ಕಟೀಲು ಪದವೀಪೂರ್ವ ಕಾಲೇಜಿನಲ್ಲಿ 42ವರುಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆಸಲ್ಲಿಸಿ, ನಿವ್ರತ್ತರಾದ, ಸಂಸ್ಥೆಗೆ ನೂರಾರು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪ್ರಶಸ್ತಿಗಳನ್ನು ತಂದುಕೊಟ್ಟ ಸುಂದರ ಪೂಜಾರಿಯವರನ್ನು ಅವರ ಅಭಿಮಾನಿ ಹಾಗೂ ಶಿಷ್ಯರ ಬಳಗ ಕಟೀಲಿನ ರಥಬೀದಿಯಲ್ಲಿ ನ.21ರಂದು ಅದ್ದೂರಿಯಾಗಿ ಸಂಮಾನಿಸಿತು.
ಸುಂದರ ಪೂಜಾರಿ ವಿಮಲಾ ಪೂಜಾರಿ ದಂಪತಿಗಳನ್ನು ಸಂಮಾನ ಪತ್ರ, ಬಂಗಾರದ ಸರ ನೀಡಿ ಅಭಿನಂದಿಸಲಾಯಿತು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಡಾ.ಮೋಹನ ಆಳ್ವ, ಅರ್ಚಕರಾದ ವಾಸುದೇವ, ಲಕ್ಷ್ಮೀನಾರಾಯಣ, ಅನಂತಪದ್ಮನಾಭ ಆಸ್ರಣ್ಣರು, ಸುಂದರ ಶೆಟ್ಟಿ, ವಿಜಯಲಕ್ಷ್ಮೀ ಶಿಬರೂರು, ಡಾ.ಸುರೇಶ್ ರಾವ್ ಸೇರಿದಂತೆ ಶಿಷ್ಯರು ಉಪಸ್ಥಿತರಿದ್ದರು.
No comments:
Post a Comment