Tuesday, October 16, 2012

ಕಟೀಲು: ನವರಾತ್ರಿ ಮಹೋತ್ಸವ, ಸಾಂಸ್ಕ್ರತಿಕ ಉತ್ಸವ ಆರಂಭ



ಕಟೀಲು : ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಯಕ್ಷಗಾನ ಕಾರ‍್ಯಕ್ರಮಗಳು ಮಂಗಳವಾರ ಆರಂಭಗೊಂಡವು. ಬೆಳಿಗ್ಗೆ ವಾಸುದೇವ ಆಸ್ರಣ್ಣ ಕಾರ‍್ಯಕ್ರಮ ಉದ್ಘಾಟಿಸಿದರು. ಚಂದ್ರಕಾಂತ ನಾಯಕ್, ವಿಶ್ವೇಶ ರಾವ್ ಮತ್ತಿತರರಿದ್ದರು.
ಸರಸ್ವತೀ ಸದನದಲ್ಲಿ ಡಾ| ಸುಶೀಲಾ ರಾವ್ ಕೊಲ್ಲಿಪಾಲ್ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಜರಗಿತು.
ದೇಗುಲಕ್ಕೆ ಮುಂಬಾಯಿ ಉದ್ಯಮಿ ಸುಧಾಕರ ಶೆಟ್ಟಿ ದೇವಳದ ಗರ್ಭ ಗುಡಿಯ ತೆಂಕು-ಬಡಗು ದಿಕ್ಕಿನ ಬಾಗಿಲಿಗೆ ೯.೫ ಕೆ.ಜಿ ತೂಕದ ಸುಮಾರು ಮೌಲ್ಯದ ಬೆಳ್ಳಿಯನ್ನು ಸೇವಾ ರೂಪದಲ್ಲಿ ಸರ್ಮಪಿಸಿದರು.


No comments:

Post a Comment