Sunday, January 8, 2012

ರೇಬೀಸ್ ಲಸಿಕೆ ನೀಡಿಕೆ


ಕಟೀಲು : ಮೆನ್ನಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಅಜಾರು, ಮಲ್ಲಿಗೆಅಂಗಡಿ, ಕೆಮ್ಮಡೆ, ಉಲ್ಲಂಜೆ ಪ್ರದೇಶಗಳಲ್ಲಿ ನೂರಕ್ಕೂ ಹೆಚ್ಚು ನಾಯಿ, ದನಗಳಿಗೆ ರೇಬೀಸ್ ಲಸಿಕೆಯನ್ನು ಕಿನ್ನಿಗೋಳಿ ರೋಟರ‍್ಯಾಕ್ಟ್, ಮೆನ್ನಬೆಟ್ಟು ಪಂಚಾಯತ್, ಪಶು ಇಲಾಖೆಯ ವತಿಯಿಂದ ನೀಡಲಾಯಿತು. ಡಾ.ಸತ್ಯಶಂಕರ್, ರೋಟರ‍್ಯಾಕ್ಟ್‌ನ ಗಣೇಶ್ ಕಾಮತ್, ಪಂಚಾಯತ್‌ನ ಶೈಲಾ ಶೆಟ್ಟಿ, ಅರುಣ್ ಕುಮಾರ್ ಮತ್ತಿತರರಿದ್ದರು. ಇತ್ತೀಚಿಗೆ ಕಟೀಲು ಪ್ರದೇಶದಲ್ಲಿ ಹುಚ್ಚು ನಾಯಿ ಕಡಿತ ಪ್ರಕರಣಗಳಾದ್ದರಿಂದ ಈ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

No comments:

Post a Comment