Thursday, July 28, 2011

ಕಟೀಲು ಪ್ರಾಥಮಿಕ ಶಾಲೆ ಕಟ್ಟಡ ಉದ್ಘಾಟನೆ








ಕಟೀಲು : ೯೫ ವರ್ಷಗಳ ಇತಿಹಾಸದ ೩೨೪ವಿದ್ಯಾರ್ಥಿಗಳು ಕಲಿಯುತ್ತಿರುವ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಒಂದನೇ ಮಹಡಿಯನ್ನು ಸಾಂಸದ ನಳಿನ್ ಕುಮಾರ್ ಗುರುವಾರ ಉದ್ಘಾಟಿಸಿದರು. ತನ್ನ ಸಾಂಸದರ ಅನುದಾನದಿಂದ ರೂ.೪ಲಕ್ಷವನ್ನು ಶಾಲೆಯ ಎದುರಿನ ಇಂಟರ್‌ಲಾಕ್ ಕಾಮಗಾರಿಗೆ ನೀಡುವುದಾಗಿ ತಿಳಿಸಿದ ನಳಿನ್ ಕುಮಾರ್ ಕನ್ನಡ ಶಾಲೆಗಳಲ್ಲಿ ವ್ಯವಸ್ಥೆಗಳು ಚೆನ್ನಾದಾಗ ವಿದ್ಯಾರ್ಥಿಗಳನ್ನು ಸೆಳೆಯಲು ಸಾಧ್ಯವೆಂದರು.ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಮಾತನಾಡಿ, ಕಟೀಲು ದೇಗುಲದಿಂದಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪ್ರವಾಸದ ವ್ಯವಸ್ಥೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.ಕರಾವಳಿಯಲ್ಲಿ ಉಚಿತ ಊಟ, ಶಿಕ್ಷಣ ನೀಡುವ ವ್ಯವಸ್ಥೆ ಇರುವುದು ಕಟೀಲಿನಲ್ಲಿ ಮಾತ್ರ ಎಂದು ಶಾಸಕ ಅಭಯಚಂದ್ರ ಹೇಳಿದರು.ಕಟೀಲಿನ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ದೇಗುಲದ ಆಡಳಿತಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಜಿ.ಪಂ.ಸದಸ್ಯ ಈಶ್ವರ, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ದೈಹಿಕ ಶಿಕ್ಷಣದ ಎನ್.ಎಸ್.ಅಂಗಡಿ ಮತ್ತಿತರರಿದ್ದರು.ಪ್ರಸ್ತಾವನೆಗೈದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಸುಮಾರು ೧೮ಲಕ್ಷ ರೂ.ವೆಚ್ಚದಲ್ಲಿ ಶಾಲೆಗೆ ಸಭಾಭವನ ನಿರ್ಮಿಸಲಾಗುವುದು ಎಂದರು.ಮುಖ್ಯ ಶಿಕ್ಷಕಿ ವೈ.ಮಾಲತಿ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ‍್ಯಕ್ರಮ ನಿರೂಪಿಸಿದರು. ಗೋಪಾಲ್ ವಂದಿಸಿದರು.

No comments:

Post a Comment