Sunday, January 1, 2012

ಕಟೀಲು ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಭೆ




ಕಟೀಲು : ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಭೆ ಭಾನುವಾರ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಕಟೀಲಿನ ಕನ್ನಡ ಶಾಲೆಯನ್ನು ಇನ್ನಷ್ಟು ಬೆಳೆಸುವ, ಸುದೃಢವಾಗಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಬೇಕು. ೨೦೧೩-೧೪ರಲ್ಲಿ ನಡೆಯಲಿರುವ ಶಾಲೆಯ ಸುವರ್ಣ ಮಹೋತ್ಸವ ವರ್ಷ ಮತ್ತು ಮುಂದಿನ ದಿನಗಳಲ್ಲೂ ಶಾಲೆಯ ಯಶಸ್ಸಿಗೆ ಸಹಕರಿಸಬೇಕೆಂದು. ಈ ಶಾಲೆಯಲ್ಲಿ ೧೨ಸಾವಿರದಷ್ಟು ಮಂದಿ ಹತ್ತನೆಯ ತರಗತಿ ಪೂರೈಸಿದ್ದಾರೆ ಎಂದು ಉಪಪ್ರಾಚಾರ‍್ಯ ಸುರೇಶ್ ಭಟ್ ವಿನಂತಿಸಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ, ದೇಗುಲದ ಸಹಕಾರದೊಂದಿಗೆ ವಿದ್ಯಾಭಿಮಾನಿಗಳು ಈ ಕನ್ನಡ ಶಾಲೆಯನ್ನು ಇನ್ನಷ್ಟು ಎತ್ತರಕ್ಕೇರಿಸಬೇಕು. ಐದು ಸಾವಿರದಷ್ಟಾದರೂ ಹಳೆ ವಿದ್ಯಾರ್ಥಿಗಳನ್ನು ಸೇರಿಸುವ ಕೆಲಸವಾಗಬೇಕೆಂದರು.
ಜಿ.ಪಂ.ಸದಸ್ಯ ಈಶ್ವರ್ ಕೆ, ತಿಮ್ಮಪ್ಪ ಕೋಟ್ಯಾನ್, ಸುಂದರ ಪೂಜಾರಿ, ಸಾಯಿನಾಥ ಶೆಟ್ಟಿ, ಕೆ.ವಿ.ಶೆಟ್ಟಿ, ವಿಜಯಲಕ್ಷ್ಮೀ ಶಿಬರೂರು, ಸುಬ್ರಹ್ಮಣ್ಯ ಆಚಾರ‍್ಯ, ಅರುಣಾ ಮುಂತಾದವರು ಅಭಿಪ್ರಾಯ ಮಂಡಿಸಿದರು.

No comments:

Post a Comment