Thursday, July 14, 2011

ಮಾದಕ ದ್ರವ್ಯಗಳಿಂದ ದೂರವಿರಿ- ಉಮೇಶ್ ರಾವ್ ಎಕ್ಕಾರು



ಕಟೀಲು : ಮದ್ಯ, ಮಾದಕದ್ರವ್ಯಗಳಿಂದ ಯುವಜನತೆ ದೂರವಿದ್ದಾಗ ಬದುಕಿನಲ್ಲಿ ಯಶಸ್ಸಿನೆಡೆಗೆ ಸಾಗಲು ಸಾಧ್ಯ. ವಿದ್ಯಾವಂತರೂ, ಬುದ್ಧಿವಂತರೂ ಹಾದಿ ತಪ್ಪುವ ಸಾಧ್ಯ ಜಾಸ್ತಿ. ಎಚ್ಚರ ಅಗತ್ಯ ಎಂದು ಸಾಹಿತಿ ಉಮೇಶ್ ರಾವ್ ಎಕ್ಕಾರು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಪದವಿ ಕಾಲೇಜಿನಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಜಿ.ಪಂ.ಸದಸ್ಯ ಈಶ್ವರ, ಧನಂಜಯ ಶೆಟ್ಟಿಗಾರ್, ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಕೃಷ್ಣ ಕಾಂಚನ್, ಕೇಶವ ಎಚ್, ಲತಾ ಅಮೀನ್, ಭುವನಾಭಿರಾಮ ಉಡುಪ ಮತ್ತಿತರರಿದ್ದರು.

No comments:

Post a Comment