Monday, September 12, 2011

ಮಕ್ಕಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ




ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ- ರಘುಪತಿ ಭಟ್
ಸಂಗೀತ, ನಾಟ್ಯ, ಮಾತು, ಬಣ್ಣಗಾರಿಕೆಯಂತಹವುಗಳನ್ನು ಕಲಿಸುವ ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಸಂಸ್ಕಾರವನ್ನೂ ನೀಡಿದಂತಾಗುತ್ತದೆ ಎಂದು ಉಡುಪಿಯ ಶಾಸಕ, ಯಕ್ಷಶಿಕ್ಷಣ ಟ್ರಸ್ಟ್‌ನ ರಘುಪತಿ ಭಟ್ ಹೇಳಿದರು.
ಅವರು ಕಟೀಲು ದುರ್ಗಾ ಮಕ್ಕಳ ಮೇಳದ ವಾರ್ಷಿಕೋತ್ಸವದಲ್ಲಿ ಮಕ್ಕಳ ಯಕ್ಷಗಾನ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.
ಯಕ್ಷಗಾನ ಕಲಾವಿದ ಹೊಸಹಿತ್ತಲು ಮಹಾಲಿಂಗ ಭಟ್, ಡಾ.ನಾರಾಯಣ ಶೆಟ್ಟಿಯವರನ್ನು ಸಂಮಾನಿಸಲಾಯಿತು. ಸ್ಪರ್ಧೆಯ ಬಗ್ಗೆ ತೀರ್ಪುಗಾರರ ಪರವಾಗಿ ಕೆ.ಎಲ್.ಕುಂಡಂತಾಯ ಅಭಿಪ್ರಾಯ ವ್ಯಕ್ತಪಡಿಸಿದರು.

ದುಬೈನ ಉದ್ಯಮಿ ಕಳತ್ತೂರು ಶೇಖರ ಶೆಟ್ಟಿ, ಮುಂಬೈನ ಬಂಟರ ಸಂಘದ ಐಕಳ ಹರೀಶ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಪ್ರಸಾದ ಶೆಟ್ಟಿ, ಕೋಮಜಾಲುಗುತ್ತು ಪ್ರಭಾಕರ ಶೆಟ್ಟಿ, ಕಲಾಜಗತ್ತಿನ ತೋನ್ಸೆ ವಿಜಯಕುಮಾರ ಶೆಟ್ಟಿ, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಮುಖ್ಯ ಶಿಕ್ಷ ಸುರೇಶ್ ಭ್ಟ, ಮಾಲತಿ, ಯಕ್ಷಬೋಧಿನಿ ಟ್ರಸ್ಟ್‌ನ ಬಜಪೆ ರಾಘವೇಂದ್ರ ರಾವ್ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ವಂದಿಸಿದರು.
ಬಳಿಕ ಮಕ್ಕಳಮೇಳದ ಕಲಾವಿದರಿಂದ ಯಕ್ಷಗಾನ ನಡೆಯಿತು.


ಪಣಂಬೂರು, ವಿದ್ಯಾದಾಯಿನಿಗಳಿಗೆ ಪ್ರಶಸ್ತಿ
ದುರ್ಗಾ ಮಕ್ಕಳ ಮೇಳ ಆಯೋಜಿಸಿದ ಮಕ್ಕಳ ತೆಂಕು ತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಪಣಂಬುರು ಮಕ್ಕಳ ಮೇಳ ಪ್ರದರ್ಶಿಸಿದ ಭಕ್ತ ಸುಧನ್ವ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ ವೀರಬಬ್ರುವಾಹನ ಪ್ರದರ್ಶಿಸಿದ ಸುರತ್ಕಲ್ ವಿದ್ಯಾದಾಯಿನಿ ಯಕ್ಷಕಲಾ ಮಕ್ಕಳ ಮೇಳ ದ್ವಿತೀಯ ಪ್ರಶಸ್ತಿಯನ್ನು ಪಡೆದಿದೆ.
ಪಣಂಬೂರು ಮಕ್ಕಳ ಮೇಳದಲ್ಲಿ ಸುಧನ್ವ ಪಾತ್ರಧಾರಿ ಮಿಲನ್ ಕುಮಾರ್ (ಪುಂಡು ವೇಷ), ಅರ್ಜುನ ವೇಷಧಾರಿ ಶಿವಾನಿ(ರಾಜ ವೇಷ), ಅನುಸಾಲ್ವ ವೇಷಧಾರಿ ಶಿವತೇಜ ಐತಾಳ್(ಬಣ್ಣದ ವೇಷ) ವೈಯಕ್ತಿಕ ಪ್ರಶಸ್ತಿ ಪಡೆದರೆ, ಕದ್ರಿ ಬಾಲಯಕ್ಷಕೂಟದ ಪಾರ್ವತಿ ಪಾತ್ರಧಾರಿ ಸ್ವಾತಿ ದೇವಾಡಿಗ(ಸ್ತ್ರೀ ವೇಷ), ವನಪಾಲಕನಾದ ನಿಖಿಲ್ ಕುಮಾರ್(ಹಾಸ್ಯ), ನಂದಿ ಮಾಡಿದ ಶ್ರೀವತ್ಸ ಕುಮಾರ್(ಪೋಷಕ ಪಾತ್ರ) ಪ್ರಶಸ್ತಿ ಪಡೆದಿದ್ದಾರೆ.

No comments:

Post a Comment