Tuesday, March 6, 2012

ಶ್ರದ್ಧೆ ಶ್ರಮದಿಂದ ಸಾಧನೆ


ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಭಯ ಬೇಡ. ಅಸಾಮಾನ್ಯ ಬುದ್ಧಿವಂತಿಕೆಗಿಂತಲೂ ಒಂದಿಷ್ಟು ಶ್ರದ್ಧೆ ಮತ್ತು ಶ್ರಮದಿಂದ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಗೊಳ್ಳುವುದು ಕಷ್ಟವಲ್ಲ. ವಾಣಿಜ್ಯ ಪದವಿಯ ಬಳಿಕ ಚಾರ್ಟರ್ಡ್ ಅಕೌಂಟೆಟ್, ಕಾಸ್ಟ್ ಮತ್ತು ವರ್ಕ್ಸ್ ಅಕೌಂಟೆಟ್, ಕಂಪನಿ ಸಕ್ರೆಟರಿಯಂತಹ ವಿಷಯಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಭವಿಷ್ಯ ಉಜ್ವಲವಿದೆ ಎಂದು ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಟ್ಸ್ ತರಬೇತಿ ಸಂಸ್ಥೆ ಕಾಪ್ಸ್ ಅಕಾಡಮಿ ಮುಖ್ಯಸ್ಥ ಚಂದ್ರಶೇಖರ್ ಶೆಟ್ಟಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಡಾ.ಕ್ರಣ, ಕುಮಾರಿ ತೀಕ್ಷಿತಾ, ನೀಲನ್, ಸಚಿವ್ ಮತ್ತಿತರರಿದ್ದರು.

No comments:

Post a Comment