Tuesday, February 15, 2011

ರಾಜ್ಯಮಟ್ಟದ ಸಂಸ್ಕೃತ ಸಂಶೋಧನ ಕಾರ್ಯಾಗಾರ

ಕಟೀಲಿನ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ಸಿರಸಿಯ ಸಂಸ್ಕೃತ ಶೋಧ ಸಂಸ್ಥಾನಗಳ ಆಶ್ರಯದಲ್ಲಿ ದಯಾನಂದ ಶಾನಭೋಗರ ಸಂಸ್ಮರಣೆ ನಿಮಿತ್ತ ರಾಜ್ಯ ಸ್ತರೀಯ ಸಂಸ್ಕೃತ ಸಂಶೋಧನ ಕಾರ್‍ಯಾಗಾರ ನಡೆಯಿತು.ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಬೆಂಗಳೂರು ವಿವಿಯ ಬಿ.ವಿ.ಶಶಿರೇಖಾ, ಮೈಸೂರು ವಿವಿಯ ವೀರಭದ್ರ ಸ್ವಾಮಿ, ಬಿ.ಎ.ದೊಡ್ಡಮನಿ, ಡಾ.ಮಹಾದೇವಯ್ಯ, ಧಾರವಾಡದ ಕೆ.ಬಿ.ಅರ್ಚಕ, ಡಾ.ಎಂ.ಎನ್.ಜೋಷಿ ಉಪನ್ಯಾಸ ನೀಡಿದರು. ಡಾ.ಜಿ.ಎನ್.ಭಟ್, ಡಾ.ಎಂ.ಜಿ.ಹೆಗಡೆ, ಪ್ರಾಚಾರ್‍ಯ ನಾಗರಾಜ, ಪದ್ಮನಾಭ ಮರಾಠೆ ಮತ್ತಿತರರಿದ್ದರು.ಚಿತ್ರ ಈಮೆಲ್

No comments:

Post a Comment