Friday, July 27, 2012

ಕಟೀಲಿನಲ್ಲಿ ಮಳೆಗಾಗಿ ಪರ್ಜನ್ಯಜಪ

ಕಟೀಲು : ಮುಜರಾಯಿ ಇಲಾಖೆಯ ಸೂಚನೆಯಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ೫೦೮ ಬೊಂಡಾಭಿಷೇಕ, ಪರ್ಜನ್ಯ ಜಪ ಪಠಣ, ಪೂಜೆ ನಡೆಯಿತು. ಮೊಕ್ತೇಸರ ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಪ್ರಬಂಧಕ ವಿಶ್ವೇಶ್ವರ ರಾವ್ ಮತ್ತಿತರರಿದ್ದರು.
೨೦೦೧ ಹಾಗೂ ೨೦೦೨ರಲ್ಲೂ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದ್ದ ಸಂದರ್ಭ ಸುಮಾ ವಸಂತ್ ಮುಜರಾಯಿ ಸಚಿವೆಯಾಗಿದ್ದಾಗ ರಾಜ್ಯಕ್ಕೆ ಬರಗಾಲ ಬಂದ ಸಂದರ್ಭ ಇದೇ ರೀತಿ ಎಲ್ಲ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆ, ಪರ್ಜನ್ಯ ಜಪ, ಯಾಗ ನಡೆಸುವಂತೆ ಆದೇಶ ನೀಡಲಾಗಿತ್ತು. ಆ ಸಂದರ್ಭ ಮೂರು ಸಾವಿರ ರೂ.ಗಿಂತ ಹೆಚ್ಚು ಖರ್ಚಿಲ್ಲದಂತೆ ಪೂಜೆ ನಡೆಸಲು ಸೂಚಿಸಲಾಗಿತ್ತು. ಈ ಬಾರಿ ಆದೇ ರೀತಿಯ ಆದೇಶ ಮಾಡಲಾಗಿದ್ದು, ಖರ್ಚಿನಲ್ಲಿ ಮಾತ್ರ ಐದು ಸಾವಿರ ರೂ.ಗಳಿಗೆ ಏರಿಸಲಾಗಿದೆ. ಈ ಖರ್ಚನ್ನು ದೇಗುಲಗಳೇ ಭರಿಸಲು ಸೂಚಿಸಲಾಗಿತ್ತು.

No comments:

Post a Comment