Saturday, July 20, 2013

ಅವಿಭಜಿತ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ : ಫಲಿತಾಂಶ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘ ಶನಿವಾರ ಆಯೋಜಿಸಲಾದ ಪ್ರೌಢಶಾಲಾ ವಿದ್ಯಾರ್ಥಿಗಳ ಅವಿಭಜಿತ ಮಟ್ಟದ ಗಾಯನ ಸ್ಪರ್ಧೆಯ ಫಲಿತಾಂಶ ಹೀಗಿದೆ.
ದೇಶಭಕ್ತಿಗೀತೆ :
ಹುಡುಗರ ವಿಭಾಗ : ಆದಿತ್ಯ ಎಸ್. ಭಟ್, ರೋಟರಿ ಕಿನ್ನಿಗೋಳಿ(ಪ್ರಥಮ), ಸರ್ವಜಿತ್ ಉಪಾಧ್ಯಾಯ, ಲಕ್ಷ್ಮೀಜನಾರ್ದನ ಬೆಳ್ಮಣ್(ದ್ವಿತೀಯ), ಸುಜ್ಞಾನ ಹೇರಳೆ, ವಿವೇಕಾನಂದ ಪುತ್ತೂರು(ತೃತೀಯ)
ಹುಡುಗಿಯರ ವಿಭಾಗ : ಸಮನ್ವಿ ರೈ, ವಿವೇಕಾನಂದ ಪುತ್ತೂರು(ಪ್ರಥಮ), ನಿರೀಕ್ಷಾ ಯು.ಕೆ, ಬೆಸೆಂಟ್ ಮಂಗಳೂರು(ದ್ವಿತೀಯ), ನೈಮಿಶಾ ಶೆಟ್ಟಿ, ಸೈಂಟ್ ಫ್ರಾನ್ಸಿಸ್ ಮುದರಂಗಡಿ
ಭಾವಗೀತೆ
ಹುಡುಗರ ವಿಭಾಗ : ರಾಧೇಶ್, ರೋಟರಿ ಮೂಡುಬಿದ್ರೆ(ಪ್ರಥಮ), ಮಯೂರ್, ಆಳ್ವಾಸ್ ಮೂಡುಬಿದ್ರೆ(ದ್ವಿತೀಯ), ಶಶಾಂಕ್ ಡಿ., ವಿವೇಕಾನಂದ ಪುತ್ತೂರು(ತೃತೀಯ)
ಹುಡುಗಿಯರ ವಿಭಾಗ : ಪ್ರಶ್ವಿ, ಜೆಸಿಸಿ ಕಾರ್ಕಳ(ಪ್ರಥಮ), ಪೂಜಾ ಎಸ್, ಶಂಕರ ಅಡ್ಯಂತಾಯ ಶಾಲೆ ನಿಟ್ಟೆ(ದ್ವಿತೀಯ), ನಿರೀಕ್ಷಾ ಯು.ಕೆ, ಬೆಸೆಂಟ್ ಮಂಗಳೂರು(ತೃತೀಯ)
ಭಕ್ತಿಗೀತೆ
ಹುಡುಗರ ವಿಭಾಗ : ಆದಿತ್ಯ ಎಸ್.ಭಟ್,ರೋಟರಿ ಕಿನ್ನಿಗೋಳಿ(ಪ್ರಥಮ), ಸಂಪತ್, ವಿದ್ಯಾದಾಯಿನಿ ಸುರತ್ಕಲ್(ದ್ವಿತೀಯ), ಶ್ರೀಶದಾಸ್, ವಿದ್ಯಾವರ್ಧಕ ಮುಂಡ್ಕೂರು(ತೃತೀಯ)
ಹುಡುಗಿಯರ ವಿಭಾಗ : ಆತ್ರೇಯ ಕೃಷ್ಣಾ ಕೆ, ಭುವನೇಂದ್ರ ಕಾರ್ಕಳ(ಪ್ರಥಮ), ನಿರೀಕ್ಷಾ ಯು.ಕೆ, ಬೆಸೆಂಟ್ ಮಂಗಳೂರು(ದ್ವಿತೀಯ), ಶ್ರೇಯ ಶೀಲಾ, ರೋಟರಿ ಮೂಡುಬಿದ್ರೆ(ತೃತೀಯ)
ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿಯನ್ನು ಕಟೀಲು ಝೇಂಕಾರ ಬಳಗದ ಅನಂತಪದ್ಮನಾಭ ಆಸ್ರಣ್ಣ ವಿತರಿಸಿದರು. ಬಜಪೆ ವ್ಯವಸಾಯ ಬ್ಯಾಂಕಿನ ರತ್ನಾಕರ ಶೆಟ್ಟಿ, ಉಪಪ್ರಾಚಾರ್ಯ ಸುರೇಶ್ ಭಟ್ ಮತ್ತಿತರರಿದ್ದರು. ದೇವಿಪ್ರಸಾದ್ ನಿರೂಪಿಸಿದರು.
ಉದ್ಘಾಟನೆ :
ಗಾಯನ ಸ್ಪರ್ಧೆಯನ್ನು ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಹಳೆ ವಿದ್ಯಾರ್ಥಿ ಸಂಘದ ಶ್ರೀಹರಿ ಆಸ್ರಣ್ಣ, ಉದ್ಯಮಿ ಚಿತ್ತರಂಜನ್ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಸುಬ್ರಹ್ಮಣ್ಯಪ್ರಸಾದ ಶಿಬರೂರು ಮತ್ತಿತರರಿದ್ದರು. ಕೆ.ವಿ.ಶೆಟ್ಟಿ ನಿರೂಪಿಸಿದರು.

No comments:

Post a Comment