ಕಟೀಲು ಪ್ರೌಢಶಾಲೆಯಲ್ಲಿ ಉಪಪ್ರಾಚಾರ್ಯರಾಗಿದ್ದ ಸುರೇಶ್ ಭಟ್ ನಿವೃತ್ತರಾದ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸುರೇಶ ಭಟ್ ಮತ್ತು ಪತ್ನಿ ಶಿಕ್ಷಕಿ ಮಂಗಳಾ ಎಸ್ ಭಟ್ರನ್ನು ಸಂಮಾನಿಸಲಾಯಿತು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಪದವಿ ಕಾಲೇಜು ಪ್ರಾಚಾರ್ಯ ಬಾಲಕೃಷ್ಣ ಶೆಟ್ಟಿ, ಪ್ರಾಥಮಿಕ ಶಾಲೆಯ ಮಾಲತಿ ವೈ, ಕೆ.ವಿಶೆಟ್ಟಿ, ಸಾಯಿನಾಥ ಶೆಟ್ಟಿ ಮತ್ತಿತರರಿದ್ದರು.
Monday, March 31, 2014
Sunday, March 9, 2014
Monday, February 24, 2014
Friday, February 14, 2014
ಕಟೀಲಿನಲ್ಲಿ ನಂದಿನಿ ಅವತರಣ ದಿನ
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಂದಿನೀ ಅವತರಣ ದಿನದ ಅಂಗವಾಗಿ ಶುಕ್ರವಾರ ಶ್ರೀ ದೇವಿಗೆ ವಿಶೇಷ ಪೂಜೆ, ಸೀಯಾಳಾಭಿಷೇಕ, ಸಾವಿರ ಲೀಟರ್ ಹಾಲಿನ ಕ್ಷೀರಪಾಯಸ ಸೇವೆ ನಡೆಯಿತು. ಬೆಂಗಳೂರು ದೇವನಹಳ್ಳಿಯ ಮುನಿಯಪ್ಪ ಎಂಬ ಹೂವಿನ ವ್ಯಾಪಾರಿ ಇಡೀ ದೇಗುಲವನ್ನು ಹೂವಿನ ಅಲಂಕಾರದಿಂದ ಸುಂದರಗೊಳಿಸಿದ್ದರು.
ದಿ.ಕೃಷ್ಣ ಆಸ್ರಣ್ಣರ ಸಂಸ್ಮರಣಾರ್ಥವಾಗಿ ಶ್ರೀ ದುರ್ಗಾ ಮಕ್ಕಳ ಮೇಳದ ಬಾಲಕಲಾವಿದರಿಂದ ಯಕ್ಷಗಾನ ಗಾನ ವೈಭವ ಮನಸೂರೆಗೊಂಡಿತು. ಬಳಿಕ ಇಂದ್ರಜಿತು ಕಾಳಗ ಯಕ್ಷಗಾನ ಬಯಲಾಟ ನಡೆಯಿತು.
ಮಂಗಳೂರಿನ ದುರ್ಗಾಫೆಸಿಲಿಟಿ ಸಂಸ್ಥೆಯ ಬೊಂಡಾಲ ಸಚ್ಚಿದಾನಂದ ಶೆಟ್ಟಿ ದೇಗುಲಕ್ಕೆ ಸ್ವಚ್ಛತಾಯಂತ್ರವನ್ನು ಕಾಣಿಕೆಯಾಗಿ ದೇಗುಲಕ್ಕೆ ನೀಡಿದರು. ಈ ಸಂದರ್ಭ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ ಮತ್ತಿತರರಿದ್ದರು.
ದಿ.ಕೃಷ್ಣ ಆಸ್ರಣ್ಣರ ಸಂಸ್ಮರಣಾರ್ಥವಾಗಿ ಶ್ರೀ ದುರ್ಗಾ ಮಕ್ಕಳ ಮೇಳದ ಬಾಲಕಲಾವಿದರಿಂದ ಯಕ್ಷಗಾನ ಗಾನ ವೈಭವ ಮನಸೂರೆಗೊಂಡಿತು. ಬಳಿಕ ಇಂದ್ರಜಿತು ಕಾಳಗ ಯಕ್ಷಗಾನ ಬಯಲಾಟ ನಡೆಯಿತು.
ಮಂಗಳೂರಿನ ದುರ್ಗಾಫೆಸಿಲಿಟಿ ಸಂಸ್ಥೆಯ ಬೊಂಡಾಲ ಸಚ್ಚಿದಾನಂದ ಶೆಟ್ಟಿ ದೇಗುಲಕ್ಕೆ ಸ್ವಚ್ಛತಾಯಂತ್ರವನ್ನು ಕಾಣಿಕೆಯಾಗಿ ದೇಗುಲಕ್ಕೆ ನೀಡಿದರು. ಈ ಸಂದರ್ಭ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ ಮತ್ತಿತರರಿದ್ದರು.
Sunday, January 19, 2014
ಅಮ್ಮನೆಡೆಗೆ ಸಹಸ್ರ ಸಹಸ್ರ ಭಕ್ತರ ನಡಿಗೆ
ಭಾನುವಾರ ಮರವೂರಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಭಕ್ತರು ಕಾಲ್ನಡಿಗೆಯಲ್ಲಿ ’ಅಮ್ಮನೆಡೆಗೆ ನಮ್ಮ ನಡಿಗೆ’ ಎಂಬ ಘೋಷದೊಂದಿಗೆ ಸಾಗಿಬಂದು ಪುನೀತರಾದರು. ಅನೇಕ ಭಜನಾ ತಂಡಗಳಲ್ಲಿ ದೇವರ ಹಾಡುಗಳನ್ನು ಹಾಡುತ್ತ, ಕುಣಿಯುತ್ತ ಭಕ್ತರು ಸಾಗಿಬಂದಂತೆ ಕಟೀಲಿನಲ್ಲಿ ಅರ್ಚಕರಾದ ಆಸ್ರಣ್ಣ ಬಂಧುಗಳು ಭಕ್ತರನ್ನು ಸ್ವಾಗತಿಸಿ, ಪ್ರಸಾದ ನೀಡಿದರು.
Friday, December 6, 2013
ಧ್ವಜಸ್ಥಂಭ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಕೊಡೆತ್ತೂರು ಮಾಗಂದಡಿ ಕುಟುಂಬಿಕರು ಕೊಡುಗೆಯಾಗಿ ನೀಡುವ ಧ್ವಜಸ್ತಂಭಕ್ಕೆ ಸುಳ್ಯದ ಮಿತ್ತೂರು ಉಬರಡ್ಕದ ರಾಮಮೋಹನ ಭಟ್ ಎಂಬವರ ತೋಟದಿಂದ ಮರವನ್ನು ವೈಭವದ ಮೆರವಣಿಗೆಯಲ್ಲಿ ಶುಕ್ರವಾರ ತರಲಾಯಿತು.
ಡಿ.5ರಂದು ಹೊರಟ ಮೆರವಣಿಗೆ ಪುತ್ತೂರು, ಬಂಟ್ವಾಳ, ಮಂಗಳೂರು ಮೂಲ್ಕಿ ತಲುಪಿ, ಶುಕ್ರವಾರ ಡಿ.6ರ ಸಂಜೆ ಹೊತ್ತಿಗೆ ಕಟೀಲಿಗೆ ತರಲಾಯಿತು.
ಸುಮಾರು ೫ಲಕ್ಷ ರೂ. ವೆಚ್ಚದ ಈ ಮರದಿಂದ ಮುಂದಿನ ಎರಡು ವರ್ಷದೊಳಗೆ ಹೊಸ ಧ್ವಜಸ್ಥಂಭವನ್ನು ನಿರ್ಮಿಸಲಾಗುವುದು. ಈಗಿರುವ
ಧ್ವಜಸ್ಥಂಭವನ್ನು ೧೯೭೦ರಲ್ಲಿ ಪ್ರತಿಷ್ಟಾಪಿಸಲಾಗಿದ್ದು ಅದನ್ನು ಪುತ್ತೂರು ಪಾಣಾಜೆಯಿಂದ ತರಲಾಗಿತ್ತು. ಈಗಿನದ್ದು ಬೆಳ್ಳಿಯ ಧ್ವಜಸ್ತಂಭವಾಗಿದ್ದು ಮುಂದಕ್ಕೆ ಹೊಸ ಧ್ವಜಸ್ಥಂಭಕ್ಕೆ ಭಕ್ತರ ಸಹಕಾರದಿಂದ ಬೆಳ್ಳಿಯ ತಗಡಿಗೆ ೪.೫ಕೆಜಿ ಚಿನ್ನವನ್ನು ಹೊದಿಸಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ದೇಗುಲದ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಸಹೋದರರಾದ ಲಕ್ಷ್ಮೀನಾರಾಯಣ, ವೇಂಕಟರಮಣ, ಅನಂತಪದ್ಮನಾಭ, ಕಮಲಾದೇವಿ ಪ್ರಸಾದ, ಶ್ರೀಹರಿನಾರಾಯಣ, ಕುಮಾರ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಕೊಡೆತ್ತೂರು ಮಾಗಂದಡಿ ಕುಟುಂಬದ ಪ್ರಮುಖರಾದ ಬಿ.ಆರ್.ಶೆಟ್ಟಿ, ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ
ಡಿ.5ರಂದು ಹೊರಟ ಮೆರವಣಿಗೆ ಪುತ್ತೂರು, ಬಂಟ್ವಾಳ, ಮಂಗಳೂರು ಮೂಲ್ಕಿ ತಲುಪಿ, ಶುಕ್ರವಾರ ಡಿ.6ರ ಸಂಜೆ ಹೊತ್ತಿಗೆ ಕಟೀಲಿಗೆ ತರಲಾಯಿತು.
ಸುಮಾರು ೫ಲಕ್ಷ ರೂ. ವೆಚ್ಚದ ಈ ಮರದಿಂದ ಮುಂದಿನ ಎರಡು ವರ್ಷದೊಳಗೆ ಹೊಸ ಧ್ವಜಸ್ಥಂಭವನ್ನು ನಿರ್ಮಿಸಲಾಗುವುದು. ಈಗಿರುವ ಧ್ವಜಸ್ಥಂಭವನ್ನು ೧೯೭೦ರಲ್ಲಿ ಪ್ರತಿಷ್ಟಾಪಿಸಲಾಗಿದ್ದು ಅದನ್ನು ಪುತ್ತೂರು ಪಾಣಾಜೆಯಿಂದ ತರಲಾಗಿತ್ತು. ಈಗಿನದ್ದು ಬೆಳ್ಳಿಯ ಧ್ವಜಸ್ತಂಭವಾಗಿದ್ದು ಮುಂದಕ್ಕೆ ಹೊಸ ಧ್ವಜಸ್ಥಂಭಕ್ಕೆ ಭಕ್ತರ ಸಹಕಾರದಿಂದ ಬೆಳ್ಳಿಯ ತಗಡಿಗೆ ೪.೫ಕೆಜಿ ಚಿನ್ನವನ್ನು ಹೊದಿಸಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ದೇಗುಲದ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಸಹೋದರರಾದ ಲಕ್ಷ್ಮೀನಾರಾಯಣ, ವೇಂಕಟರಮಣ, ಅನಂತಪದ್ಮನಾಭ, ಕಮಲಾದೇವಿ ಪ್ರಸಾದ, ಶ್ರೀಹರಿನಾರಾಯಣ, ಕುಮಾರ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಕೊಡೆತ್ತೂರು ಮಾಗಂದಡಿ ಕುಟುಂಬದ ಪ್ರಮುಖರಾದ ಬಿ.ಆರ್.ಶೆಟ್ಟಿ, ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ
Sunday, December 1, 2013
ಕಟೀಲು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ
ಕಟೀಲು : ನಮ್ಮ ಪುರಾಣ, ಇತಿಹಾಸ, ಸಂಸ್ಕೃತಿಗಳನ್ನು ಮಕ್ಕಳಿಗೆ ತಿಳಿಸುವ ಜೊತೆಗೆ ಸಂಸ್ಕಾರವಂತರನ್ನಾಗಿ ರೂಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಕಟೀಲು ದೇವಳದ ಅರ್ಚಕ ಕಮಲದೇವಿ ಪ್ರಸಾದ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕ್ ಪ್ರಬಂಧಕ ರತ್ನಾಕರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಜಲಜ.ಎಸ್, ಮೆನ್ನಬೆಟ್ಟು ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಶಾಲೆಯ ಹಳೆ ವಿದ್ಯಾರ್ಥಿಗಳಾದ ಕಿರಣ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಉಲ್ಲಂಜೆ ಮತ್ತು ಪದ್ಮನೂರು ಕ್ಲಸ್ಟರ್ ಸಿ.ಆರ್.ಪಿ. ಜಗದೀಶ್ ನಾವಡ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೆಂಕಟರಮಣ ಹೆಗ್ಡೆ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರಾದ ಸರೋಜಿನಿ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ವೈ ಮಾಲತಿ ವಾರ್ಷಿಕ ವರದಿ ನೀಡಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕ್ ಪ್ರಬಂಧಕ ರತ್ನಾಕರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಜಲಜ.ಎಸ್, ಮೆನ್ನಬೆಟ್ಟು ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಶಾಲೆಯ ಹಳೆ ವಿದ್ಯಾರ್ಥಿಗಳಾದ ಕಿರಣ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಉಲ್ಲಂಜೆ ಮತ್ತು ಪದ್ಮನೂರು ಕ್ಲಸ್ಟರ್ ಸಿ.ಆರ್.ಪಿ. ಜಗದೀಶ್ ನಾವಡ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೆಂಕಟರಮಣ ಹೆಗ್ಡೆ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರಾದ ಸರೋಜಿನಿ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ವೈ ಮಾಲತಿ ವಾರ್ಷಿಕ ವರದಿ ನೀಡಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಪದವೀಪೂರ್ವ ಕಾಲೇಜು ಪ್ರತಿಭಾ ಪುರಸ್ಕಾರ
ಕಟೀಲು : ಇಂದಿನ ನಗರದ ಶಿಕ್ಷಣ ಟ್ಯೂಷನ್ ಮತ್ತು ಟೆನ್ಶನ್ ಸಹಿತವಾಗಿಯೇ ಇದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಸ್ಕಾರಭರಿತ ನೈತಿಕ ಶಿಕ್ಷಣ ಸಿಗುತ್ತಿದೆ ಆಗಬೇಕು ಎಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಮ್.ಬಿ. ಪುರಾಣಿಕ್, ಕಟೀಲು ದೇವಳ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ,ಶಾಲಾ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಈಶ್ವರ್ ಕಟೀಲ್, ವಿದ್ಯಾರ್ಥಿ ನಾಯಕಿ ಅನುಜ್ಞಾ ಭಟ್ ಮತ್ತಿತರರಿದ್ದರು. ಯುವಜನ ಸೇವಾ ಮತ್ತು ಮೀನುಗಾರಿಕೆ ಸಚಿವ ಕೆ ಅಭಯಚಂದ್ರ ಜೈನ್ ಹಾಗೂ ನಿವೃತ್ತ ಉಪಪ್ರಾಚಾರ್ಯ, ಸಾಹಿತಿ ಉಮೇಶ್ ರಾವ್ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಶಾಲಾ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಪ್ರಾಚಾರ್ಯ ಜಯರಾಮ ಪೂಂಜ ಸ್ವಾಗತಿಸಿದರು. ವಿಜಯಾ ಆಳ್ವ ವಂದಿಸಿದರು. ಭಾರತಿ ಶೆಟ್ಟಿ, ಕವಿತಾ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.
Tuesday, November 26, 2013
Subscribe to:
Posts (Atom)










