
ಕಟೀಲು ದೇಗುಲಕ್ಕೆ ಜನವರಿ 17ರಂದು ಯುವ ಚಿತ್ರ ನಟ ಕಾರ್ತಿಕ್ ಶೆಟ್ಟಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.






ವಿದ್ಯಾರ್ಥಿ ಜೀವನದಲ್ಲಿ ಪಾಠ ಪ್ರವಚನಗಳ ಜೊತೆಗೆ ಬದುಕಿನ ಪಾಠವನ್ನು ಕಲಿಸಲು ಎನ್ಎಸ್ಎಸ್ ಚಟುವಟಿಕೆ ಪೂರಕ ಎಂದು ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.ಉಲ್ಲಂಜೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ತಾ.೨೪ರಿಂದ ತಾ.೩೦ರವರೆಗೆ ಕಟೀಲು ಶ್ರೀ ದು.ಪ.ದೇ.ಪದವಿ ಕಾಲೇಜಿನ ಎನ್ಎಸ್ಎಸ್ ಘಟಕಗಳ ವಾರ್ಷಿಕ ಶಿಬಿರ ನಡೆಯಲಿದೆ.ಸ್ಥಳೀಯ ರಸ್ತೆಗಳ ರಿಪೇರಿ, ಶೌಚಾಲಯಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿದೆ ಎಂದು ಯೋಜನಾಧಿಕಾರಿ ಕೇಶವ ಎಚ್. ತಿಳಿಸಿದ್ದಾರೆ.