್ನಿಗೋಳಿ ಸ್ವಾಗತಿಸಿದರು. ಶ್ರೀನಿವಾಸ ಬಪ್ಪನಾಡು ವಂದಿಸಿದರು.
೧೫೫ ಶಿಬಿರಾರ್ಥಿಗಳಿಂದ ಕಟೀಲು ರಥಬೀದಿಯಲ್ಲಿ ಆಕರ್ಷಕ ಪಥ ಸಂಚಲನ ಬಳಿಕ ಶಾರೀರಿಕ ಪ್ರದರ್ಶನ ನಡೆಯಿತು.

No comments:

Post a Comment