Saturday, September 4, 2010

ಕಟೀಲು ಪದವೀಪೂರ್ವ ಕಾಲೇಜು ಶಿಕ್ಷಕ ರಕ್ಷಕ ಸಂಘದ ಮಹಾ ಸಭೆ


ಶಾಲೆ, ಕಾಲೇಜುಗಳಿಗೆ ಕಳುಹಿಸಿದಾಕ್ಷಣ ತಮ್ಮ ಕರ್ತವ್ಯ ಮುಗಿಯಿತೆಂದು ತಿಳಿಯದೆ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಗಮನ ಇರಿಸಬೇಕೆಂದು ನಿಟ್ಟೆ ವಿದ್ಯಾಸಂಸ್ಥೆಯ ಸುಧೀರ್‌ರಾಜ್ ಹೇಳಿದರು.

ಅವರು ಸ.4ರ ಶನಿವಾರ ಕಟೀಲು ದೇವಳ ಪದವೀಪೂರ್ವ ಕಾಲೇಜಿನಲ್ಲಿ ಶಿಕ್ಷಕರಕ್ಷಕ ಸಂಘದ ಮಹಾಸಭೆಯಲ್ಲಿ ಉಪನ್ಯಾಸವಿತ್ತರು.

ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶಿಕ್ಷಕರಕ್ಷಕ ಸಂಘದ ರಾಮಚಂದ್ರ ಶೆಟ್ಟಿ, ರಾಘವೇಂದ್ರ ಭಟ್, ಸುಮಂಗಲಾ ಆರ್. ಪ್ರಾಚಾರ್ಯ ಜಯರಾಮ ಪೂಂಜ, ಉಪಪ್ರಾಚಾರ್ಯ ಸುರೇಶ್ ಭಟ್ ಮತ್ತಿತರರಿದ್ದರು.

ಭಾರತೀ ಎಸ್ . ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸುಮಾರು ಏಳುನೂರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಉಪನ್ಯಾಸಕರು ಸಭೆಗೆ ತಮ್ಮ ಪರಿಚಯ ಹೇಳಿದರು.

No comments:

Post a Comment