Saturday, August 18, 2012

ಕಟೀಲು ಅಪಘಾತ :ವಾಸುದೇವ ಉಡುಪ ಸಾವು



ಕಟೀಲು : ಇಲ್ಲಿನ ಅಜಾರಿನಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಬಳಿ ಬಸ್ಸಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ವಾಸುದೇವ ಉಡುಪ(೫೩ವ.) ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕಟೀಲು ದುರ್ಗಾಪರಮೇಶ್ವರೀ ದೇಗುಲದಲ್ಲಿ ಶಾಂತಿವಿಲೇದಾರ ಕೆಲಸ ಮಾಡುತ್ತಿರುವ ವಾಸುದೇವ ಉಡುಪ ಕಳೆದ ಹತ್ತು ವರುಷಗಳಿಂದ ದೇಗುಲದಲ್ಲಿ ಉತ್ಸವ ಅಲ್ಲದೆ ಇತರ ಸಂದರ್ಭದಲ್ಲಿ ದೇವರು ಹೊರುವ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ದೇಗುಲದಲ್ಲಿ ಶಾಂತಿ ಕೆಲಸ ಮುಗಿಸಿ, ಗಿಡಿಗೆರೆ ಬಳಿಯ ಮನೆಗೆ ಹೋಗುತ್ತಿದ್ದಾಗ ಬಸ್ಸು ಡಿಕ್ಕಿ ಹೊಡೆದು ಮೃತಪಟ್ಟರು. ದೇಗುಲದ ಅರ್ಚಕರು, ಸಿಬಂದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

No comments:

Post a Comment