Monday, February 18, 2013

ಕಟೀಲಿನಲ್ಲಿ ಜೆಡಿಎಸ್ ಸಭೆ


ಕಟೀಲು : ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕಾಗಿದ್ದು, ಯುವಕರನ್ನು ಸೆಳೆಯಬೇಕಾಗಿದೆ ಎಂದು ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ ಹೇಳಿದರು.
ಅವರು ಕಟೀಲಿನ ಸೌಂದರ್ಯ ಪ್ಯಾಲೇಸಿನಲ್ಲಿ ನಡೆದ ಜೆಡಿಎಸ್ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ನಾಗರಾಜ ಶೆಟ್ಟಿ, ಸೌಂದರ‍್ಯ ರಮೇಶ್, ಅಶ್ವಿನ್ ಪಿರೇರಾ, ಸಂಜೀವ ಮಡಿವಾಳ, ಅಬ್ದುಲ್ಲಾ ಮತ್ತಿತರರಿದ್ದರು.

Wednesday, January 30, 2013

ಕಟೀಲು ಅಷ್ಟಮಂಗಲ ಶೀಘ್ರ ಕುದ್ರು ಜೀರ್ಣೋದ್ಧಾರ, ಇಪ್ಪತ್ತು ದಿನ ಮೊದಲೇ ಹೊರಡಲಿರುವ ಕಟೀಲು ಮೇಳ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆ ಮಂಗಳವಾರ ರಾತ್ರಿ ಸಮಾಪನಗೊಂಡಿತು.
ಮೇಲ್ಛಾವಣಿ ಇಲ್ಲದ ಗರ್ಭಗುಡಿ, ತೀರ್ಥಬಾವಿ, ಚಿತ್ರಕೂಟದ ನಾಗನಕಟ್ಟೆ, ಕೆರೆ, ಪಿಲಿಚಾಮುಂಡಿ ದೈವಕ್ಕೆ ಗುಡಿಯನ್ನು ನಿರ್ಮಿಸಿ, ಕುದ್ರುವಿಗೊಂದು ಪರಿಧಿ ಕಟ್ಟಿ ಜೀರ್ಣೋದ್ಧಾರ ಮಾಡುವುದಕ್ಕೆ ದೇವಿಯ ಸಮ್ಮತಿ ಇದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂತು. ಆದರೆ ಅಲ್ಲಿ ಯಾವುದೇ ಸೇವಾ ಕಾರ‍್ಯಗಳನ್ನು ಮಾಡುವಂತಿಲ್ಲ. ಪ್ರಾರ್ಥನೆಯಷ್ಟೆ. ಗರ್ಭಗುಡಿಯನ್ನು ಕೆಳಸ್ಥರದಲ್ಲಿ ಲಿಂಗಿರುವಂತೆ ನಿರ್ಮಿಸುವುದು. ಈಗ ಕಾಣಿಸುತ್ತಿರುವ ಲಿಂಗ ಮೂಲ ಉದ್ಭವ ಲಿಂಗವಲ್ಲ. ಅದರ ಅಡಿಭಾಗದಲ್ಲಿ ಮೂಲಲಿಂಗವಿದೆ. ಆದರೆ ಅದನ್ನು ಮುಟ್ಟದೆ ಇದ್ದಂತೆಯೇ ಗರ್ಭಗುಡಿ ನಿರ್ಮಿಸಬೇಕೆಂದು ಪ್ರಶ್ನೆಯಲ್ಲಿ ಸೂಚನೆಯಾಗಿದೆ.
ದೇಗುಲದಿಂದ ಹೊರಡುವ ಯಕ್ಷಗಾನ ಮೇಳಗಳು ಈಗ ಕಾರ್ತಿಕ ಬಹುಳ ಪಂಚಮಿಯ ಅನಂತರ ಹೊರಡುತ್ತಿದ್ದು, ಇನ್ನು ದೀಪಾವಳಿಯ ಬಳಿಕ ಕಾರ್ತಿಕ ಶುದ್ಧ ಪಾಡ್ಯದ ಅನಂತರ ಹೊರಡುವುದಕ್ಕೆ ದೇವರ ಸಮ್ಮತಿ ಪ್ರಶ್ನೆಯಲ್ಲಿ ಸಿಕ್ಕಿದೆ. ಅದರಂತೆ ಮುಂದಿನ ತಿರುಗಾಟ ಸುಮಾರು ಹತ್ತೊಂಭತ್ತು ಅಥವಾ ಇಪ್ಪತ್ತು ದಿನಗಳ ಮುಂಚೆಯೇ ಆರಂಭವಾಗಲಿದೆ. ಅದರಂತೆ ನೂರು ಪ್ರದರ್ಶನಗಳು ಹೆಚ್ಚು ಭಕ್ತರಿಗೆ ಲಭ್ಯವಾಗಲಿವೆ.
ದೇಗುಲದ ಎಡಭಾಗದಲ್ಲಿ ದಿನಂಪ್ರತಿ ಚಂಡಿಕಾಹೋಮ ನಡೆಯುತ್ತಿದ್ದು, ಅದರಿಂದ ಹೊಗೆ, ಭಕ್ತರ ಸಂಖ್ಯೆ ಹೆಚ್ಚಳವಿದ್ದಾಗ ಸಮಸ್ಯೆಯಾಗುತ್ತಿರುವುದರಿಂದ ಚಂಡಿಕಾ ಹೋಮದ ಸ್ಥಳವನ್ನು ದೇಗುಲದ ಹಿಂಬದಿ ಅಂದರೆ ವಸಂತ ಮಂಟಪದ ಹಿಂಬದಿಯಲ್ಲಿರುವ ದೋಣಿಯಾಕಾರದ ಸ್ಥಳದಲ್ಲಿ ಯಜ್ಞಮಂಟಪ ಸ್ಥಾಪಿಸಿ ಅಲ್ಲಿ ಭಕ್ತರ ಸೇವಾ ರೂಪದ ಚಂಡಿಕಾ ಹೋಮವನ್ನು ನಡೆಸುವುದು. ಆದರೆ ರಾಶಿ ಪೂಜೆ, ದೀಪಾವಳಿ, ನವರಾತ್ರಿಯ ದೇಗುಲದ ವತಿಯ ಚಂಡಿಕಾಹೋಮಗಳನ್ನು ಈಗ ನಡೆಯುವ ಸ್ಥಳದಲ್ಲೇ ನಡೆಸುವುದಕ್ಕೂ ದೇವಿಯ ಒಪ್ಪಿಗೆ ಪ್ರಶ್ನೆಯಲ್ಲಿ ಸಿಕ್ಕಿದೆ.
ಪ್ರತಿದಿನ ಐದು ರಂಗಪೂಜೆಗಳಿದ್ದರೂ ಭಕ್ತರು ತಿಂಗಲುಗಟ್ಟಲೆ ಕಾಯಬೇಕಾದ ಸ್ಥಿತಿ ಇರುವುದರಿಂದ ಶುಕ್ರವಾರದ ಒಂದು ದಿನ ಸಾಮೂಹಿಕವಾಗಿ ೧೮ಸೇರಿನ ಅಕ್ಕಿಯ ನೈವೇದ್ಯವನ್ನೊಳಗೊಂಡ ಗರಿಷ್ಟ ೧೦೧ರಂಗಪೂಜೆಗಳನ್ನು ಮಾಡುವ ಬಗ್ಗೆಯೂ ದೇವಿಯ ಅನುಮತಿ ಪ್ರಶ್ನೆಯಲ್ಲಿ ಲಭಿಸಿದೆ.
ಆರು ವರುಷಗಳ ಹಿಂದೆ ಬ್ರಹ್ಮಕಲಶಕ್ಕೆ ಮುಂಚಿತವಾಗಿ ಇರಿಸಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿತ ಪರಿಹಾರ ಕಾರ‍್ಯಗಳಲ್ಲಿ ಬಾಕಿಯಿರುವುದನ್ನು ಆಡಳಿತ ವರ್ಗ ಪೂರ್ಣಗೊಳಿಸಬೇಕು. ಅರ್ಚಕರ ಮನೆ, ಮನಸ್ಸುಗಳೂ ಒಂದಾಗಬೇಕು ಎಂಬ ಸೂಚನೆಯೂ ಪ್ರಶ್ನೆಯಲ್ಲಿ ಬಂದಿದೆ. ರಕ್ತೇಶ್ವರೀ ಗುಡಿಯ ಜೀರ್ಣೋದ್ಧಾರ, ಶಾಸ್ತಾರ ಗುಡಿ ಸರಿಪಡಿಸುವಿಕೆ ಇತ್ಯಾದಿ ವಿಚಾರಗಳೂ ಪ್ರಶ್ನೆಯಲ್ಲಿ ಕಂಡಿ ಬಂದಿದೆ.
ಪದ್ಮನಾಭ ಶರ್ಮ, ಹರಿಯೆಟ್ಟಾನ್, ಕೃಷ್ಣ ಪ್ರಸಾದ ರಂಗಭಟ್, ಜಯರಾಮ ಪಣಿಕರ್, ದೇವದಾಸ ಪಣಿಕರ್, ಪಂಜ ಭಾಸ್ಕರ ಭಟ್ ಪ್ರಶ್ನಾಕಾರ‍್ಯದಲ್ಲಿದ್ದರೆ, ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕುಮಾರ ಆಸ್ರಣ್ಣ, ವೇದವ್ಯಾಸ ತಂತ್ರಿ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಜಿ.ಪಂ.ಸದಸ್ಯ ಈಶ್ವರ್, ಅಜಾರು ನಾಗರಾಜರಾಯ, ದಾನಿ ಸತೀಶ್ ಶೆಟ್ಟಿ ದೇಗುಲದ ಪ್ರಬಂಧಕ ವಿಶ್ವೇಶ ರಾವ್ ಮುಂತಾದವರು ಮಂಗಳವಾರ ಇದ್ದರು.

Sunday, January 27, 2013

ಕಟೀಲು ಮೂಲಕುದ್ರು ಅಭಿವೃದ್ಧಿ : ಅಷ್ಟಮಂಗಲ ಪ್ರಶ್ನೆ ಆರಂಭ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಉದ್ಭವ ಲಿಂಗವಿರುವ ಮೂಲ ಕುದ್ರುವಿನ ಅಭಿವೃದ್ಧಿ ಕಾರ‍್ಯಗಳ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅಷ್ಟಮಂಗಳ ಪ್ರಶ್ನೆ ಭಾನುವಾರ (j.27)ಆರಂಭಗೊಂಡಿತು. ಪದ್ಮನಾಭ ಶರ್ಮ, ಹರಿಯೆಟ್ಟಾನ್, ಕೃಷ್ಣ ಪ್ರಸಾದ ರಂಗಭಟ್, ಜಯರಾಮ ಪಣಿಕರ್, ದೇವದಾಸ ಪಣಿಕರ್, ಪಂಜ ಭಾಸ್ಕರ ಭಟ್ ಪ್ರಶ್ನಾಕಾರ‍್ಯದಲ್ಲಿದ್ದರೆ, ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕುಮಾರ ಆಸ್ರಣ್ಣ, ಸಾಂಸದ ನಳಿನ್ ಕುಮಾರ್, ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಭೇಬಿ ಕೋಟ್ಯಾನ್, ಜಯರಾಮ ಉಡುಪ, ವಾಸುದೇವ ಶಿಬರಾಯ, ಕೆರಮ ಸದಾನಂದ ಶೆಟ್ಟಿ, ಕುದ್ರುವಿನ ದಾನ ಸತೀಶ್ ಶೇಟ್ಟಿ ಮತ್ತಿತರರಿದ್ದರು.

Sunday, December 30, 2012

ಕಟೀಲು ಪ್ರೌಢಶಾಲೆ ವಾರ್ಷಿಕೋತ್ಸವ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಶನಿವಾರ ನಡೆಯಿತು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಜಿ.ಪಂ.ಸದಸ್ಯ ಈಶ್ವರ್, ಹಳೆ ವಿದ್ಯಾರ್ಥಿ ಸಂಘದ ಹರಿನಾರಾಯಣ ಆಸ್ರಣ್ಣ, ಸೌಂದರ್ಯ ರಮೇಶ್, ಮರವೂರು ಜಗದೀಶ ಶೆಟ್ಟಿ, ವಿದ್ಯಾರ್ಥಿ ನಾಯಕ ಶ್ರೀನಿಧಿ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಬಾಬು ಶೆಟ್ಟಿ, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

Sunday, December 9, 2012

Saturday, November 24, 2012

ಕಟೀಲಿನಲ್ಲಿ ಮುದ್ರಾಧಾರಣೆ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಶನಿವಾರ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಆಸ್ತಿಕ ಎಲ್ಲ ಭಕ್ತರಿಗೂ ತಪ್ತ ಮುದ್ರಾಧಾರಣೆ ಮಾಡಿದರು. ಮಹಿಳೆಯರೂ ಸೇರಿದಂತೆ ಜಾತಿಮತ ಬೇಧವಿಲ್ಲದೆ ಎಲ್ಲ ಭಕ್ತರಿಗೂ ಮುದ್ರಾಧಾರಣೆ ನೆರವೇರಿಸಿದರು. ಅರ್ಚಕರಾದ ಆಸ್ರಣ್ಣ ಬಂಧುಗಳೂ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.


Sunday, November 4, 2012

ಮಕ್ಕಳ ಆಟ


ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ೪ನೇ ವಾರ್ಷಿಕೋತ್ಸವದ ಪ್ರಯುಕ್ತ ಕಟೀಲು ದೇಗುಲದ ಸರಸ್ವತೀ ಸದನದಲ್ಲಿ ಶನಿವಾರ ಹಾಗೂ ಭಾನುವಾರ ವಿವಿಧ ಮಕ್ಕಳ ಮೇಳಗಳು ಯಕ್ಷಗಾನ ಪ್ರದರ್ಶನಗಳನ್ನು ಪ್ರದರ್ಶಿಸಿದವು. ಮಂಜನಾಡಿ ಶ್ರೀ ದುರ್ಗಾಪರಮೇಶ್ವರೀ ಯಕ್ಷಕಲಾ ಕೇಂದ್ರದ ಮಕ್ಕಳು ಅಂಧಕಾಸುರ ಮೋಕ್ಷವನ್ನು ಪ್ರದರ್ಶಿಸಿದರು.


Saturday, November 3, 2012

ಬೀಳ್ಕೊಡುಗೆ


ಕಟೀಲು : ವಿಜಯಾ ಬ್ಯಾಂಕಿನಲ್ಲಿ ೩೮ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಕೆ.ರಮೇಶ್‌ರನ್ನು ಸಂಮಾನಿಸಿ ಬೀಳ್ಕೊಡಲಾಯಿತು. ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಸಹಾಯಕ ಪ್ರಬಂಧಕ ಪ್ರಮೋದ್ ಕಾಮತ್, ಆನಂದ್, ದೀಪಾ ಶೆಟ್ಟಿ, ಲೋಕೇಶ್ ಮತ್ತಿತರರಿದ್ದರು.

ಕಟೀಲಿನಲ್ಲಿ ಮಕ್ಕಳ ಬಯಲಾಟ ಉದ್ಘಾಟನೆ



ಕಟೀಲು : ಇಲ್ಲಿನ ಶ್ರೀ ದುರ್ಗಾ ಮಕ್ಕಳ ಮೇಳ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮಕ್ಕಳ ತೆಂಕುತಿಟ್ಟು ಯಕ್ಷಗಾನ ಬಯಲಾಟ ಪ್ರದರ್ಶನ ಶನಿವಾರ ಉದ್ಘಾಟನೆಗೊಂಡಿತು.
ಗಿರೀಶ್ ಎಂ.ಶೆಟ್ಟಿ, ಬಜಪೆ ರಾಘವೇಂದ್ರ ಆಚಾರ್ಯ, ಪ್ರಾಚಾರ್ಯ ಬಾಲಕೃಷ್ಣ ಎಂ.ಶೆಟ್ಟಿ, ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ, ವಾಸುದೇವ ಶೆಣೈ ಮತ್ತಿತರರಿದ್ದರು.
ಬಳಿಕ ಕದ್ರಿ ಬಾಲ ಯಕ್ಷಕೂಟದವರು ವಿದ್ಯುನ್ಮತಿ ಕಲ್ಯಾಣವನ್ನು, ಕುಕ್ಕಾಜೆ ಪ್ರಗತಿ ಪ್ರೌಢಶಾಲೆಯ ಮಕ್ಕಳು ಗರುಡ ಗರ್ವಭಂಗವನ್ನು ಪ್ರದರ್ಶಿಸಿದರು.
ಭಾನುವಾರ ದಿನವಿಡೀ ಮಕ್ಕಳ ಯಕ್ಷಗಾನ ನಡೆಯಲಿದ್ದು, ಬೆಳಿಗ್ಗೆ ಮುನ್ನೂರು ಚಿಣ್ಣರಲೋಕ ಸೇವಾ ಟ್ರಸ್ಟ್‌ನ ಕಲಾವಿದರು ಶಶಿಪ್ರಭಾ ಪರಿಣಯ, ಮಂಜನಾಡಿ ದುರ್ಗಾಪರಮೇಶ್ವರೀ ಕೃಪಾಶ್ರಿತ ಯಕ್ಷಕಲಾ ಕೇಂದ್ರದವರು ಅಂಧಕಾಸುರ ಮೋಕ್ಷವನ್ನು, ಕಳಸ ಹಳ್ಳುವಳ್ಳಿಯ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಟಾನದವರು ಸುದರ್ಶನ ವಿಜಯವನ್ನು, ಕುರ್ನಾಡು ದತ್ತಾತ್ರೇಯ ಯಕ್ಷಗಾನ ಮಂಡಳಿಯ ಮಕ್ಕಳು ಸುಧನ್ವಾರ್ಜುನವನ್ನು ಪ್ರದರ್ಶಿಸಲಿದ್ದಾರೆ.
ಬಳಿಕ ಕಟೀಲು ರಥಬೀದಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟಿ.ಶ್ಯಾಮ್ ಭಟ್, ಅಂಬಲಪಾಡಿಯ ನಿ.ಬೀ.ವಿಜಯ ಬಲ್ಲಾಳ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಮಾಲಾಡಿ ಅಜಿತ್ ಕುಮಾರ್ ರೈ, ಜಗದೀಪ್ ಸುವರ್ಣ, ಮುಂಬೈ ಚಂದ್ರಶೇಖರ ಬೆಳ್ಚಡ, ಕಟೀಲಿನ ಆಸ್ರಣ್ಣ ಬಂಧುಗಳ ಉಪಸ್ಥಿತಿಯಲ್ಲಿ ಯಕ್ಷಗಾನ ಕಲಾವಿದ ದಾಸನಡ್ಕ ರಾಮ ಕುಲಾಲ್, ಯುವ ಛಾಂದಸ ಗಣೇಶ ಕೊಲೆಕಾಡಿ ಹಾಗೂ ಯಕ್ಷಗಾನ ತರಗತಿಯ ಗುರುಗಳನ್ನು ಸಂಮಾನಿಸಲಾಗುವುದು. ಇದೇ ಸಂದರ್ಭ ಯಕ್ಷಗಾನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಬಳಿಕ ದುರ್ಗಾ ಮಕ್ಕಳ ಮೇಳದ ಕಲಾವಿದರಿಂದ ಶ್ರೀ ಕೃಷ್ಣ ಲೀಲೆ ನಡೆಯಲಿದೆ.




Monday, October 29, 2012

ಎಚ್.ಡಿ.ಕುಮಾರಸ್ವಾಮಿ ಭೇಟಿ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ ಜೆಡಿಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರಿಂದ ಪ್ರಸಾದ ಸ್ವೀಕರಿಸಿದರು.
ಮಧು ಬಂಗಾರಪ್ಪ, ಎಂ.ಬಿ.ಸದಾಶಿವ, ಚೆಲುವರಾಯ ಸ್ವಾಮಿ, ನಾಗರಾಜ ಶೆಟ್ಟಿ, ಸಂಜೀವ ಮಡಿವಾಳ ಮುಂತಾದವರಿದ್ದರು.