Friday, June 12, 2015

ಕಟೀಲು ಸಾಮೂಹಿಕ ವಿವಾಹ :

೮ಜೋಡಿಗಳು ದಾಂಪತ್ಯಕ್ಕೆ ಜೀವನಕ್ಕೆ
ಕಟೀಲು : ಇಲ್ಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣರ ಉಸ್ತುವಾರಿಯಲ್ಲಿ ಬುಧವಾರ ನಡೆದ ಎಂಟನೆಯ ವರುಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎಂಟು ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟವು.
ಏಳು ವರುಷಗಳಲ್ಲಿ ೭೫ಜೋಡಿಗಳು ವಿವಾಹವಾಗಿದ್ದರೆ ಈ ವರುಷ ಹರೀಶ್ - ಹರಿಣಾಕ್ಷಿ, ಮಹಾಬಲ - ಬೇಬಿ, ಶಿವಕುಮಾರ್ - ಗೀತಾ, ರಂಜಿತ್ - ಸಾವಿತ್ರಿ, ಶಿವಪ್ರಸಾದ ಎ.ಪಿ.- ಯಶೋದಾ, ಸಂದೀಪ್ - ಶ್ವೇತಾ, ವಸಂತ - ವಾಣಿಶ್ರೀ, ಹರಿಪ್ರಸಾದ್ - ಶ್ವೇತಾ ವಿವಾಹವಾದರು.
ಮುಂಬೈನ ಸುವರ್ಣ ಬಾಬಾ, ಅನಿಲ್ ಶೆಟ್ಟಿ, ರಾಘವೇಂದ್ರ ಶಾಸ್ತ್ರಿ, ಕೇಶವ ಅಂಚನ್ ಮುಂಬೈ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಪಿ. ಸತೀಶ್ ರಾವ್, ಧನಂಜಯ ಆಚಾರ್, ಭುವನಾಭಿರಾಮ ಉಡುಪ, ಜಯಂತಿ ಆಸ್ರಣ್ಣ ಮುಂತಾದವರಿದ್ದರು.

No comments:

Post a Comment