Thursday, November 17, 2011

ಕಟೀಲು ಬ್ರಹ್ಮ ಗುಡಿಗೆ ಸಂಕೋಚ, ನೂತನ ಧ್ವಜಸ್ಥಂಭ


ಕಟೀಲು : ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದ ಬ್ರಹ್ಮರಗುಡಿಗೆ ಬುಧವಾರ ಸಂಕೋಚ ನಡೆಯಿತು.
ಡಿಸೆಂಬರ್ ೪ರಂದು ಶಿಲಾನ್ಯಾಸಗೊಂಡು, ಮಾರ್ಚ್ ೧ರಂದು ಬ್ರಹ್ಮಕಲಶ ಕಾಣಲಿರುವ ನೂತನ ಬ್ರಹ್ಮರ ಗುಡಿಯನ್ನು ಸುಮಾರು ರೂ.೯.೫ಲಕ್ಷದಲ್ಲಿ ಪುನರ್‌ನಿರ್ಮಿಸಲಾಗುವುದು. ಈ ಹಿನ್ನಲೆಯಲ್ಲಿ ಬುಧವಾರ ಹಳೆ ಗುಡಿಯನ್ನು ತೆಗೆಯುವ ಕಾರ‍್ಯ ನಡೆಸಲಾಯಿತು. ಬ್ರಹ್ಮದೇವರನ್ನು ಬಾಲಾಲಯದಲ್ಲಿಡಲಾಯಿತು.
ಯಾವುದಾದರೂ ವಸ್ತು ಕಳೆದು ಹೋದರೆ ಇಲ್ಲಿನ ದೇವರಲ್ಲಿ ಪ್ರಾರ್ಥಿಸಿದರೆ ಅದು ಮರಳಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಸಂಕೋಚದ ಸಂದರ್ಭ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಸಹೋದರರಾದ ಲಕ್ಷ್ಮೀನಾರಾಯಣ, ಅನಂತಪದ್ಮನಾಭ, ಹರಿನಾರಾಯಣ, ಪ್ರಸಾದ, ಕುಮಾರ, ಹಯಗ್ರೀವ ತಂತ್ರಿ, ಸಾಂಸದ ನಳಿನ್ ಕುಮಾರ್, ಐಕಳ ಹರೀಶ್ ಶೆಟ್ಟಿ, ಜಿ.ಪಂ.ಸದಸ್ಯ ಈಶ್ವರ್ ಮುಂತಾದವರಿದ್ದರು.




No comments:

Post a Comment