Monday, April 29, 2013

ಸಂಪತ್ತು ಧರ್ಮದ ಮಾರ್ಗದಲ್ಲಿ ಬರಲಿ-ಪ್ರತಾಪಸಿಂಹ ನಾಯಕ್

ಕಟೀಲು : ಆಸೆ ಸಹಜ. ಆಸೆ ಪೂರೈಸಲು ಸಂಪತ್ತು ಬೇಕು. ಆದರೆ ಅದು ಧರ್ಮದ ಮಾರ್ಗದಲ್ಲಿ ಬರಬೇಕು ಎಂದು ಬೆಳ್ತಂಗಡಿಯ ವಕೀಲರಾದ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಭಾನುವಾರ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಡೆದ ತಿಂಗಳ ಚಿಂತನ ಕಾರ‍್ಯಕ್ರಮದಲ್ಲಿ ಏಕಾತ್ಮ ಮಾನವತಾ ದರ್ಶನ ಕುರಿತು ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರರ ಚಿಂತನೆಗಳ ಬಗ್ಗೆ ಮಾತನಾಡಿದ ಅವರು ನಾನು ಎಂಬ ಭಾವನೆ ಕುಟುಂಬ ಪದ್ಧತಿಯಿಂದಾಗಿ ನಾವು ಎಂದಾಗುತ್ತದೆ. ನಾವು ಪ್ರಕೃತಿಯ ಜೊತೆಗೆ ಬದುಕುತ್ತಿರುವುದು ಗೊತ್ತಿರಬೇಕು. ಮನಸ್ಸು, ದೇಹ, ಬುದ್ಧಿ ಆತ್ಮಗಳು ಒಂದಕ್ಕೊಂದು ಸಂಬಂಧಿಸಿದವು. ವ್ಯಕ್ತಿಗಿರುವಂತೆ ರಾಷ್ಟ್ರಕ್ಕೂ ವ್ಯಕ್ತಿತ್ವ ಇದೆ ಎಂದು ಅವರು ಹೇಳಿದರು. ಝೇಂಕಾರ ಬಳಗದ ಅನಂತಪದ್ಮನಾಭ ಆಸ್ರಣ್ಣ ಸ್ವಾಗತಿಸಿದರು. ಸೋಂದಾ ಭಾಸ್ಕರ ಭಟ್ ಕಾರ‍್ಯಕ್ರಮ ನಿರೂಪಿಸಿದರು. ಪ್ರಸಾದ ಆಸ್ರಣ್ಣ ವಂದಿಸಿದರು.
ಚಿತ್ರ ಈಮೆಲ್

No comments:

Post a Comment