Friday, July 11, 2014

ಕಟೀಲು ತಾಳಮದ್ದಲೆ ದಶಾಹ ಮಂತ್ರ ಮಹಾರ್ಣವ ಉದ್ಘಾಟನೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ನಡೆಯುವ ತಾಳಮದ್ದಲೆ ಸಪ್ತಾಹದ ದಶಮಾನೋತ್ಸವ ಪ್ರಯುಕ್ತ ಹತ್ತು ದಿನಗಳ ತಾಳಮದ್ದಲೆ ದಶಾಹ ಮಂತ್ರ ಮಹಾರ್ಣವ ಸರಣಿಯನ್ನು ಕಟೀಲು ಸರಸ್ವತೀ ಸದನದಲ್ಲಿ ಖ್ಯಾತ ಕಲಾವಿದ ಬಲಿಪ ನಾರಾಯಣ ಭಾಗವತರು ಉದ್ಘಾಟಿಸಿದರು.
ಶರವು ದೇಗುಲದ ರಾಘವೇಂದ್ರ ಶಾಸ್ತ್ರಿ, ಆಸರೆ ಚಾರಿಟೇಬಲ್ ಟ್ರಸ್ಟ್‌ನ ಡಾ. ಆಶಾಜ್ಯೋತಿ ರೈ, ವಿಫೋರ್ ಮೀಡಿಯಾದ ಲೀಲಾಕ್ಷ ಕರ್ಕೇರ, ದ.ಕ.ಕಸಾಪದ ಪ್ರದೀಪ ಕುಮಾರ ಕಲ್ಕೂರ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಮತ್ತಿತರರಿದ್ದರು. ವಾಸುದೇವ ಶೆಣೈ ನಿರೂಪಿಸಿದರು.  ಬಳಿಕ ಮಂತ್ರ ನಾರಾಯಣ ವರ್ಮದ ವಿಶ್ವರೂಪ ವೃತ್ರೋಪಾಖ್ಯಾನ ಪ್ರಸಂಗದ ತಾಳಮದ್ದಲೆ ನಡೆಯಿತು.  ಇಂದು ಗಾಯತ್ರೀ ಮಾಹಾತ್ಮ್ಯೆ ನಾಳೆ ಅಷ್ಟಾಕ್ಷರೀ ಮಾಹಾತ್ಮ್ಯಂ ಜರಗಲಿದೆ.

No comments:

Post a Comment