Friday, February 14, 2014

ಕಟೀಲಿನಲ್ಲಿ ನಂದಿನಿ ಅವತರಣ ದಿನ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಂದಿನೀ ಅವತರಣ ದಿನದ ಅಂಗವಾಗಿ ಶುಕ್ರವಾರ ಶ್ರೀ ದೇವಿಗೆ ವಿಶೇಷ ಪೂಜೆ, ಸೀಯಾಳಾಭಿಷೇಕ, ಸಾವಿರ ಲೀಟರ್ ಹಾಲಿನ ಕ್ಷೀರಪಾಯಸ ಸೇವೆ ನಡೆಯಿತು. ಬೆಂಗಳೂರು ದೇವನಹಳ್ಳಿಯ ಮುನಿಯಪ್ಪ ಎಂಬ ಹೂವಿನ ವ್ಯಾಪಾರಿ ಇಡೀ ದೇಗುಲವನ್ನು ಹೂವಿನ ಅಲಂಕಾರದಿಂದ ಸುಂದರಗೊಳಿಸಿದ್ದರು.
ದಿ.ಕೃಷ್ಣ ಆಸ್ರಣ್ಣರ ಸಂಸ್ಮರಣಾರ್ಥವಾಗಿ ಶ್ರೀ ದುರ್ಗಾ ಮಕ್ಕಳ ಮೇಳದ ಬಾಲಕಲಾವಿದರಿಂದ ಯಕ್ಷಗಾನ ಗಾನ ವೈಭವ ಮನಸೂರೆಗೊಂಡಿತು. ಬಳಿಕ ಇಂದ್ರಜಿತು ಕಾಳಗ ಯಕ್ಷಗಾನ ಬಯಲಾಟ ನಡೆಯಿತು.
ಮಂಗಳೂರಿನ ದುರ್ಗಾಫೆಸಿಲಿಟಿ ಸಂಸ್ಥೆಯ ಬೊಂಡಾಲ ಸಚ್ಚಿದಾನಂದ ಶೆಟ್ಟಿ ದೇಗುಲಕ್ಕೆ ಸ್ವಚ್ಛತಾಯಂತ್ರವನ್ನು ಕಾಣಿಕೆಯಾಗಿ ದೇಗುಲಕ್ಕೆ ನೀಡಿದರು. ಈ ಸಂದರ್ಭ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ ಮತ್ತಿತರರಿದ್ದರು.

No comments:

Post a Comment