Friday, May 24, 2013

ಕಟೀಲಿನಲ್ಲಿ ಯಕ್ಷಗಾನ ಕಲಾವಿದರಿಗೆ ಆರೋಗ್ಯ ಶಿಬಿರ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕಟೀಲಿನ ಐದೂ ಯಕ್ಷಗಾನ ಮೇಳಗಳ ಕಲಾವಿದರು ಹಾಗೂ ಕಟೀಲು ದೇಗುಲದ ಸಿಬಂದಿಗಳು ಮತ್ತವರ ಕುಟುಂಬಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ತಾ.೨೬ರ ಭಾನುವಾರ ಸುರತ್ಕಲ್ ಮುಕ್ಕದ ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಕಾಲೇಜು ಸಂಶೋಧನೆ ಕೇಂದ್ರದ ವೈದ್ಯರಿಂದ ಆಯೋಜಿಸಲಾಗಿದೆ ಎಂದು ಕಟೀಲು ದೇಗುಲ, ಯಕ್ಷಗಾನ ಮಂಡಳಿ ಹಾಗೂ ಝೇಂಕಾರ ಬಳಗದ ಪ್ರಕಟನೆ ತಿಳಿಸಿದೆ.
ಯಕ್ಷಗಾನ ತಿರುಗಾಟ ಶನಿವಾರ ಕೊನೆಗೊಳ್ಳಲಿದ್ದು, ಮರುದಿನ ಆರೋಗ್ಯ ತಪಾಸಣೆಯನ್ನು ಆಯೋಜಿಸಿರುವುದು ವಿಶೇಷವಾಗಿದೆ. ಉದ್ಘಾಟನೆ ಸಂದರ್ಭ ಕಟೀಲಿನ ಅರ್ಚಕರಾದ ಆಸ್ರಣ್ಣ ಬಂಧುಗಳು, ಶ್ರೀನಿವಾಸ ಸಂಸ್ಥೆಯ ಎಂ.ಆರ್.ವಾಸುದೇವ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಭಾಗವಹಿಸಲಿದ್ದಾರೆ.

No comments:

Post a Comment