Thursday, March 1, 2012

ಕಟೀಲು ಬ್ರಹ್ಮಗುಡಿಯಲ್ಲಿ ಕಲಶಾಭಿಷೇಕ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಸುಮಾರು ಹತ್ತು ಲಕ್ಷ ರೂ.ನಲ್ಲಿ ಶಿಲಾಮಯ ಮತ್ತು ಕೆಂಪು ಕಲ್ಲಿನಿಂದ ನಿರ್ಮಾಣಗೊಂಡ ಬ್ರಹ್ಮರ ಗುಡಿಯಲ್ಲಿ ಪುನರ್ ಪ್ರತಿಷ್ಟೆ ಹಾಗೂ ಬ್ರಹ್ಮಕಲಶಾಭಿಷೇಕ ಗುರುವಾರ ನಡೆಯಿತು.
ಶಿಬರೂರು ಹಯಗ್ರೀವ ತಂತ್ರಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್, ಸ್ಕಂದ ಪ್ರಸಾದ ಭಟ್, ಸಾಂಸದ ನಳಿನ್ ಕುಮಾರ್, ದಾನಿಗಳಾದ ಗಣೇಶ ಬಂಗೇರ, ಪದ್ಮನಾಭ ಬಂಗೇರ, ರಾಘವೇಂದ್ರ ಆಚಾರ‍್ಯ, ರವಿ ಆಚಾರ‍್ಯ, ಜಯಾನಂದ ರಾವ್ ಮತ್ತಿತರರಿದ್ದರು.

No comments:

Post a Comment