Friday, December 6, 2013

ಧ್ವಜಸ್ಥಂಭ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಕೊಡೆತ್ತೂರು ಮಾಗಂದಡಿ ಕುಟುಂಬಿಕರು ಕೊಡುಗೆಯಾಗಿ ನೀಡುವ ಧ್ವಜಸ್ತಂಭಕ್ಕೆ ಸುಳ್ಯದ ಮಿತ್ತೂರು ಉಬರಡ್ಕದ ರಾಮಮೋಹನ ಭಟ್ ಎಂಬವರ ತೋಟದಿಂದ ಮರವನ್ನು ವೈಭವದ ಮೆರವಣಿಗೆಯಲ್ಲಿ ಶುಕ್ರವಾರ ತರಲಾಯಿತು.
ಡಿ.5ರಂದು ಹೊರಟ ಮೆರವಣಿಗೆ ಪುತ್ತೂರು, ಬಂಟ್ವಾಳ, ಮಂಗಳೂರು ಮೂಲ್ಕಿ ತಲುಪಿ, ಶುಕ್ರವಾರ ಡಿ.6ರ ಸಂಜೆ ಹೊತ್ತಿಗೆ ಕಟೀಲಿಗೆ ತರಲಾಯಿತು.
ಸುಮಾರು ೫ಲಕ್ಷ ರೂ. ವೆಚ್ಚದ ಈ ಮರದಿಂದ ಮುಂದಿನ ಎರಡು ವರ್ಷದೊಳಗೆ ಹೊಸ ಧ್ವಜಸ್ಥಂಭವನ್ನು ನಿರ್ಮಿಸಲಾಗುವುದು. ಈಗಿರುವ

ಧ್ವಜಸ್ಥಂಭವನ್ನು ೧೯೭೦ರಲ್ಲಿ ಪ್ರತಿಷ್ಟಾಪಿಸಲಾಗಿದ್ದು ಅದನ್ನು ಪುತ್ತೂರು ಪಾಣಾಜೆಯಿಂದ ತರಲಾಗಿತ್ತು. ಈಗಿನದ್ದು ಬೆಳ್ಳಿಯ ಧ್ವಜಸ್ತಂಭವಾಗಿದ್ದು ಮುಂದಕ್ಕೆ ಹೊಸ ಧ್ವಜಸ್ಥಂಭಕ್ಕೆ ಭಕ್ತರ ಸಹಕಾರದಿಂದ ಬೆಳ್ಳಿಯ ತಗಡಿಗೆ ೪.೫ಕೆಜಿ ಚಿನ್ನವನ್ನು ಹೊದಿಸಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ದೇಗುಲದ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಸಹೋದರರಾದ ಲಕ್ಷ್ಮೀನಾರಾಯಣ, ವೇಂಕಟರಮಣ, ಅನಂತಪದ್ಮನಾಭ, ಕಮಲಾದೇವಿ ಪ್ರಸಾದ, ಶ್ರೀಹರಿನಾರಾಯಣ, ಕುಮಾರ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಕೊಡೆತ್ತೂರು ಮಾಗಂದಡಿ ಕುಟುಂಬದ ಪ್ರಮುಖರಾದ ಬಿ.ಆರ್.ಶೆಟ್ಟಿ, ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ

Sunday, December 1, 2013

ಕಟೀಲು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕಟೀಲು : ನಮ್ಮ ಪುರಾಣ, ಇತಿಹಾಸ, ಸಂಸ್ಕೃತಿಗಳನ್ನು ಮಕ್ಕಳಿಗೆ ತಿಳಿಸುವ ಜೊತೆಗೆ ಸಂಸ್ಕಾರವಂತರನ್ನಾಗಿ ರೂಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಕಟೀಲು ದೇವಳದ ಅರ್ಚಕ ಕಮಲದೇವಿ ಪ್ರಸಾದ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕ್ ಪ್ರಬಂಧಕ ರತ್ನಾಕರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಜಲಜ.ಎಸ್, ಮೆನ್ನಬೆಟ್ಟು ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಶಾಲೆಯ ಹಳೆ ವಿದ್ಯಾರ್ಥಿಗಳಾದ ಕಿರಣ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಉಲ್ಲಂಜೆ ಮತ್ತು ಪದ್ಮನೂರು ಕ್ಲಸ್ಟರ್ ಸಿ.ಆರ್.ಪಿ. ಜಗದೀಶ್ ನಾವಡ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೆಂಕಟರಮಣ ಹೆಗ್ಡೆ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರಾದ ಸರೋಜಿನಿ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ವೈ ಮಾಲತಿ ವಾರ್ಷಿಕ ವರದಿ ನೀಡಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಪದವೀಪೂರ್ವ ಕಾಲೇಜು ಪ್ರತಿಭಾ ಪುರಸ್ಕಾರ


ಕಟೀಲು : ಇಂದಿನ ನಗರದ ಶಿಕ್ಷಣ ಟ್ಯೂಷನ್ ಮತ್ತು ಟೆನ್‌ಶನ್ ಸಹಿತವಾಗಿಯೇ ಇದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಸ್ಕಾರಭರಿತ ನೈತಿಕ ಶಿಕ್ಷಣ ಸಿಗುತ್ತಿದೆ ಆಗಬೇಕು ಎಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಮ್.ಬಿ. ಪುರಾಣಿಕ್, ಕಟೀಲು ದೇವಳ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ,ಶಾಲಾ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಈಶ್ವರ್ ಕಟೀಲ್, ವಿದ್ಯಾರ್ಥಿ ನಾಯಕಿ ಅನುಜ್ಞಾ ಭಟ್ ಮತ್ತಿತರರಿದ್ದರು. ಯುವಜನ ಸೇವಾ ಮತ್ತು ಮೀನುಗಾರಿಕೆ ಸಚಿವ ಕೆ ಅಭಯಚಂದ್ರ ಜೈನ್ ಹಾಗೂ ನಿವೃತ್ತ ಉಪಪ್ರಾಚಾರ್ಯ, ಸಾಹಿತಿ ಉಮೇಶ್ ರಾವ್ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಶಾಲಾ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಪ್ರಾಚಾರ್ಯ ಜಯರಾಮ ಪೂಂಜ ಸ್ವಾಗತಿಸಿದರು. ವಿಜಯಾ ಆಳ್ವ ವಂದಿಸಿದರು. ಭಾರತಿ ಶೆಟ್ಟಿ, ಕವಿತಾ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Tuesday, November 26, 2013

ಕಟೀಲು ಪ್ರಮೋದ್ ಮುತಾಲಿಕ್ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಶ್ರೀ ರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಮಂಗಳವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Sunday, November 24, 2013

katilige shilpa shetty beti


ದೀಪೋತ್ಸವ

ಕಟೀಲು ಶ್ರೀ ದುರ್ಗಾಪರಮೇಶದ್ವರೀ ದೇಗುಲದಲ್ಲಿ ದೀಪೋತ್ಸವ ನಡೆದ ಸಂದರ್ಭ ಹಣ್ಣುಗಳು, ತರಕಾರಿಗಳಿಂದ ನಿರ್ಮಿಸಿದ ಮಂಟಪದಲ್ಲಿ ದೇವರನ್ನು ಪೂಜಿಸಲಾಯಿತು. (ಸ.೨೨)
ಚಿತ್ರ ಕಟೀಲ್ ಸ್ಟುಡಿಯೋ

Friday, November 8, 2013

ಕಟೀಲು ಆರನೆಯ ಮೇಳ ಉದ್ಘಾಟನೆ

ದೇವೀ ಭಕ್ತಿ, ಕಲಾ ಪ್ರೀತಿಯಿಂದ ಸಂಸ್ಕೃತಿಯ ಉಳಿವು-ಪೇಜಾವರ ಶ್ರೀ
ಕಟೀಲು : ಯಕ್ಷಗಾನ ಪ್ರಪಂಚದ ಅದ್ಭುತವೆನಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಆರನೆಯ ಮೇಳದ ಉದ್ಘಾಟನೆ ಹಾಗೂ ಎಲ್ಲ ಮೇಳಗಳ ಈ ವರುಷದ ತಿರುಗಾಟದ ಆರಂಭ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.
ಸಂಜೆ ಕ್ಷೇತ್ರದ ಅರ್ಚಕರಾದ ಆಸ್ರಣ್ಣ ಬಂಧುಗಳಾದ ವಾಸುದೇವ, ಅನಂತಪದ್ಮನಾಭ, ವೆಂಕಟರಮಣ, ಕಮಲಾದೇವೀ ಪ್ರಸಾದ, ಶ್ರೀಹರಿನಾರಾಯಣದಾಸ, ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ, ದೇಗುಲದ ತಂತ್ರಿಗಳಾದ ವೇದವ್ಯಾಸ ತಂತ್ರಿ ಸೇರಿದಂತೆ ನೂರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ದೇವರ ಸಮ್ಮುಖದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ ಆರೂ ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಿದರು. ಇದಕ್ಕಿಂತ ಮೊದಲು ಮೇಳದ ಭಾಗವತರಾದ ಪದ್ಯಾಣ ಗೋವಿಂದ ಭಟ್, ಬಲಿಪ ಪ್ರಸಾದ ಭಟ್, ಗೋಪಾಲಕೃಷ್ಣ, ಮಯ್ಯ,  ಕುಬಣೂರು ಶ್ರೀಧರ ರಾವ್, ಪಟ್ಲ ಸತೀಶ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಹಿಮ್ಮೇಳ ಕಲಾವಿದರಿಂದ ದೇವರ ಎದುರು ತಾಳಮದ್ದಲೆ ನಡೆಯಿತು. ಬಳಿಕ ಸರಸ್ವತೀ ಸದನದಲ್ಲಿ ಮೇಳದ ದೇವರಿಗೆ ಮುನ್ನೂರು ಕಲಾವಿದರ ಉಪಸ್ಥಿತಿಯಲ್ಲಿ ಚೌಕಿಪೂಜೆ ನಡೆಯಿತು.
ಉದ್ಘಾಟನೆ
ಪೇಜಾವರ ಮಠದ ಶ್ರೀ ವಿಶ್ವೇಶತೀಥ ಸ್ವಾಮೀಜಿ ಶ್ರೀ ದೇವೀ ಭಕ್ತಿ ಹಾಗೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಕಟೀಲಿನಲ್ಲಿ ಯಕ್ಷಗಾನ ಮೇಳಗಳು ಆರಕ್ಕೇರಿವೆ. ಆ ಮೂಲಕ ಸಂಸ್ಕೃತಿಯ ಔನತ್ಯವನ್ನು ಹೆಚ್ಚಿಸಿದಂತಾಗಿದೆ. ಈ ಕಾಲದಲ್ಲೂ ದೇವರ ಮೇಲಿನ ಭಕ್ತಿ ಹೆಚ್ಚಾಗಿದೆ. ಕಲೆಯ ಬಗೆಗಿನ ಪ್ರೀತಿ ಹೆಚ್ಚಾಗಿದೆ ಎಂದು ಹೇಳಬಹುದು. ಧರ್ಮ ಪ್ರಸಾರದ ಜೊತೆಗೆ ಒಳಿತನ್ನು ಸಾರುವ ಯಕ್ಷಗಾನ ಎಂದರೆ ಅದು ದೇವರಿಗೆ ಮಾಡುವ ನೃತ್ಯ, ಸಂಗೀತ ಆರಾಧನೆ. ಯಕ್ಷಗಾನ ಮೇಳಗಳಿಗೆ ಕಟೀಲು ಸೇನಾಧಿಪತಿಯಂತೆ ಇದೆ. ಅನೇಕ ಮೇಳಗಳಿಗೆ ಆಟಗಳು ಸಿಗುವುದಿಲ್ಲ. ಆದರೆ ಕಟೀಲು ಮೇಳಗಳಿಗೆ ಪುರುಸೊತ್ತೇ ಇಲ್ಲ ಎಂಬ ಸ್ಥಿತಿ.ಭಕ್ತರ ಹೃದಯ ರಂಗಸ್ಥಳದಲ್ಲಿ ಕಲೆ ಮತ್ತು ದೇವರು ಯಕ್ಷಗಾನದ ಮೂಲಕ ಸ್ಥಿರವಾಗಿ ನಿಲ್ಲುವಂತಾಗಲಿ. ಕಟೀಲಿನಲ್ಲಿ ಆಟ, ಊಟ, ಪಾಠದ ಕಾರ‍್ಯಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು,

ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಮಾಲತಿ ಮೊಯ್ಲಿ ಆರನೆಯ ಮೇಳ ಉದ್ಘಾಟಿಸಿದರು. ಡಾ.ವೀರೇಂದ್ರ ಹೆಗ್ಗಡೆ, ಸಚಿವ ವಿನಯಕುಮಾರ ಸೊರಕೆ, ಮಾಣಿಲ ಸ್ವಾಮೀಜಿ, ಸಾಂಸದ ನಳಿನ್ ಕುಮಾರ್, ಆಸ್ರಣ್ಣ ಬಂಧುಗಳು ವೇದಿಕೆಯಲ್ಲಿದ್ದರು. ಮಳೆಗಾಲದಲ್ಲೂ ಕಾಲಮಿತಿಯ ಮೇಳ ಆರಂಭವಾಗಲಿದ್ದು, ೭೦ವರ್ಷ ಮೀರಿದವರು ಆಟ ನೋಂದಾಯಿಸಿದರೆ ಕೂಡಲೇ ಅವಕಾಶ ನೀಡಲಾಗುವುದು. ೮೫೦೦ಯಕ್ಷಗಾನ ಮುಂಗಡ ನೋಂದಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಹತ್ತು ಮೇಳಗಳನ್ನು ಮಾಡುವ ಮನಸ್ಸು ಇದೆ ಎಂದು ಅಜಿತ್ ಕುಮಾರ ಹೆಗ್ಡೆ ಹೇಳಿದರು. ಬಾಲಕೃಷ್ಣ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.
photo by katil studio

Monday, November 4, 2013

katil yakshagana melagala tirugata mattu 6neya mela udgatane




ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಗಳ ಈ ವರುಷದ ತಿರುಗಾಟ ಆರಂಭ ಹಾಗೂ ಆರನೆಯ ಮೇಳದ ಉದ್ಘಾಟನೆ 8-11-2013ರಂದು ನಡೆಯಲಿದೆ. ಆರನೆಯ ಯಕ್ಷಗಾನ ಮೇಳ ಒಂದೇ ಕ್ಷೇತ್ರದಿಂದ ಹೊರಡುತ್ತಿರುವುದು ಗಿನ್ನಿಸ್ ದಾಖಲೆಯೇ ಸರಿ.

ಕಡಂದೇಲು ಪುರುಷೋತ್ತಮ ಭಟ್ಟರಿಗಿಂದು ಗೌರವ



ಈಗಿರುವ ಯಕ್ಷಗಾನ ಕಲಾವಿದರಲ್ಲಿ ಅತ್ಯಂತ ಹಿರಿಯರೆನಿಸಿರುವ ದೇವಿ ಪಾತ್ರಧಾರಿ ಎಂದೇ ಪ್ರಸಿದ್ಧರಾದ ನೂರರ ಆಸುಪಾಸಿನಲ್ಲಿರುವ ಕಡಂದೇಲು ಪುರುಸೋತ್ತಮ ಭಟ್ಟರಿಗೆ ಇಂದು(ತಾ.೫) ಕಟೀಲು ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಲಿರುವ ಶಾಂತಿಹೋಮಹವನಾಧಿಗಳ ಜೊತೆಗೆ ಗೌರವ ನಡೆಯಲಿದೆ. ಪೇಜಾವರ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶರು ಭಾಗವಹಿಸಲಿದ್ದಾರೆ.
ಪುರುಷೋತ್ತಮ ಭಟ್ಟರಿಗೆ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಓಂ ಮಾಯಲೀಲಾ, ಭಾಮಿನೀ ಷಟ್ಪದಿ ಯಲ್ಲಿ ’ಶ್ರೀ ದೇವಿ ಸ್ತುತಿ’ ಕೃತಿ ಪ್ರಕಟಿಸಿದ್ದಾರೆ. ಕಟೀಲು ದುರ್ಗೆಗೆ ಸಂಬಂಧಿಸಿದ ಭಕ್ತಿಗೀತೆ ಗಳ ಸಿಡಿ ಬಿಡುಗಡೆಯಾಗಿದೆ. ಮೂಲ್ಕಿ ಕೊರಕ್ಕೋಡು, ಕೂಡ್ಲು, ಇರಾ ಕುಂಡಾವು ಮೇಳಗಳಲ್ಲಿ ಬಳಿಕ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ ಪುರುಷೋತ್ತಮ ಭಟ್ಟರು ಕಿನ್ನಿಗೋಳಿಯಲ್ಲಿ ೧೯೪೩ರಲ್ಲಿ ಐದು ದಿನದ ದೇವಿ ಮಹಾತ್ಮೆ ನಡೆದಾಗ ದೇವೀ ಪಾತ್ರಧಾರಿಯಾಗಿ ಪ್ರಸಿದ್ಧಿಗೆ ಬಂದವರು. ಇವತ್ತಿಗೂ ಮೂರ‍್ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗಿ ಬರುವ ಭಟ್ಟರು ದೇವಿ, ಕೈಕೆ, ಶಕುಂತಲೆ, ಅಂಬೆ, ಮಂಡೋದರಿ, ಚಂದ್ರಮತಿ, ಸೀತೆ, ದ್ರೌಪದಿ, ಚಿತ್ರಾಂಗದೆ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. ೧೯೭೦ ರ ಮೇ ೨೫ ರಂದು ಮೇಳಕ್ಕೆ ವಿದಾಯ ಹೇಳಿದರು. ಪೇಜಾವರ ಮಠದ ಹಿರಿಯ ಸ್ವಾಮೀಜಿ ಒಮ್ಮೆ ಆಟಕ್ಕೆ ಬಂದಿದ್ದರು. ರಾಮ ವನವಾಸಕ್ಕೆ ಹೋಗಬೇಕಾಗಿ ಬರುವ ಸಂದರ್ಭ, ಭಟ್ಟರು ಕೈಕೆಯಾಗಿ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಭಾಗ ಮುಗಿದು ಹೊರಡುವ ವೇಳೆ ಸ್ವಾಮೀಜಿ ಕರೆದು ಹೇಳಿದರು. ’ಕಲ್ಲು ಸಿಗಲಿಲ್ಲ’ ಇಲ್ಲದಿದ್ದರೆ ಹೊಡೆಯುತ್ತಿದ್ದೆ ಎಂದರು. ಬಹುಶಃ ಕೈಕೆ ಪಾತ್ರ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿರಬೇಕು ಎಂದು ಖಷಿಪಟ್ಟುಕೊಳ್ಳುವ ಪುರುಷೋತ್ತಮ ಭಟ್ಟರು ರಾಮ, ವಲಲ, ಚಂಡಾಮರ್ಕ, ಬ್ರಹ್ಮಕಪಾಲದ ಬ್ರಹ್ಮ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಪುರುಷ ಪಾತ್ರಗಳನ್ನೂ ನಿರ್ವಹಿಸಿದವರು. ಇಂತಹ ಕಡಂದೇಲು ಪುರುಷೋತ್ತಮ ಭಟ್ಟರಿಗೆ ಮುಕ್ಕಾಲು ಶತಮಾನದ ಹಿಂದಿನ ಯಕ್ಷಗಾನ ಪ್ರಪಂಚದ ಸಾಕ್ಷಿಯಾಗಿ ಇವತ್ತಿಗೂ ಅನೇಕ ಸಂಗತಿಗಳನ್ನು ಹೇಳುವ ಮಾಹಿತಿ ಕಣಜ. ಅವರಿಗಿಂದು ಕಟೀಲಿನಲ್ಲಿ ಶಾಂತಿ ಹೋಮಹವನಗಳ ಜೊತೆಗೆ ಕುಟುಂಬದ, ಅಭಿಮಾನಿಗಳ ಆತ್ಮೀಯ ಗೌರವ ಸಲ್ಲಲಿದೆ.



Friday, October 25, 2013

ಕಟೀಲಿನಲ್ಲಿ ಕಲಾಪರ್ವ

ಮಕ್ಕಳಲ್ಲಿ ಸಂಸ್ಕಾರದ ನಿರ್ಮಾಣ -ಅಜಿತ್ ಕುಮಾರ ಹೆಗ್ಡೆ
ಕಟೀಲು : ಯಕ್ಷಗಾನ ಪ್ರದರ್ಶನಗಳಿಗೆ ಹೋದರೆ ಅಲ್ಲಿ ವಯೋವೃದ್ಧರೇ ಕಾಣುತ್ತಾರೆ. ಯುವಕರ ಸಂಖ್ಯೆ ಕಡಿಮೆ ಕಾಣುತ್ತದೆ. ಮೊಬೈಲು, ಫೇಸುಬುಕ್ಕುಗಳಲ್ಲಿ ಮುಳುಗಿ ಹಾದಿತಪ್ಪುತ್ತಿರುವ ಮಕ್ಕಳಲ್ಲಿ ಯಕ್ಷಗಾನಾಸಕ್ತಿಯನ್ನು ಬೆಳೆಸಿದರೆ ಕಲಾವಿದರ ಜೊತೆಗೆ ಪ್ರೇಕ್ಷಕರ ಸಂಖ್ಯೆಯನ್ನೂ ಹೆಚ್ಚಿಸಿದಂತಾಗುತ್ತದೆ. ಅವರಲ್ಲಿ ಸಂಸ್ಕಾರವನ್ನು ನಿರ್ಮಿಸಿದಂತಾಗುತ್ತದೆ. ಕಟೀಳಿನ ದುರ್ಗಾ ಮಕ್ಕಳದ್ದು ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಮಕ್ಕಳ ಯಕ್ಷಗಾನ ಮೇಳಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವುದು ಸಮಾಧಾನಕರ ಎಂದು ಮಂಗಳೂರು ಮಹಾನಗರ ಪಾಳಿಕೆ ಆಯುಕ್ತ, ಕಟೀಲು ದೇಗುಲದ ಆಡಳಿತಾಧಿಕಾಇರ ಶಾನಾಡಿ ಅಜಿತ್ ಕುಮಾರ ಹೆಗ್ಡೆ ಹೇಳಿದರು.
ಅವರು ಭಾನುವಾರ ರಾತ್ರಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಐದನೆ ವರ್ಷದ ಕಲಾಪರ್ವದಲ್ಲಿ ಮಾತನಾಡಿದರು.
ಮುಂಬೈನ ಜ್ಯೋತಿಷಿ ಪೆರ್ಣಂಕಿಲ ಹರಿದಾಸ ಭಟ್ ಮಾತನಾಡಿ ರಾಮ ರಾವಣವನ್ನು ಕೊಂದರೆ, ಕೃಷ್ಣ ಕಂಸನನ್ನು, ದುರ್ಗಾಸುರನನ್ನು ದುರ್ಗೆ, ಮಹಿಷಾಸುರನ್ನು ಮಹಿಷಮರ್ಧಿನಿ, ರಕ್ತಬೀಜನನ್ನು ರಕ್ತೇಶ್ವರೀ, ಗಾಂಧಿಯನ್ನು ಗೋಡ್ಸೆ, ಒಸಾಮಾನನ್ನು ಒಬಾಮಾ ಹೀಗೆ ಆಯಾಯ ಅಕ್ಷರದವರೇ ಶತ್ರುಗಳಾಗಿರುವ ವಿಚಾರಗಳನ್ನು ಅಧ್ಯಯನದಿಂದ ಗಮನಿಸಬಹುದು. ಶುದ್ಧ ಕನ್ನಡವನ್ನು ಯಕ್ಷಗಾನದಿಂದ ಮಾತಾಡಬಹುದು ಎಂದು ಹೇಳಿದರು.
ಕಲಾವಿದ ಮಂಜೇಶ್ವರ ಜನಾರ್ದನ ಜೋಗಿಯವರನ್ನು ಹತ್ತು ಸಾವಿರ ರೂ.. ನಗದು ಸಹಿತ ಸಂಮಾನಿಸಲಾಯಿತು. ಯಕ್ಷಗಾನೀಯ ಶೈಲಿಯಲ್ಲಿ ಬಲಿಪ ಶಿವಶಂಕರ ಭಟ್ ಸಂಮಾನಪತ್ರ ವಾಚಿಸಿದರು.
ಪ್ರಸಂಗಕರ್ತ ಶ್ರೀಧರ ಡಿ.ಎಸ್. ಮತ್ತು ಯಕ್ಷಗಾನ ವಿಮರ್ಶಕ ಕೆ.ಎಲ್.ಕುಂಡಂತಾಯರನ್ನು ಗೌರವಿಸಲಾಯಿತು. ಇದೇ ಸಂದರ್ಭ ಯಕ್ಷಗಾನ ಶಿಕ್ಷಣ ಪಡೆದ ವಿದ್ಯಾರ್ಥೀಗಳಿಗೆ ಪ್ರಮಾಣಪತ್ರ ವಿತರಣೆ, ಯಕ್ಷಗಾನ ಪ್ರತಿಭಾ ಪುರಸ್ಕಾರ, ಗುರುವಂದನೆ ನಡೆಯಿತು.
ಸಚಿವ ಅಭಯಚಂದ್ರ ಜೈನ್, ಸೂರ್‍ಯನಾರಾಯಣ ಉಪಾಧ್ಯಾಯ, ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಅಜಿತ್ ಕುಮಾರ ಹೆಗ್ಡೆ, ಡಾ.ಪದ್ಮನಾಭ ಕಾಮತ್, ಅಜಿತ್ ಕುಮಾರ ಹೆಗ್ಡೆ, ಬಿ.ಟಿ.ಬಂಗೇರ, ತಲ್ಲೂರು ಶಿವರಾಮ ಶೆಟ್ಟಿ, ಮರವೂರು ಜಗದೀಶ ಶೆಟ್ಟಿ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಅಶೋಕ ಶೆಟ್ಟಿ, ಗಣೇಶ ಶೆಟ್ಟಿ, ಲೀಲಯ್ಯ ಶೆಟ್ಟಿಗಾರ, ಲೀಲಾಕ್ಷ ಕರ್ಕೇರ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್‍ಯಕ್ರಮ ನಿರೂಪಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು. ಶ್ರೀ ದುರ್ಗ ಮಕ್ಕಳ ಮೇಳದವರಿಂದ ನೂರನೇ ಪ್ರದರ್ಶನವಾದ ರಾಮಲಕ್ಷ್ಮಣರ ಒಡ್ಡೋಲಗ ಸಹಿತವಾದ ಪಂಚವಟಿ ಪ್ರದರ್ಶನಗೊಂಡಿತು.