Sunday, September 2, 2012

ಕಟೀಲು : ತುಳು ತಾಳಮದ್ದಲೆ ಸ್ಪರ್ಧೆ


ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇವಸ್ಥಾನ, ಕುರಲ್ ಇಷ್ಟೆರ್, ಎಕ್ಕಾರು ವಿಜಯ ಯುವ ಸಂಗಮ, ತುಳು ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ಒಂದು ವಾರಗಳ ಕಾಲ ನಡೆದ ತುಳು ತಾಳಮದ್ದಲೆ ಸಪ್ತಾಹ ಸಮಾರೋಪಗೊಂಡಿತು. ಸ್ಪರ್ಧೆಯಲ್ಲಿ ವಿಜೇತ ಕಣಂತೂರು ವೈದ್ಯನಾಥೇಶ್ವರ ಕೃಪಾಪೋಷಿತ ಸಂಘ(ಪ್ರಥಮ), ಕಟೀಲು ಯಕ್ಷಮೈತ್ರಿ(ದ್ವಿತೀಯ), ಪಡುಬಿದ್ರೆ ಗಜಾನನ ಯಕ್ಷರಂಗ(ತೃತೀಯ) ಇವರಿಗೆ ಪ್ರಶಸ್ತಿ ವಿತರಿಸಲಾಯಿತು.
ಶಾಸಕ ಅಭಯಚಂದ್ರ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ವಿಜಯನಾಥವಿಠಲ ಶೆಟ್ಟಿ, ಭಾಸ್ಕರ ದೇವಸ್ಯ, ಎಕ್ಕಾರು ಮೋನಪ್ಪ ಶೆಟ್ಟಿ, ಮಧುಸೂಧನ ಆಚಾರ‍್ಯ, ವಾಮನ ಕರ್ಕೇರ, ವಿ.ಕೆ.ಯಾದವ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

No comments:

Post a Comment