Monday, August 20, 2012

ಬಿಸಿರೋಡು ಮೂಲ್ಕಿ ಹೆದ್ದಾರಿಗೆ ರೂ.೨೦೦ಕೋಟಿ


ಕಟೀಲು : ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ಆಗಿ ಮೂಲ್ಕಿ ಕಿನ್ನಿಗೋಳಿ ಕಟೀಲು ಪೊಳಲಿ ಬಿಸಿರೋಡು ಹೆದ್ದಾರಿಯನ್ನು ೨೦೦ ಕೋಟಿ ರೂ.ನಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹೇಳಿದ್ದಾರೆ.
ಅವರು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಈ ವಿವರ ನೀಡಿದರು.
ಪ್ರತಿ ಮನೆಗೆ ವಿದ್ಯುತ್ ನೀಡುವ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ದಕ್ಷಿಣ ಕನ್ನಡಕ್ಕೆ ೬೦ಕೋಟಿ ರೂ. ಉಡುಪಿಗೆ ೨೦ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದ ಮೊಯಿಲಿ ಒಂದು ಮೆಗಾವ್ಯಾಟ್ ಅಥವಾ ಅದಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಜಲ, ಸೌರ ಇತ್ಯಾದಿ ಮೂಲಗಳ ಯೋಜನೆಗಳಿಗೆ ಕೇಂದ್ರ ಸರಕಾರ ಖಾಸಗಿಯರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಮಾಹಿತಿ ನೀಡಿದರು. ಶಾಸಕ ಅಭಯಚಂದ್ರ, ಅರ್ಚಕ ವೆಂಕಟರಮಣ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ ಮತ್ತಿತರರಿದ್ದರು.
ಸಭಾಭವನ ಉದ್ಘಾಟನೆ
ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸ್ಮರಣಾರ್ಥ ನೂತನ ಸಭಾಭವನವನ್ನು ವೀರಪ್ಪ ಮೊಯಿಲಿ ಉದ್ಘಾಟಿಸಿದರು. ಶಾಸಕ ಅಭಯಚಂದ್ರ, ಮಾಜಿ ಸಚಿವ ಅಮರನಾಥ ಶೆಟ್ಟಿ, ಮಾಲತಿ ಮೊಯಿಲಿ, ಪ್ರದೀಪಕುಮಾರ ಕಲ್ಕೂರ, ವೆಂಕಟೇಶ ರಾವ್, ಹರಿಕೃಷ್ಣ ಪುನರೂರು, ಎಂ. ಬಾಲಕೃಷ್ಣ ಶೆಟ್ಟಿ, ಪಿ.ಸತೀಶ್ ರಾವ್, ಭುವನಾಭಿರಾಮ ಉಡುಪ, ಸಭಾಭವನದ ಮಾಲಕ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತಿತರರಿದ್ದರು.

No comments:

Post a Comment