
ನವರಾತ್ರಿಯ ದಿನಗಳಲ್ಲಿ ಹತ್ತಾರು ವಾದ್ಯಗಳ ನಿನಾದ ಕಟೀಲು ದೇಗುಲದ ಒಳಗೆ ಕೇಳಬಹುದು, ನೋಡಬಹುದು. ಹಿಂದೆ ವಾದ್ಯಗಾರರ ಸಂಖ್ಯೆ ಮೂವತ್ತು ನಲವತ್ತು ಇರುತ್ತಿತ್ತಂತೆ. ದೇಗುಲದ ಆದಾಯ ಹೆಚ್ಚಿದೆ. ಆದರೆ ವೈಭವದ ವೆಚ್ಚಕ್ಕೆ ಕಡಿವಾಣ ಹಾಕಿ ಹಬ್ಬದ ವೈಭವವನ್ನು ಕಡಿಮೆ ಮಾಡುವ ಕಾರ್ಯವನ್ನು ಆಡಳಿತಾಧಿಕಾರಿಗಳು ಮಾಡಿದ್ದಾರೆ! ಪರಿಣಾಮ ವಾದ್ಯಗಳ ಸಂಖ್ಯೆ ಹತ್ತಕ್ಕೆ ಇಳಿದಿದೆ!

ಕಟೀಲಿನಲ್ಲಿ ಅ.15ರಂದು ಬೆಂಗಳೂರಿನ ಅನಿರುದ್ಧ ಬಳಗದಿಂದ ಲಯಸುನಾದ ಕಾರ್ಯಕ್ರಮ ಜರಗಿತು.
ಆದರೆ ಯಾಕೋ ಸಭಾಂಗಣ ಖಾಲಿ.

ಕಟೀಲು ದೇಗುಲದ ಗರ್ಭ ಗುಡಿಯ ಸುತ್ತ ದೀಪಾಲಂಕಾರ.
No comments:
Post a Comment