Sunday, August 9, 2015

ಕಟೀಲು ದೇಗುಲದಲ್ಲಿ ೧೨೨ ಮಂದಿಯಿಂದ ರಕ್ತದಾನ ಶಿಬಿರ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಸರೆಯಲ್ಲಿ ಕಟೀಲು ಕಾಲೇಜು ಎನ್‌ಎಸ್‌ಎಸ್, ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್, ವೀರಮಾರುತಿ ವ್ಯಾಯಾಮ ಶಾಲೆ, ವಿಜಯ ಯುವ ಸಂಗಮ, ಆದರ್ಶ ಬಳಗ, ಕುಕ್ಕಟ್ಟೆ ಯಕ್ಷಗಾನ ಬಯಲಾಟ ಸಮಿತಿ, ಚೇತನಾ, ದುರ್ಗಾಂಬಿಕಾ ಮಂಡಲ, ನಂದಿನಿ ಬ್ರಾಹ್ಮಣ ಸಭಾ, ಸಜ್ಜನ ಬಂಧುಗಳು ಮುಂತಾದ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ ಕೆಎಂಸಿ ಆಸ್ಪತ್ರೆ ಹಾಗೂ ವೆನ್‌ಲಾಕ್ ಆಸ್ಪತ್ರೆಗೆ ೧೨೨ ಮಂದಿ ರಕ್ತದಾನ ಮಾಡಿದರು. 
ಕಟೀಲು ದೇಗುಲ ಅರ್ಚಕ ಶ್ರೀಹರಿ ಆಸ್ರಣ್ಣ, ವೇದವ್ಯಾಸ ತಂತ್ರಿ, ಕೃಷ್ಣರಾಜ ತಂತ್ರಿ,, ಜಿ.ಪಂ.ಸದಸ್ಯ ಈಶ್ವರ ಕಟೀಲ್, ಶಾಲೆಟ್ ಪಿಂಟೋ ಉದ್ಘಾಟಿಸಿದರು. ಕೆಎಂಸಿ ಬ್ಲಡ್ ಬ್ಯಾಂಕ್‌ನ ಭವಾನಿಶಂಕರ್, ದೇಗುಲದ ಪ್ರಬಂಧಕ ವಿಜಯ ಕುಮಾರ್, ಪ್ರಾಚಾರ‍್ಯ ಎಂ. ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಸುನೀತಾ, ಕೃಷ್ಣ ಕಾಂಚನ್, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಸರೋಜಿನಿ, ಉಪಾಧ್ಯಕ್ಷ ಮಾರ್ಗನ್, ಸದಸ್ಯರಾದ ಜನಾರ್ದನ ಕಿಲೆಂಜೂರು, ದಾಮೋದರ್ ಶೆಟ್ಟಿ, ರಮಾನಂದ ಪೂಜಾರಿ, ದೇವದಾಸ ಮಲ್ಯ, ವ್ಯಾಯಾಮ ಶಾಲೆಯ ಕೇಶವ ಕರ್ಕೇರ, ಜೆರಾಲ್ಡ್ ಮಿನೇಜಸ್, ನಿಶಾಂತ್ ಕಿಲೆಂಜೂರು, ರಘುನಾಥ್ ಕಾಮತ್, ಶಿಕ್ಷಕ ಗೋಪಾಲ ಶೆಟ್ಟಿ ಮುಂತಾದವರಿದ್ದರು.

No comments:

Post a Comment