Sunday, September 2, 2012

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ


ಕಟೀಲು : ಇಲ್ಲಿನ ದೇಗುಲದಲ್ಲಿ ಅರ್ಚಕರಾಗಿ, ಮೊಕ್ತೇಸರರಾಗಿ, ಜನಮಾನಸದಲ್ಲಿ ನೆಲೆಯಾಗಿರುವ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಕಾರ‍್ಯಕ್ರಮ ನಡೆಯಿತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಾಂಸದ ನಳಿನ್ ಕುಮಾರ್, ಜಿ.ಪಂ.ಸದಸ್ಯ ಈಶ್ವರ್, ಮುಂಬೈನ ಪ್ರಕಾಶ್ ಭಂಡಾರಿ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ವೆಂಕಟೇಶ ರಾವ್, ಲೀಲಾಕ್ಷ ಕರ್ಕೇರ, ದೇವಪ್ರಸಾದ್, ಪಿ.ಸತೀಶ್ ರಾವ್ ಭುವನಾಭಿರಾಮ ಉಡುಪ, ಸಂಘಟಕ ಲಕ್ಷ್ಮೀನಾರಾಯಣ ಆಸ್ರಣ್ಣ ಮುಂತಾದವರಿದ್ದರು.
ಕುಳಾಯಿ ವಿಷ್ಣುಮೂರ್ತಿ ದೇಗುಲದ ಕೃಷ್ಣ ಹೆಬ್ಬಾರ್, ಕಾವೂರು ಮಹಾಲಿಂಗೇಶ್ವರ ದೇಗುಲದ ಶ್ರೀನಿವಾಸ ಭಟ್‌ರನ್ನು ಸಂಮಾನಿಸಲಾಯಿತು. ಸಂಪಾಜೆ ಶೀನಪ್ಪ ರೈ, ಸೀತಾರಾಮ ಕುಮಾರ್‌ರಿಗೆ ಆಸ್ರಣ್ಣ ಪ್ರಶಸ್ತಿ ನೀಡಲಾಯಿತು.

No comments:

Post a Comment