Sunday, July 20, 2014

ಕಟೀಲು ತಾಳಮದ್ದಲೆ ದಶಾಹ ಮಹಾಮಂತ್ರಾರ್ಣವ ಸಮಾರೋಪ

ಆಟ ಕೂಟಗಳಲ್ಲೂ ಕಲಾಸೇವೆ
ಕಟೀಲು : ಕಟೀಲು ಕ್ಷೇತ್ರ ಕೇವಲ ಆಟದಲ್ಲಷ್ಟೇ ಅಲ್ಲದೆ ತಾಳಮದ್ದಲೆಕೂಟಗಳಲ್ಲೂ ಉತ್ತೇಜನ, ಪ್ರೋತ್ಸಾಹದೊಂದಿಗೆ ಯಕ್ಷಗಾನ ಕಲಾಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಖ್ಯಾತ ವೈದ್ಯ ಡಾ.ಪದ್ಮನಾಭ ಕಾಮತ್ ಹೇಳಿದರು.
ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ನಡೆಯುತ್ತಿದ್ದ ತಾಳಮದ್ದಲೆ ಸಪ್ತಾಹದ ದಶಮಾನೋತ್ಸವ ಪ್ರಯುಕ್ತ ದಶಾಹ ಮಂತ್ರ ಮಹಾರ್ಣವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯಕ್ಷಗಾನ ಪ್ರಸಂಗಕರ್ತ, ಸಂಯೋಜಕ, ಕಲಾವಿದ ವಾಸುದೇವ ರಂಗಾಭಟ್, ನಿರೂಪಕ ಶಿಕ್ಷಕ ವಾಸುದೇವ ಶೆಣೈಯವರನ್ನು ಸಂಮಾನಿಸಲಾಯಿತು. ಮೂಡುಬಿದ್ರೆಯ ನಾರಾಯಣ ಪಿ.ಎಂ, ರಾಜೇಶ ಚೌಟ, ಜಗದೀಶ ಶೆಟ್ಟಿ ಮಳವೂರು, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಡಾ.ಭಾಸ್ಕರಾನಂದ ಕುಮಾರ್ ಮತ್ತಿತರರಿದ್ದರು.
ಇತ್ತೀಚಿಗೆ ನಿಧನರಾದ ಕಲಾವಿದರಾದ ಕಡಂದೇಲು ಪುರುಷೋತ್ತಮ ಭಟ್ ಹಾಗೂ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಸ್ಮರಣೆಯನ್ನು ಮಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಶ್ರದ್ಧಾಂಜಲಿ ಅರ್ಪಿಸಿದರು.
ಆಡಳಿತಾಧಿಕಾರಿ ನಿಂಗಯ್ಯ ಸ್ವಾಗತಿಸಿದರು. ಕಮಲಾದೇವಿಪ್ರಸಾದ ಆಸ್ರಣ್ಣ ತಾಳಮದ್ದಲೆ ದಶಾಹದ ಬಗ್ಗೆ ಮಾತನಾಡಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ವಂದಿಸಿದರು. ಭಾನುವಾರ ದಿನವಿಡೀ ರಾಮಾಂಜನೇಯ ಕಾಳಗ ಹಾಗೂ ಭೀಷ್ಮಾರ್ಜುನ ತಾಳಮದ್ದಲೆ ನಡೆಯಿತು.

No comments:

Post a Comment