Thursday, September 22, 2011

ಕಟೀಲಿನಲ್ಲಿ ವಿವಿ ಮಟ್ಟದ ರಂಗಕಲಾ ಸ್ಪರ್ಧೆ

ಕಟೀಲು : ಕಲೆಯಲ್ಲಿ ಶಿವ, ಸರಸ್ವತೀ, ಗಣಪ ಹೀಗೆ ದೇವರನ್ನು ಕಾಣುವ, ಕಲೆಯನ್ನು ಆರಾಧಿಸುವ ಸಂಸ್ಕೃತಿ ನಮ್ಮದು. ಪಾಶ್ಚಾತ್ಯ ಸಂಗೀತ ಕೆರಳಿಸುವಂತಹದ್ದಾದರೆ, ನಮ್ಮ ದೇಶದ ಕಲೆ ಮನಸ್ಸನ್ನು ಅರಳಿಸುವಂತಹದ್ದು ಎಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಅವರು ಗುರುವಾರ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಸಹಯೋಗದಲ್ಲಿ ನಡೆಯುವ ೨ದಿನಗಳ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರಂಗಕಲಾ ಸ್ಪರ್ಧೆ -ರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ದೇಗುಲದ ಆಡಳಿತಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಮೊಕ್ತೇಸರ ವಾಸುದೇವ ಆಸ್ರಣ್ಣ, ಮಂಗಳ ಗಂಗೋತ್ರಿಯ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಡಾ.ಎ.ಎಂ.ಎ.ಖಾದರ್, ಉಪನ್ಯಾಸಕಾರದ ಜಗದೀಶ್ಚಂದ್ರ ಕೆ.ಕೆ, ವಿಜಯ ವಿ., ಕಟೀಲು ಪ.ಪೂ.ಕಾಲೇಜಿನ ಪ್ರಾಚಾರ‍್ಯ ಜಯರಾಮ ಪೂಂಜ ಮತ್ತಿತರರಿದ್ದರು.
ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸ ಸುರೇಶ್ ವಂದಿಸಿದರು. ತೀಕ್ಷಿತಾ ಮತ್ತು ಸೌಮ್ಯ ಕಾರ‍್ಯಕ್ರಮ ನಿರೂಪಿಸಿದರು.
ವಿವಿಯಲ್ಲಿ ಸುಮಾರು ೧೯೭ರಷ್ಟು ಕಾಲೇಜುಗಳಿದ್ದು, ೧೬ ಕಾಲೇಜು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ.
ವಿವಿ ರಂಗಕಲಾ ಸ್ಪರ್ಧೆ : ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ
ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ರಂಗಕಲಾ ಸ್ಪರ್ಧೆಯಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಪ್ರಹಸನ : ಆಳ್ವಾಸ್ ಮೂಡುಬಿದ್ರೆ(ಪ್ರಥಮ), ಉಜಿರೆ ಎಸ್‌ಡಿಎಂ(ದ್ವಿತೀಯ)
ಮೈಮ್ : ಆಳ್ವಾಸ್ ಮೂಡುಬಿದ್ರೆ(ಪ್ರಥಮ), ಹಳೆಯಂಗಡಿ ಸರಕಾರಿ ಕಾಲೇಜು(ದ್ವಿತೀಯ)
ಮಿಮಿಕ್ರಿ : ಆಳ್ವಾಸ್ ಮೂಡುಬಿದ್ರೆ(ಪ್ರಥಮ), ವಿವಿ ಕಾಲೇಜು ಮಂಗಳೂರು(ದ್ವಿತೀಯ)
ಏಕಾಂಕ : ಆಳ್ವಾಸ್ ಮೂಡುಬಿದ್ರೆ(ಪ್ರಥಮ), ಉಜಿರೆ ಎಸ್‌ಡಿಎಂ(ದ್ವಿತೀಯ)
ಪ್ರಶಸ್ತಿ ವಿತರಣೆಯಲ್ಲಿ ಎಂ.ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಹೆಗ್ಡೆ ಮತ್ತಿತರರಿದ್ದರು.


No comments:

Post a Comment