Thursday, November 18, 2010

ಕಟೀಲಿನಲ್ಲಿ ಕ್ರೀಡಾಕೂಟ, ಕ್ರೀಡಾಶಿಕ್ಷಕ ಸುಂದರ ಪೂಜಾರಿಗೆ ಅಭಿನಂದನೆ




ಕಟೀಲು : ಇಲ್ಲಿನ ಪ್ರೌಢ ಹಾಗೂ ಪದವೀಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕು ದಶಕಗಳ ಕಾಲ ದೈಹಿಕ ಕ್ರೀಡಾ ಶಿಕ್ಷಕರಾಗಿ ನೂರಾರು ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ರೂಪಿಸಿದ ಸುಂದರ ಪೂಜಾರಿಯವರಿಗೆ ಕಟೀಲಿನ ರಥಬೀದಿಯಲ್ಲಿ ತಾ.೨೧ರ ಸಂಜೆ ೫ಗಂಟೆಗೆ ಗುರುವಂದನೆ ಕಾರ್‍ಯಕ್ರಮ ಜರಗಲಿದೆ.ಅಂದು ನಡೆಯುವ ಸಮಾರಂಭದಲ್ಲಿ ಸಚಿವ ಕೃಷ್ಣ ಪಾಲೇಮಾರ್, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಸದಾನಂದ ಶೆಟ್ಟಿ, ಡಾ.ಮೋಹನ ಆಳ್ವ, ಜಿಲ್ಲಾ ಶಾರೀರಿಕ ಶಕ್ಷಕರ ಸಂಘದ ದಿವಾಕರ ಹೆಗ್ಡೆ, ಶಾರೀರಿಕ ಶಿಕ್ಷಣ ಇಲಾಖೆಯ ಎಂ.ಎನ್.ನಾಯಕ್, ಸುಂದರ ಶೆಟ್ಟಿ, ಶೈಲಾ ಶೆಟ್ಟಿ, ಸುವರ್ಣ ಟಿವಿಯ ವಿಜಯಲಕ್ಷ್ಮೀ ಶಿಬರೂರು ಭಾಗವಹಿಸಲಿದ್ದು, ಗಣನಾಥ ಎಕ್ಕಾರು ಅಭಿನಂದನೆ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಸುಂದರ ಪೂಜಾರಿಯವರ ಕ್ರೀಡಾ ಶಿಷ್ಯರಿಗೆ ಗೌರವಾರ್ಪಣೆ, ರಾಷ್ಟ್ರಮಟ್ಟದ ಕ್ರೀಡಾಪಟು ಅರುಣಾ ರಾವ್‌ರಿಂದ ಸುಗಮ ಸಂಗೀತ, ಚಕ್ರವರ್ತಿ ಸೂಲಿಬೆಲೆ ತಂಡದಿಂದ ರಾಷ್ಟ್ರದೇವೋಭವ ಕಾರ್‍ಯಕ್ರಮ ಜರಗಲಿದೆ.ಕಟೀಲಿನಲ್ಲಿ ತಾಲೂಕು ಕ್ರೀಡಾಕೂಟಅಭಿನಂದನೆ ಸಮಿತಿಯಿಂದ ಬುಧವಾರ ಕಟೀಲಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕಟೀಲಿನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಕ್ರೀಡಾಕೂಟ ಉದ್ಘಾಟಿಸಿದರು. ಸುಂದರ ಪೂಜಾರಿ, ಈಶ್ವರ ಕಟೀಲ್, ತಿಮ್ಮಪ್ಪ ಕೋಟ್ಯಾನ್, ಅರುಣಾ ರಾವ್, ದಯಾನಂದ ಮಾಡ, ವಿಜಯಕುಮಾರ್ ಶೆಟ್ಟಿ, ಉದಯಕುಮಾರ್, ಸುದೀಪ್ ಅಮೀನ್, ಎನ್.ಎಸ್.ಅಂಗಡಿ, ಕೆ.ವಿ.ಶೆಟ್ಟಿ ಮತ್ತಿತರರಿದ್ದರು.
ಚಿತ್ರ : ಸುಂದರಪೂಜಾರಿ ಅಭಿನಂದನ ಸಮಿತಿಯಿಂದ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಿತು.

No comments:

Post a Comment