Monday, October 24, 2011

ಯಕ್ಷಗಾನ, ಜಾನಪದ ವಿದ್ವಾಂಸ ಪು.ಶ್ರೀನಿವಾಸ ಭಟ್ಟ ಇನ್ನಿಲ್ಲ


ಕಟೀಲು : ನಿವೃತ್ತ ಶಿಕ್ಷಕ, ಯಕ್ಷಗಾನ, ಜಾನಪದ ವಿದ್ವಾಂಸ ಪು.ಶ್ರೀನಿವಾಸ ಭಟ್(೭೨ವ.) ಸೋಮವಾರ ಕಟೀಲಿನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಸೋಮವಾರ ಬೆಳಿಗ್ಗೆ ಬಜಪೆಯ ಬಂಟ್ಸ್ ಪಾಪ್ಯುಲರ್ ಶಾಲೆಯಲ್ಲಿ ದೀಪಾವಳಿ ಆಚರಣೆ ಕಾರ‍್ಯಕ್ರಮದಲ್ಲಿ ಉಪನ್ಯಾಸ ಮುಗಿಸಿ, ರಿಕ್ಷಾದಲ್ಲಿ ಮನೆಗೆ ಬಂದು ಕೂತ ಶ್ರೀನಿವಾಸ ಭಟ್ಟರು ಹೃದಯಾಘಾತವಾಗಿ ಕುಸಿದು ಮೃತಪಟ್ಟರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಕಟೀಲು ಪ್ರಾಥಮಿಕ ಶಾಲೆಯಲ್ಲಿ ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶ್ರೀನಿವಾಸ ಭಟ್ಟರು, ಯಕ್ಷಗಾನ ಕಲಾವಿದರು, ಶ್ರೀ ದೇವೀ ಶತಕ, ದಾವಿದ ವಿಜಯ ಯಕ್ಷಗಾನ ಪ್ರಸಂಗ, ಕೋಲ ಬಲಿ, ಜನಪದ ಶತಪಥ, ಶ್ರೀ ಗಣಪತಿ ಶತ ಕಥಾವಳಿ, ತುಳು ದೇವೀ ಮಾಹಾತ್ಮ್ಯೆ, ಶ್ರೀ ಕೃಷ್ಣ ದೇವರಾಯ ಸೇರಿದಂತೆ ಹನ್ನೊಂದು ಕೃತಿಗಳನ್ನು ರಚಿಸಿದ್ದರು. ನಾಡಿನ ವಿವಿಧ ಪತ್ರಿಕೆಗಳಿಗೆ ೫೫೦ಕ್ಕೂ ಹೆಚ್ಚು ಮೌಲಿಕ ಲೇಖನಗಳನ್ನು ಬರೆದಿದ್ದರು. ಕುಬೆವೂರು ಪುಟ್ಟಣ್ಣ ಶೆಟ್ಟಿ, ಕೊ.ಅ.ಉಡುಪ ಪ್ರಶಸ್ತಿ, ಸುರಗರಿ ಗುರುರಾಜ ಪ್ರಶಸ್ತಿ, ತಾಲೂಕು ಸಮ್ಮೇಳನ, ಮುಂಬೈ ಯಕ್ಷಗಾನ ಸಮ್ಮೇಳನ, ತುಳು ಅಕಾಡಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ೪೦ಕಡೆಗಳಲ್ಲಿ ಸಂಮಾನ ಗೌರವ ಪಡೆದಿದ್ದರು. ವಿವಿಧೆಡೆ ಯಕ್ಷಗಾನ ತಾಳಮದ್ದಲೆಗಳ ತೀರ್ಪುಗಾರರಾಗಿ, ಅಷ್ಟಾವಧಾನ ಪೃಚ್ಚಕರಾಗಿ, ನೂರಾರು ಕಡೆ ಉಪನ್ಯಾಸಗಳನ್ನು ನೀಡಿದ್ದರು.
ಕಟೀಲಿನಲ್ಲಿ ಯಕ್ಷಗಾನೀಯ ವಾತಾವರಣವನ್ನುಂಟು ಮಾಡಿದವರಲ್ಲಿ ಭಟ್ಟರೂ ಒಬ್ಬರು. ಸಾವಿರಾರು ಅಮೂಲ್ಯ ಕೃತಿಗಳ ಸಂಗ್ರಾಹರಾಗಿ, ಪರಿಸರದ ಶಿಲಾಶಾಸನಗಳ ಸಂಶೋಧಕರಾಗಿ ಅಧ್ಯಯನಕಾರರಿಗೆ ಆಕರ ವ್ಯಕ್ತಿಯಾಗಿದ್ದರು.

No comments:

Post a Comment