Thursday, December 1, 2011

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಟೀಲಿನ ಕ್ರೀಡಾಪಟುವಿಗೆ ಸಂಮಾನ



ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಟೀಲಿನ ಕ್ರೀಡಾಪಟುವಿಗೆ ಸಂಮಾನ
ಕಟೀಲು : ೪೦೦ ಮೀಟರ್ ಓಟ ಹಾಗೂ ೪೦೦ಮೀ ರಿಲೇಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಜಯಲಕ್ಷ್ಮೀ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಾದ ಗೀತಾ ಮತ್ತು ಸುಪ್ರೀತಾರನ್ನು ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ಕಟೀಲು ದೇಗುಲದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಸಂಮಾನಿಸಿದರು. ರೋಟರ‍್ಯಾಕ್ಟ್‌ನ ಗಣೇಶ್, ಕಟೀಲ್ ಸ್ಪೋರ್ಟ್ಸ್ ಕ್ಲಬ್‌ನ ವೆಂಕಟರಮಣ ಮಯ್ಯ, ಮುಖ್ಯ ಶಿಕ್ಷಕಿ ಮಾಲತಿ, ಶಿಕ್ಷಕ ವಾಸುದೇವ ಶೆಣೈ, ಕ್ರೀಡಾ ಶಿಕ್ಷಕ ಕೃಷ್ಣ ಮತ್ತಿತರರಿದ್ದರು.

No comments:

Post a Comment