Saturday, November 3, 2012

ಕಟೀಲಿನಲ್ಲಿ ಮಕ್ಕಳ ಬಯಲಾಟ ಉದ್ಘಾಟನೆ



ಕಟೀಲು : ಇಲ್ಲಿನ ಶ್ರೀ ದುರ್ಗಾ ಮಕ್ಕಳ ಮೇಳ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮಕ್ಕಳ ತೆಂಕುತಿಟ್ಟು ಯಕ್ಷಗಾನ ಬಯಲಾಟ ಪ್ರದರ್ಶನ ಶನಿವಾರ ಉದ್ಘಾಟನೆಗೊಂಡಿತು.
ಗಿರೀಶ್ ಎಂ.ಶೆಟ್ಟಿ, ಬಜಪೆ ರಾಘವೇಂದ್ರ ಆಚಾರ್ಯ, ಪ್ರಾಚಾರ್ಯ ಬಾಲಕೃಷ್ಣ ಎಂ.ಶೆಟ್ಟಿ, ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ, ವಾಸುದೇವ ಶೆಣೈ ಮತ್ತಿತರರಿದ್ದರು.
ಬಳಿಕ ಕದ್ರಿ ಬಾಲ ಯಕ್ಷಕೂಟದವರು ವಿದ್ಯುನ್ಮತಿ ಕಲ್ಯಾಣವನ್ನು, ಕುಕ್ಕಾಜೆ ಪ್ರಗತಿ ಪ್ರೌಢಶಾಲೆಯ ಮಕ್ಕಳು ಗರುಡ ಗರ್ವಭಂಗವನ್ನು ಪ್ರದರ್ಶಿಸಿದರು.
ಭಾನುವಾರ ದಿನವಿಡೀ ಮಕ್ಕಳ ಯಕ್ಷಗಾನ ನಡೆಯಲಿದ್ದು, ಬೆಳಿಗ್ಗೆ ಮುನ್ನೂರು ಚಿಣ್ಣರಲೋಕ ಸೇವಾ ಟ್ರಸ್ಟ್‌ನ ಕಲಾವಿದರು ಶಶಿಪ್ರಭಾ ಪರಿಣಯ, ಮಂಜನಾಡಿ ದುರ್ಗಾಪರಮೇಶ್ವರೀ ಕೃಪಾಶ್ರಿತ ಯಕ್ಷಕಲಾ ಕೇಂದ್ರದವರು ಅಂಧಕಾಸುರ ಮೋಕ್ಷವನ್ನು, ಕಳಸ ಹಳ್ಳುವಳ್ಳಿಯ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಟಾನದವರು ಸುದರ್ಶನ ವಿಜಯವನ್ನು, ಕುರ್ನಾಡು ದತ್ತಾತ್ರೇಯ ಯಕ್ಷಗಾನ ಮಂಡಳಿಯ ಮಕ್ಕಳು ಸುಧನ್ವಾರ್ಜುನವನ್ನು ಪ್ರದರ್ಶಿಸಲಿದ್ದಾರೆ.
ಬಳಿಕ ಕಟೀಲು ರಥಬೀದಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟಿ.ಶ್ಯಾಮ್ ಭಟ್, ಅಂಬಲಪಾಡಿಯ ನಿ.ಬೀ.ವಿಜಯ ಬಲ್ಲಾಳ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಮಾಲಾಡಿ ಅಜಿತ್ ಕುಮಾರ್ ರೈ, ಜಗದೀಪ್ ಸುವರ್ಣ, ಮುಂಬೈ ಚಂದ್ರಶೇಖರ ಬೆಳ್ಚಡ, ಕಟೀಲಿನ ಆಸ್ರಣ್ಣ ಬಂಧುಗಳ ಉಪಸ್ಥಿತಿಯಲ್ಲಿ ಯಕ್ಷಗಾನ ಕಲಾವಿದ ದಾಸನಡ್ಕ ರಾಮ ಕುಲಾಲ್, ಯುವ ಛಾಂದಸ ಗಣೇಶ ಕೊಲೆಕಾಡಿ ಹಾಗೂ ಯಕ್ಷಗಾನ ತರಗತಿಯ ಗುರುಗಳನ್ನು ಸಂಮಾನಿಸಲಾಗುವುದು. ಇದೇ ಸಂದರ್ಭ ಯಕ್ಷಗಾನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಬಳಿಕ ದುರ್ಗಾ ಮಕ್ಕಳ ಮೇಳದ ಕಲಾವಿದರಿಂದ ಶ್ರೀ ಕೃಷ್ಣ ಲೀಲೆ ನಡೆಯಲಿದೆ.




No comments:

Post a Comment