Monday, August 24, 2015
Sunday, August 9, 2015
ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ
ಬ್ರಾಹಣತ್ವ ಉಳಿಸಿ - ವಾದಿರಾಜ ಕೊಲಕಾಡಿ
ಕಟೀಲು : ಜಪ, ತಪ, ಪೂಜೆ ಪುನಸ್ಕಾರಗಳಿಂದ ಆಚಾರಗಳಿಂದ ವ್ರತಾನುಷ್ಟಾನಗಳಿಂದ ಬ್ರಾಹ್ಮಣತ್ವವನ್ನು ಉಳಿಸುವ ಜವಾಬ್ದಾರಿ ಇದೆ ಎಂದು ವಿದ್ವಾಂಸ ವಾದಿರಾಜ ಕೊಲಕಾಡಿ ಹೇಳಿದರು.
ಅವರು ಭಾನುವಾರ ಕಟೀಲು ಸಾನಿಧ್ಯ ಸಭಾಭವನದಲ್ಲಿ ನಡೆದ
ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಮೂಡುಬಿದ್ರೆಯ ಉದ್ಯಮಿ ಶ್ರೀಪತಿ ಭಟ್ ಪ್ರತಿಭಾ ಪುರಸ್ಕಾರ ನೀಡಿದರು.
ಸಾಹಿತಿ ಗಾಯತ್ರಿ ಎಸ್. ಉಡುಪರನ್ನು ಸಂಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ವಿತರಿಸಿದರು.
ಅಧ್ಯಕ್ಷ ಡಾ. ಶಶಿಕುಮಾರ್ ಸಂಘದ ಚಟುವಟಿಕೆಗಳ ಕುರಿತು ಮಾತನಾಡಿದರು. ಉಪಾಧ್ಯಕ್ಷ ಎಕ್ಕಾರು ಡಾ. ಪದ್ಮನಾಭ ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ರಾಘವೇಂದ್ರ ಭಟ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ವೇದವ್ಯಾಸ ಉಡುಪ ವಂದಿಸಿದರು. ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಟೀಲು ದೇಗುಲದಲ್ಲಿ ೧೨೨ ಮಂದಿಯಿಂದ ರಕ್ತದಾನ ಶಿಬಿರ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಸರೆಯಲ್ಲಿ ಕಟೀಲು ಕಾಲೇಜು ಎನ್ಎಸ್ಎಸ್, ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್, ವೀರಮಾರುತಿ ವ್ಯಾಯಾಮ ಶಾಲೆ, ವಿಜಯ ಯುವ ಸಂಗಮ, ಆದರ್ಶ ಬಳಗ, ಕುಕ್ಕಟ್ಟೆ ಯಕ್ಷಗಾನ ಬಯಲಾಟ ಸಮಿತಿ, ಚೇತನಾ, ದುರ್ಗಾಂಬಿಕಾ ಮಂಡಲ, ನಂದಿನಿ ಬ್ರಾಹ್ಮಣ ಸಭಾ, ಸಜ್ಜನ ಬಂಧುಗಳು ಮುಂತಾದ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ ಕೆಎಂಸಿ ಆಸ್ಪತ್ರೆ ಹಾಗೂ ವೆನ್ಲಾಕ್ ಆಸ್ಪತ್ರೆಗೆ ೧೨೨ ಮಂದಿ ರಕ್ತದಾನ ಮಾಡಿದರು.
ಕಟೀಲು ದೇಗುಲ ಅರ್ಚಕ ಶ್ರೀಹರಿ ಆಸ್ರಣ್ಣ, ವೇದವ್ಯಾಸ ತಂತ್ರಿ, ಕೃಷ್ಣರಾಜ ತಂತ್ರಿ,, ಜಿ.ಪಂ.ಸದಸ್ಯ ಈಶ್ವರ ಕಟೀಲ್, ಶಾಲೆಟ್ ಪಿಂಟೋ ಉದ್ಘಾಟಿಸಿದರು. ಕೆಎಂಸಿ ಬ್ಲಡ್ ಬ್ಯಾಂಕ್ನ ಭವಾನಿಶಂಕರ್, ದೇಗುಲದ ಪ್ರಬಂಧಕ ವಿಜಯ ಕುಮಾರ್, ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ, ಎನ್ಎಸ್ಎಸ್ನ ಸುನೀತಾ, ಕೃಷ್ಣ ಕಾಂಚನ್, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಸರೋಜಿನಿ, ಉಪಾಧ್ಯಕ್ಷ ಮಾರ್ಗನ್, ಸದಸ್ಯರಾದ ಜನಾರ್ದನ ಕಿಲೆಂಜೂರು, ದಾಮೋದರ್ ಶೆಟ್ಟಿ, ರಮಾನಂದ ಪೂಜಾರಿ, ದೇವದಾಸ ಮಲ್ಯ, ವ್ಯಾಯಾಮ ಶಾಲೆಯ ಕೇಶವ ಕರ್ಕೇರ, ಜೆರಾಲ್ಡ್ ಮಿನೇಜಸ್, ನಿಶಾಂತ್ ಕಿಲೆಂಜೂರು, ರಘುನಾಥ್ ಕಾಮತ್, ಶಿಕ್ಷಕ ಗೋಪಾಲ ಶೆಟ್ಟಿ ಮುಂತಾದವರಿದ್ದರು.
Subscribe to:
Posts (Atom)