Saturday, January 14, 2012

ರೂ.೪ಕೋಟಿ ವೆಚ್ಚ ಕಟೀಲು ದೇಗುಲ ಮೂಲಸ್ಥಾನ ಕುದ್ರು ಜೀರ್ಣೋದ್ಧಾರಕ್ಕೆ ಚಾಲನೆ


ಕಟೀಲು : ಪುರಾಣ ಪ್ರಸಿದ್ಧ ಕಟೀಲು ಭ್ರಾಮರೀ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮೂಲಸ್ಥಾನ ಕುದ್ರುವಿನ ಜೀರ್ಣೋದ್ಧಾರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ದೇಗುಲದಲ್ಲಿಡಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಕುದ್ರುವನ್ನು ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದ್ದು ಸುಮಾರು ರೂ.೪ಕೋಟಿಯ ಖರ್ಚನ್ನು ಅಂದಾಜಿಸಲಾಗಿದೆ.
ಯೋಜನೆಯ ಪ್ರಕಾರ ಶ್ರೀಬಂಧ ವಾಸ್ತು ಶೈಲಿಯಲ್ಲಿ ಕಾರ‍್ಯಗಳಾಗಲಿದ್ದು, ಮೂಲ ಲಿಂಗದ ಸ್ಥಳದಲ್ಲಿ ಮೇಲ್ಛಾವಣಿ ರಹಿತ ಗರ್ಭಗುಡಿ, ನಾಗ ದೇವರಿಗೆ ಚಿತ್ರಕೂಟ, ಬ್ರಹ್ಮಗುಡಿ, ಪಿಲಿಚಾಮುಂಡಿ ಗುಡಿ, ಪರಿಧಿ, ಎರಡು ಶಾಸ್ತ್ರೀಯವಾದ ಕೆರೆಗಳು, ಯಜ್ಞಶಾಲೆ, ಯಾಜ್ಞಿಕ ವೃಕ್ಷಗಳ ನೆಡುವಿಕೆಯ ಯೋಜನೆಗಳನ್ನು ಮೂರು ವರ್ಷಗಳ ಅವಧಿಯೊಳಗೆ ನಡೆಸಲಾಗುತ್ತದೆ. ಈಗಿರುವ ದೇಗುಲದಿಂದ ನದಿಯ ಇನ್ನೊಂದು ಪಕ್ಕದಲ್ಲಿರುವ ಕುದ್ರುವಿಗೆ ಹೋಗಲು ಸೇತುವೆಯನ್ನು ರೂ. ೧.೪೦ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತದೆ.
ಕಾಮಗಾರಿ ಚಾಲನೆಯ ಸಂದರ್ಭ ದೇಗುಲದ ಶಿಬರೂರು ಹಯಗ್ರೀಯ ತಂತ್ರಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಬಂಧುಗಳಾದ ಲಕ್ಷ್ಮೀನಾರಾಯಣ, ಅನಂತಪದ್ಮನಾಭ, ಹರಿನಾರಾಯಣದಾಸ, ಸಾಂಸದ ನಳಿನ್ ಕುಮಾರ್, ದಾನಿ ಸತೀಶ್ ಶೆಟ್ಟಿ ಪಡುಬಿದ್ರೆ, ವಾಸ್ತುಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್, ಶಿಲ್ಪಿ ಎಲ್ಲೂರು ವಿಷ್ಣುಮೂರ್ತಿ ಭಟ್ ಮತ್ತಿತರರಿದ್ದರು.

No comments:

Post a Comment