ಕಟೀಲು : ತಂದೆಯ ಮಾತಿನಂತೆ ವನವಾಸಕ್ಕೆ ತೆರಳಿದ ಶ್ರೀ ರಾಮಚಂದ್ರ ಆದರ್ಶ ಪುರುಷನಾಗಿ ಸರ್ವರಿಂದಲೂ ಪೂಜ್ಯನೀಯನೆನಿಸಿದಾತ. ರಾಮರಾಜ್ಯವಾಗಲಿ ಎಂಬ ಆಶಯದ ಹಿಂದೆ ಅವತ್ತಿನ ಆಡಳಿತದ ಶ್ರೇಷ್ಟತೆ ಅರ್ಥೈಸಿಕೊಳ್ಳಬಹುದೆಂದು ಯಕ್ಷಗಾನ ಕಲಾವಿದ ವಾಟೆಪಡ್ಪು ವಿಷ್ಣು ಶರ್ಮ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಶಾಲಾಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಪ್ರತಿ ತಿಂಗಳು ರಾಮಾಯಣದ ವಿವಿಧ ಪಾತ್ರಗಳ ಪರಿಚಯ ನೀಡುವ ರಾಮಾಯಣ ಕಥಾ ಮಾಲಿಕೆಯಲ್ಲಿ ಶ್ರೀ ರಾಮನ ಬಗ್ಗೆ ಉಪನ್ಯಾಸವಿತ್ತರು.