Sunday, January 19, 2014

ಕಟೀಲು ಶಿಲಾನ್ಯಾಸ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರ ಮೂಲಸ್ಥಾನ ಕುದ್ರುವಿನಲ್ಲಿ ನಿರ್ಮಿಸಲುದ್ದೇಶಿಸಿರುವ ಛಾವಣಿ ರಹಿತ ಗರ್ಭಗುಡಿಗೆ ಭಾನುವಾರ ಶಿಲಾನ್ಯಾಸ ನಡೆಯಿತು. ಆಡಳಿತಾಧಿಕಾರಿ ಕೃಷ್ಣಮೂರ್ತಿ, ವೇದವ್ಯಾಸ ತಂತ್ರಿ, ಅರ್ಚಕರಾದ ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ದಾನಿ ಸತೀಶ್ ಶೆಟ್ಟಿ ಮುಂತಾದವರಿದ್ದರು.

ಅಮ್ಮನೆಡೆಗೆ ಸಹಸ್ರ ಸಹಸ್ರ ಭಕ್ತರ ನಡಿಗೆ

ಭಾನುವಾರ ಮರವೂರಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಭಕ್ತರು ಕಾಲ್ನಡಿಗೆಯಲ್ಲಿ ’ಅಮ್ಮನೆಡೆಗೆ ನಮ್ಮ ನಡಿಗೆ’ ಎಂಬ ಘೋಷದೊಂದಿಗೆ ಸಾಗಿಬಂದು ಪುನೀತರಾದರು. ಅನೇಕ ಭಜನಾ ತಂಡಗಳಲ್ಲಿ ದೇವರ ಹಾಡುಗಳನ್ನು ಹಾಡುತ್ತ, ಕುಣಿಯುತ್ತ ಭಕ್ತರು ಸಾಗಿಬಂದಂತೆ ಕಟೀಲಿನಲ್ಲಿ ಅರ್ಚಕರಾದ ಆಸ್ರಣ್ಣ ಬಂಧುಗಳು ಭಕ್ತರನ್ನು ಸ್ವಾಗತಿಸಿ, ಪ್ರಸಾದ ನೀಡಿದರು.