Tuesday, September 2, 2014

ಪ್ರತಿಭಾಕಾರಂಜಿ

ದಿನಾಂಕ ೨೭.೦೮.೨೦೧೪ರಂದು ಪದ್ಮನೂರು ಮತ್ತು ಉಲ್ಲಂಜೆ ಕ್ಲಸ್ಟರ‍್ಗಳ ಪ್ರತಿಭಾಕಾರಂಜಿ ೨೦೧೪. ಕಟೀಲು ಶ್ರೀ ದು.ಪ.ಹಿ.ಪ್ರಾ.ಶಾಲೆಯಲ್ಲಿ ಜರಗಿತು.ಕಾರ್ಯಕ್ರಮವನ್ನು ದುರ್ಗಾಪರಮೇಶ್ವರೀ ದೇವಳದ ಆನುವಂಶಿಕ ಮೊಕ್ರೇಸರ ಕೆ,ವಾಸುದೇವ ಆಸ್ರಣ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಜನಾರ್ದನ ಕಿಲೆಂಜೂರು ವಹಿಸಿದ್ದರು.ಪಂಚಾಯತ್ ಸದಸ್ಯರಾದ ಶ್ರೀಮತಿ ರೋಜಿ ಪಿಂಟೋ ಶ್ರೀ ರಾಮ್ ಗೋಪಾಲ್,ಶಾಲಾಭಿವೃದ್ಧಿ ಅಧ್ಯಕ್ಷ ವೆಂಕಟರಮಣ ಹೆಗಡೆ,ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಗದೀಶ ನಾವಡ,ದೇವಳದ ಪ್ರೌಢಶಾಲಾ ಉಪ ಪ್ರಾಚಾರ‍್ಯ ಶ್ರೀ ಕೆ.ವಿ ಶೆಟ್ಟಿ ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ಮತ್ತು ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.ಶಿಕ್ಷಕ ಶ್ರೀ ವಾಸುದೇವ ಶೆಣೈ ಕಾರ‍್ಯಕ್ರಮ ನಿರೂಪಿಸಿದರು.ಶಿಕ್ಷಕ ವೈ.ಗೋಪಾಲ ಶೆಟ್ಟಿ ವಂದಿಸಿದರು

No comments:

Post a Comment